ಕಾರ್ ಕ್ಲಿನರ್ ಆಗಿದ್ದ ಈ ವ್ಯಕ್ತಿ ಸಿನಿಮಾದಲ್ಲಿ ಅಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಸೂಪರ್ ಸ್ಟಾರ್ ಆಗಿದ್ದೆಗೆ?

0 1

ಮನುಷ್ಯನಿಗೆ ಜೀವನದಲ್ಲಿ ಸಿಕ್ಕ ಅವಕಾಶವನ್ನು ಬಿಡಬಾರದು ಹಾಗೆ ಸಿಕ್ಕ ಒಂದೇ ಒಂದು ಅವಕಾಶ ವ್ಯಕ್ತಿಯನ್ನು ಅದ್ಯಾವ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಅಂದರೆ ಆ ವ್ಯಕ್ತಿಯ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಹೌದು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಮುಂದೆ ಸಾಗಿದರೆ ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಅದೇ ರೀತಿ ದಕ್ಷಿಣ ಭಾರತ ಚಿತ್ರರಂಗದ ನಟ ತಮಗೆ ಸಿಕ್ಕ ಅವಕಾಶವನ್ನ ಅದೆಷ್ಟು ಉತ್ತಮವಾಗಿ ಸದುಪಯೋಗ ಪಡಿಸಿಕೊಂಡಿದ್ದರು ಅಂದರೆ ಡ್ರೈವರ್ ಆಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಇವರು ಇದೀಗ ಇವರ ಅದೃಷ್ಟವೇ ಬದಲಾಗಿದೆ ಇದಕ್ಕೆ ಕಾರಣ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಯುದ್ಧಕ್ಕೆ ವಿಫಲ ಅವರಿಗೆ ದೊರೆತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ದಕ್ಷಿಣ ಭಾರತದಲ್ಲಿಯೇ ಬಹಳ ಬೇಡಿಕೆಯಲ್ಲಿರುವ ನಟರಲ್ಲಿ ಇವರು ಕೂಡ ಒಬ್ಬರು ಅವರ ಬಗ್ಗೆ ಇಂದಿನ ನಮ್ಮ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ಅದು ಬೇರ್ಯಾರ ಬಗ್ಗೆಯೂ ಅಲ್ಲ ಅವರೆ ನಟ ರಾಘವ ಲಾರೆನ್ಸ್ ಅವರ ಬಗ್ಗೆ ಹೌದು ಇವತ್ತಿನ ದಿವಸ ಹತ್ತಾರು ದುಬಾರಿ ಕಾರುಗಳನ್ನ ಕೊಂಡುಕೊಳ್ಳುವ ಸಾಮರ್ಥ್ಯ ಇರುವ ರಾಘವ ಲಾರೆನ್ಸ್ ಅವರು ಅದೊಂದು ಕಾಲದಲ್ಲಿ ಅದೇ ಕಾರುಗಳಿಗೆ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು.

ಭಾರತೀಯ ಚಿತ್ರರಂಗದಲ್ಲಿ ನೃತ್ಯ ಸಂಯೋಜಕ ನಟ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕನಾಗಿ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟ ರಾಘವ ಲಾರೆನ್ಸ್ ರವರು 1993ರಲ್ಲಿ ನೃತ್ಯ ಸಂಯೋಜಕರಾಗಿ ಸಿನಿ ರಂಗಕ್ಕೆ ಬರುತ್ತಾರೆ ಅನಂತರ ಇವರು ನಟನೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡು ಯಶಸ್ಸು ಗಳಿಸುತ್ತಾರೆ. ನಂತರ 1998ರಲ್ಲಿ ತೆಲುಗು ಚಿತ್ರರಂಗದಲ್ಲಿ ನಟರಾಗಿ ತಮ್ಮ ಅಭಿನಯದ ಚಳಕವನ್ನು ತೋರಿಸುತ್ತಾರೆ ರಾಘವ ಲಾರೆನ್ಸ್ ರವರು , 1993 ರಲ್ಲಿ ನೃತ್ಯ ಸಂಯೋಜಕರಾಗಿ ಪಾದಾರ್ಪಣೆ ಮಾಡಿದ ರಾಘವ ಅವರು 1998ರಲ್ಲಿ ಅಂದರೆ ತಮ್ಮ ಇಪ್ಪತ್ತೆರಡನೆ ವಯಸ್ಸಿನಲ್ಲಿ ತೆಲುಗು ಚಿತ್ರವೊಂದರ ಮೂಲಕ ನಟನಾಗಿ ಅಭಿನಯ ಮಾಡುವ ಮೂಲಕ ತಮ್ಮ ನಟನೆಯ ಕೈಚಳಕವನ್ನು ತೋರಿಸಿದರು ಅಂದು ಯಶಸ್ವಿ ಕಂಡಿದ್ದ ಅವರು ಇವತ್ತಿಗೂ ಹಿಂದಿರುಗಿ ನೋಡಿಲ್ಲ ಹೆಚ್ಚೆಚ್ಚು ಅವಕಾಶಗಳೊಂದಿಗೆ ಸಿನಿರಸಿಕರ ಫೇವರಿಟ್ ಆಗಿದ್ದಾರೆ.

