Actor Sanjay Dutt Life Story: ಬಾಲಿವುಡ್ ನ ಖ್ಯಾತ ನಟ, ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ನಟ ಸಂಜಯ್ ದತ್ ಅವರು ಈಗ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಒಂದು ರೀತಿ ವಿಶೇಷವಾಗಿದೆ. ಬಾಲಿವುಡ್ ನಲ್ಲಿ ಹೀರೋ ಆಗಿದ್ದ ಸಂಜಯ್ ದತ್ ಅವರು ನಿಜ ಜೀವನದಲ್ಲಿ ಹಲವು ತಪ್ಪುಗಳನ್ನು ಮಾಡಿದ್ದಾರೆ, ಜೈಲಿಗೂ ಹೋಗಿ ಬಂದಿದ್ದಾರೆ ಆದರೆ ಇಂದು ಸಂಜಯ್ ದತ್ ಅವರು ತಮ್ಮ ತಪ್ಪುಗಳನ್ನು ತಿದ್ದುಕೊಂಡು ಸರಿದಾರಿಯಲ್ಲಿ ನಡೆಯುತ್ತಿದ್ದಾರೆ.

ನಮಗೆಲ್ಲ ಗೊತ್ತಿರುವ ಹಾಗೆ ಸಂಜಯ್ ದತ್ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತಯಾರಾಗಿ ತೆರೆಕಂಡಿತ್ತು. ರಣಬೀರ್ ಕಪೂರ್ ಅವರು ಆ ಸಿನಿಮಾದಲ್ಲಿ ಸಂಜಯ್ ದತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಜಯ್ ದತ್ ಅವರು ಅಷ್ಟಾಗಿ ಮಾಧ್ಯಮದ ಎದುರು ಕಾಣಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಅವರು ನಿರ್ದೇಶಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಂಡಿದ್ದು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕರಣ್ ಜೋಹರ್ ಅವರು ಸಂಜಯ್ ದತ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ಉತ್ತರಿಸಿ ಮತ್ತೊಂದು ಕುತೂಹಲಕಾರಿ ವಿಚಾರವನ್ನು ಸಂಜಯ್ ದತ್ ಅವರು ಶೇರ್ ಮಾಡಿಕೊಂಡಿದ್ದಾರೆ. ಸಂಜಯ್ ದತ್ ಅವರ ಪತ್ನಿಗೆ ಮಂತ್ರಿ ಜೊತೆಗೆ ಅಫೇರ್ ಇದ್ದಿದ್ದಕ್ಕೆ ತಮ್ಮ ಪತ್ನಿಯನ್ನೇ ಕೊಂ’ದು ಹಾಕಿದ್ದರಂತೆ. ಈ ವಿಷಯ ಕೇಳಿ ನಿಮಗೂ ಶಾಕ್ ಆಗಬಹುದು, ಆದರೆ ಇದರ ಹಿಂದೆ ಬೇರೆಯದೇ ಕಥೆ ಇದೆ.

Actor Sanjay Dutt Life Story

ಸಂಜಯ್ ದತ್ ಅವರು ಈ ರೀತಿ ಮಾಡಿರುವುದು ಈ ಜನ್ಮದಲ್ಲಿ ಅಲ್ಲ, ಹೋದ ಜನ್ಮದಲ್ಲಿ ಅಂತೆ. ಅಶೋಕ ಮಹಾರಾಜರ ಆಳ್ವಿಕೆ ಸಮಯದಲ್ಲಿ ಸಂಜಯ್ ದತ್ ಅವರ ಹಿಂದಿನ ಜನ್ಮದ ಸಮಯವಾಗಿದ್ದು, ಆ ವೇಳೆ ಅವರು ರಾಜನಾಗಿದ್ದರಂತೆ, ಅವರ ಹೆಂಡತಿ ಅವರ ಆಸ್ಥಾನದ ಮಂತ್ರಿಯ ಜೊತೆಗೆ ಅಫೇರ್ ಇಟ್ಟುಕೊಂಡಿದ್ದರಂತೆ. ಅದೇ ಕಾರಣಕ್ಕೆ ತಾವು ಸಾಯಲಿ ಎಂದು ಯುದ್ಧಕ್ಕೆ ಕಳಿಸುತ್ತಿದ್ದರಂತೆ. ಆದರೆ ಪರಾಕ್ರಮಿಯಾಗಿದ್ದ ಸಂಜಯ್ ದತ್ ಅವರು ಯುದ್ಧರಲ್ಲಿ ವಿರೋಧಿಗಳನ್ನು ಸೋಲಿಸಿ ಬಂದಿದ್ದರು..

ಬಳಿಕ ಹೆಂಡತಿಗೆ ಮಂತ್ರಿಯ ಜೊತೆಗೆ ಅಫೇರ್ ಇರುವ ವಿಷಯ ಗೊತ್ತಾಗಿ, ಆಕೆಯನ್ನು ಕೊಂ’ದು ಹಾಕಿದ್ದರಂತೆ. ಆ ಹಿಂದಿನ ಜನ್ಮದ ಶಾಪವೇ ಈಗಲೂ ತಮ್ಮನ್ನು ಕಾಡುತ್ತಿರುವುದು ಎಂದು ಸಂಜಯ್ ದತ್ ಅವರು ಹೇಳಿದ್ದಾರೆ. ಈ ಜನ್ಮದಲ್ಲಿ ತಾಯಿ ನರ್ಗಿಸ್ ದತ್ ಅವರನ್ನು ಮತ್ತು ಮೊದಲ ಪತ್ನಿ ರೀಚಾ ಅವರನ್ನು ಕಳೆದುಕೊಂಡಿದ್ದಕ್ಕೆ ಹಿಂದಿನ ಜನ್ಮದ ಶಾಪವೇ ಕಾರಣ ಎಂದು ಹೇಳಿದ್ದಾರೆ ನಟ ಸಂಜಯ್ ದತ್.

ಹಾಗೆಯೇ ಹಿಂದಿನ ಜನ್ಮದಲ್ಲಿ ಒಳ್ಳೆಯ ಕುಟುಂಬದಲ್ಲಿ ಹುಟ್ಟಿದ ಕಾರಣ ಈಗಲು ಬದುಕಿದ್ದೇನೆ, ಹಿಂದಿನ ಜನ್ಮದ ಕರ್ಮ ಈಗಲೂ ತಮ್ಮನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. ಸಂಜಯ್ ದತ್ ಅವರಿಗೆ 3 ಸಾರಿ ಮದುವೆ ಆಗಿದೆ, ಮೊದಲ ಪತ್ನಿ ರೀಚಾ ಅವರು ಮದುವೆಯಾದ ಎರಡೇ ವರ್ಷಕ್ಕೆ ಬ್ರೇನ್ ಟ್ಯೂಮರ್ ಇಂದ ವಿಧಿವಶರಾದರು, ರಿಯಾ ಪಿಳ್ಳೈ ಅವರೊಡನೆ ಎರಡನೇ ಮದುವೆಯಾಗಿ 2008ರಲ್ಲಿ ವಿಚ್ಛೇದನ ಪಡೆದರು. ಬಳಿಕ ಮಾನ್ಯತಾ ಅವರೊಡನೆ ಮದುವೆಯಾದರು.

Leave a Reply

Your email address will not be published. Required fields are marked *