ಅಗ್ನಿಸಾಕ್ಷಿ ನಟ ವಿಜಯ್ ಸೂರ್ಯ ಮಗನ ಕ್ಯೂಟ್ ವೀಡಿಯೊ

0 1

ಕನ್ನಡ ಕಿರುತೆರೆ ಲೋಕದಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟ ವಿಜಯ್‌ ಸೂರ್ಯ ಈಗ ಪಕ್ಕಾ ಫ್ಯಾಮಿಲಿ ಮ್ಯಾನ್‌. ಮಗ ಸೋಹನ್ ಸೂರ್ಯ ಮತ್ತು ಪತ್ನಿ ಚೈತ್ರಾ ಜೊತೆ ಅವರು ಕಾಲ ಕಳೆಯುತ್ತಿದ್ದಾರೆ. ಸಿನಿಮಾ ಮತ್ತು ಧಾರಾವಾಹಿ ಕೆಲಸಗಳ ನಡುವೆಯೂ ಕುಟುಂಬದವರ ಜೊತೆ ಕಾಲ ಕಳೆಯಲು ಕೆಲವು ಸಮಯ ಮೀಸಲಿಡುತ್ತಿದ್ದಾರೆ. ಇತ್ತೀಚೆಗೆ ಮಗನ ಜೊತೆ ಅವರು ಕ್ಲಿಕ್ಕಿಸಿಕೊಂಡಿರುವ ಕೆಲವು ಫೋಟೋಗಳು ಸಖತ್‌ ಕ್ಯೂಟ್‌ ಆಗಿವೆ. ಹಾಗೂ ಅದೇ ರೀತಿ ವಿಜಯ್ ಸೂರ್ಯ ಅವರ ಮಗನ ಒಂದು ವಿಡಿಯೋ ಕೂಡಾ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ವಿಜಯ್ ಸೂರ್ಯ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಮಗನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸೋಹನ್‌ ಫೋಟೋಗಳು ಸಾಕಷ್ಟು ವೈರಲ್‌ ಆಗುತ್ತಲೇ ಇರುತ್ತದೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಮನೆಮಾತಾದ ನಟ ಗುಳಿಕೆನ್ನೆ ಚೆಲುವ ವಿಜಯ್‌ ಸೂರ್ಯ ಈಗ ಪ್ರೇಮಿಗಳ ದಿನದಂದು ವಿಜಯ್‌ ಸೂರ್ಯ-ಚೈತ್ರಾ ವಿವಾಹವಾಗಿ ವಿಜಯ್ ಸೂರ್ಯ ಈಗ ಪಕ್ಕಾ ಫ್ಯಾಮಿಲಿ ಮ್ಯಾನ್‌ ಆಗಿದ್ದಾರೆ. ವಿಜಯ್ ಸೂರ್ಯ ಅವರ ಪತ್ನಿ ಚೈತ್ರಾ ಅವರ ದೂರದ ಸಂಬಂಧಿಯಂತೆ. ಮನೆಯವರ ಸಮ್ಮುಖದಲ್ಲಿ ವಿಜಯ್​ ಸೂರ್ಯ ಅರೇಂಜ್​ ಮ್ಯಾರೇಜ್​ ಆಗಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗಿದೆ.

ಕಲರ್ಸ್​​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಚಿತ್ರದಲ್ಲಿ ಸಿದ್ಧಾರ್ಥ ಹೆಸರಿನ ಪಾತ್ರದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ಅವರು ವಿಜಯ್​ ಎನ್ನುವುದಕ್ಕಿಂತ ಸಿದ್ಧಾರ್ಥ್​​ ಹೆಸರಿನಲ್ಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಅವರು ಅಪಾರ ಅಭಿಮಾನಿಗಳು ಹೊಂದಿದ್ದಾರೆ. ವಿಜಯ್​ ಸೂರ್ಯ ಅವರು ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಗುರುತಿಸಿಕೊಂಡವರು. ಇಷ್ಟಕಾಮ್ಯ, ಕದ್ದು ಮುಚ್ಚಿ ಚಿತ್ರಗಳಲ್ಲಿ ವಿಜಯ್ ಸೂರ್ಯ ಬಣ್ಣ ಹಚ್ಚಿದ್ದಾರೆ.