ಇನ್ನು ರಾಘವ್ ಲಾರೆನ್ಸ್ ಅವರು ಹುಟ್ಟಿದ್ದು ಒಂದು ತೀರ ಬಡತನದ ಕುಟುಂಬದಲ್ಲಿ ಅವರು ಶಾಲೆಯ ಮುಖವನ್ನೇ ನೋಡಿಲ್ಲ ಅದ್ಕೆ ಕಾರಣ ಅವರಿಗಿದ್ದ ಕಾಯಿಲೆ ಬ್ರೈನ್ ಟ್ಯೂಮರ್ ತನ್ನ ಚಿಕ್ಕ ವಯಸ್ಸಿನಲ್ಲೇ ಈ ಘೋರ ಖಾಯಿಲೆಯಿಂದ ಬಳಲುತ್ತಿದ್ದರು ವೈದ್ಯರು ಅವರು ಬದುಕಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಅವರ ತಾಯಿ ಗುರು ರಾಘವೇಂದ್ರ ಸ್ವಾಮಿ ಅನ್ನು ಭಕ್ತಿಯಿಂದ ಆರಾಧಿಸುತ್ತಾರೆ ಕೊನೆಗೆ ರಾಯರ ನಂಬಿದವರನ್ನು ಯಾವತ್ತೂ ಮೋಸ ಮಾಡಲ್ಲ ಎನ್ನುವುದನ್ನು ಇವರ ಜೀವನದಲ್ಲಿ ನಡೆದ ಘಟನೆ ನಂಬಬಹುದು ನಿಜ ವೈದ್ಯ ಲೋಕವೇ ಅಚ್ಚರಿ ಪಡುವಂಥ ಪವಾಡ ನಡೆಯಿತು

ಕ್ಯಾನ್ಸರ್ ಕೊನೆಯ ಸ್ಟೇಜ್ ಅಲ್ಲಿ ಇದ್ದ ಲಾರೆನ್ಸ್ ವರು ಬದುಕಿ ಉಳಿದರು ಆವಾಗಿಂದ ಅವರ ಎಲ್ಲ ಕುಟುಂಬಸ್ಥರು ರಾಯರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಇನ್ನೂ ಕ್ರಿಶ್ಚಿಯನ್ ಇಂದ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಇನ್ನೂ ತಮ್ಮ ಪತ್ನಿ ಲತಾ ಅವರ ಜೊತೆ ಸಾಂಸಾರಿಕ ಜೀವನ ನಡೆಸುತ್ತಾ ಬಂದಿದ್ದಾರೆ ಹಾಗೂ ತಮ್ಮ ಕುಟುಂಬದ ಜೊತೆ ಹಲವಾರು ಸಾಮಾಜಿಕ ಸೇವೆ ಮಾಡುತ್ತ ತಮ್ಮ ಜೀವನ ನಡೆಸುತ್ತಿದ್ದಾರೆ ಇನ್ನೂ ಚಿತ್ರರಂಗ ತೆಲುಗು ಕನ್ನಡ ತಮಿಳು ಚಿತ್ರದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇಂದು ಚಿತ್ರರಂಗದಲ್ಲಿ ಪ್ರಸಿದ್ದ ನಟ ಅನ್ನಿಸಿಕೊಳ್ಳಲು ತುಂಬಾ ಕಷ್ಟ ಪಟ್ಟಿದಾರೆ ಫೈಟಿಂಗ್ ಮಾಸ್ಟರ್ ಒಬ್ಬರ ಮನೆಯಲ್ಲಿ ಕಾರ್ ಕ್ಲೀನರ್ ಕೆಲ್ಸ ಮಾಡುತ ಇದ್ದಾಗ ನೃತ್ಯ ಅಭಿರುಚಿ ಇದ್ದ ಇವರು ಆಗಾಗ ನೃತ್ಯ ಮಾಡುತ ಇದ್ದರೂ ಒಮ್ಮೆ ರಜನಿಕಾಂತ್ ಅವರು ಇವರ ಅಭಿರುಚಿಯನ್ನು ಗುರುತಿಸಿ ಅವರನ್ನು ಪ್ರಭುದೇವ ಹತ್ತಿರ ನೃತ್ಯ ಮಾಡಲು ಸೇರಿಸುತ್ತಾರೆ ಕೊನೆಗೆ ರಂಗ ನರ್ತಕರಾಗಿ ಪ್ರವೇಶಿಸುತ್ತಾರೆ