ವಿಜಯ್ ಸೂರ್ಯ ಎಂಬ ಗುಳಿಕೆನ್ನೆ ಹುಡುಗ ಮೂಲತಃ ಮಾಡೆಲಿಂಗ್ ಮಾಡ್ಕೊಂಡಿದ್ದವರು. ಈತ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೀರೋ ಚಂದನ್ ಗೆಳೆಯನಾಗಿ, ಲಚ್ಚಿಗಾಗಿ ಹಂಬಲಿಸುವ ಹುಡುಗನಾಗಿ ಕಾಣಿಸಿಕೊಂಡಾಗ ಈತನ ಬಗ್ಗೆ ಮರುಕ ಪಟ್ಟವರೇ ಹೆಚ್ಚು. ಆಮೇಲೆ ಅಗ್ನಿಸಾಕ್ಷಿ ಸೀರಿಯಲ್ಗೆ ಎಂಟ್ರಿ ಕೊಟ್ಟು, ಕ್ರಮೇಣ ಲವಲವಿಕೆ ಹುಡುಗನಾಗಿ ಚಿಗಿತುಕೊಳ್ಳುತ್ತಾ ಸಾಗಿ ಅದ್ಭುತ ರೊಮ್ಯಾಂಟಿಕ್ ಗಂಡನಾಗಿ ಬದಲಾದದ್ದು ಹಳೇಯ ಕಥೆ ಅನ್ನೋದು ನಮಗೆಲ್ಲ ತಿಳಿದಿರುವ ವಿಷಯ. ಒಂದು ಟೈಮ್ ನಂತರ ಈ ಸೀರಿಯಲ್ ಜೊತೆಗೆ ತನ್ನ ಕಾಂಟ್ರಾಕ್ಟ್ ಮುಗೀತು ಅಂತ ಹೇಳಿ ಅದರಿಂದ ಹೊರಬಂದರು ವಿಜಯ್ ಸೂರ್ಯ.

ಆಮೇಲೆ ಏನೇನೋ ಸರ್ಕಸ್ ಮಾಡಿ ಸೀರಿಯಲ್ಲೂ ಮುಗೀತು. ಇಷ್ಟೆಲ್ಲಾ ಆದಮೇಲೆ ಅದೇನೋ ಗೊತ್ತಿಲ್ಲ, ಈ ಸೀರಿಯಲ್ ಗೆ ಗುಡ್ ಬೈ ಹೇಳಿದ್ದೇ ಸಕ್ಸಸ್ ಕೂಡಾ ಇವರಿಗೆ ಗುಡ್ ಬೈ ಹೇಳಿತ್ತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಷ್ಟಕಾಮ್ಯ ಸಿನಿಮಾ ಕೂಡಾ ಅಷ್ಟಾಗಿ ಕೈ ಹಿಡೀಲಿಲ್ಲ. ಕದ್ದುಮುಚ್ಚಿ ಬಂದರೂ ಜನ ಮುಖ ತಿರುಗಿಸಿದ್ರು. ಪ್ರೇಮಲೋಕ ಸೀರಿಯಲ್ ಮಾಡಿದರೂ ಅದಕ್ಕೂ ಜನರು ದೂರದಿಂದಲೇ ಕೈ ಮುಗಿದ ಹಾಗಿತ್ತು.

ಹಾಗಂತ ಜನ ಕಂಪ್ಲೀಟ್ ಆಗಿ ವಿಜಯ್ ಸೂರ್ಯ ಅವರನ್ನು ಮರೆತರಾ ಅಂದರೆ ಅದಕ್ಕೆ ಹೌದೂ ಏನ್ನುವ ಹಾಗಿಲ್ಲ. ಏಕೆಂದರೆ ವಿಜಯ್ ಸೂರ್ಯ ತಮ್ಮ ಮಗುವಿನ ತುಂಟಾಟ, ಮುದ್ದಾಟದ ಫೋಟೋ ವೀಡಿಯೋಗಳನ್ನು ಹಾಕಿದರೆ ಜನ ಮುಗಿಬಿದ್ದು ನೋಡ್ತಾರೆ. ಮಗನ ಫೋಟೋ ಶೇರ್ ಮಾಡಿ ಅಂತ ರಿಕ್ವೆಸ್ಟ್ ಗಳು ಕೂಡಾ ಬರ್ತಾನೇ ಇರುತ್ತವಂತೆ. ಮಗ ಹುಟ್ಟಿದ ಮೇಲೆ ನನ್ನ ಬಗ್ಗೆ ಯಾರೂ ಮಾತಾಡಲ್ಲ ಜನ ಅವನ ಬಗ್ಗೆನೇ ಕೇಳುತ್ತಾರೆ ಎಂದು ಇತ್ತೀಚೆಗೆ ಅಷ್ಟೇ ವಿಜಯ್ ಸೂರ್ಯ ಹೇಳಿದ್ದರು. ಮುದ್ದು ಮುದ್ದಾಗಿರುವ ಪುಟಾಣಿ ಪಾಪು, ಜನರ ಗಮನ ಸೆಳೆಯೋದು ಸಹಜಾನೇ. ಅದಕ್ಕೆ ತನ್ನ ಅಭಿಮಾನಿಗಳಿಗೆ ಎಂದು ವಿಜಯ್ ಸೂರ್ಯ ಅವರು ತಮ್ಮ ಮಗನ ಇತ್ತೀಚಿನ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ವಿಜಯ್ ಸೂರ್ಯ ಅವರು ಟೇಬಲ್ ಮೇಲೆ ತಬಲದ ರೀತಿ ಬಾರಿಸುತ್ತಾ ಇದ್ದರೆ ಅವರ ಮಗ ಕೂಡಾ ತಂದೆಯ ಹಾಗೇ ತಾಳಬದ್ದವಾಗಿ ತಬಲಾ ಎಂದುಕೊಂಡು ಟೇಬಲ್ ಮೇಲೆ ತನ್ನ ಪುಟ್ಟ ಕೈಗಳಿಂದ ಬಡಿಯುತ್ತಾ ಆಟವಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಇಲ್ಲಿ ಕಾಣಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.