ನಂತರ ಒಂದೊಂದೇ ಅವಕಾಶ ಬರುತ್ತದೆ ನಂತರ ಸಂಸಾರ ಅನ್ನುವ ಚಿತ್ರದಲ್ಲಿ ನೃತ್ಯ ಸಂಯೋಜಕರು ಆಗಿ ಕಾರ್ಯ ನಿರ್ವಹಿಸಿತರೆ ಇನ್ನೂ ಸ್ಪೀಡ್ ಡಾನ್ಸರ್ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು ಆದರೆ ಅದು ಅಷ್ಟೊಂದು ಹಿಟ್ ಆಗೋಲ್ಲ ಕೊನೆಗೆ 2001 ರಲ್ಲಿ ಸ್ಟೈಲ್ ಸಿನಿಮಾದಲ್ಲಿ ಪ್ರಭು ದೇವ ಅವರ ಜೊತೆ ನಟಿಸಿದ್ದಾರೆ ಆ ಸಿನಿಮಾ ಇವರಿಗೆ ಯಶಸ್ಸು ಕೀರ್ತಿ ತಂದು ಕೊಟ್ಟ ಸಿನಿಮಾ ಆಗಿದೆ ನಂತರ ಮಾಸ್ ಕಾಂಚನಹಾಗೂ ಮುನ್ನಿ ಚಿತ್ರವು ರಾಘವ್ ಅವರ ಬದುಕನ್ನೇ ಬದಲಾಯಿಸಿದ ಸಿನಿಮಾ.

ಇಷ್ಟೆಲ್ಲಾ ಯಶಸ್ಸು ಇದ್ದರೂ ತಾವು ಪಟ್ಟ ಕಷ್ಟವನ್ನು ಮರೆಯದೆ ಇಂದಿಗೂ ಅನೇಕ ಮಕ್ಕಳ ಹೃದಯ ಸರ್ಜರಿ ಅನ್ನು ತಮ್ಮ ಟ್ರಸ್ಟ್ ಮೂಲಕ ಉಚಿತ ಚಿಕಿತ್ಸೆ ನೀಡಿದ್ದಾರೆ ಇನ್ನೂ ಮಂಗಳ ಮುಖಿ ಅವರ ಅಭಿವೃದ್ಧಿ ಸಾಕಷ್ಟು ಸಹಾಯ ಮಾಡಿದ್ದಾರೆ ಇನ್ನೂ ರಾಘವೇಂದ್ರ ಸ್ವಾಮಿ ದೇವಾಲಯ ಕಟ್ಟಿಸಿದ್ದು ಸಾವಿರಾರು ಭಕ್ತರ ಪೂಜೆ ಅವಕಾಶ ನೀಡಿದ್ದಾರೆ ಇನ್ನೂ ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲ ಒಂದೇ ಎಂಬ ಸಾಮರಸ್ಯವನ್ನು ಮೂಡಿಸಲು ಒಂದು ದೊಡ್ಡ ದೇವಸ್ಥಾನ ಕಟ್ಟುವ ಯೋಜನೆಯನ್ನು ಅನುಷ್ಠಾನ ಜಾರಿ ಗೊಳಿಸಿದ್ದಾರೆ . ಇನ್ನೂ ಹಲವಾರು ಸಾಮಾಜಿಕ ಕೆಲಸಗಳಲ್ಲಿ ಸಹಾಯ ಹಸ್ತ ಚಾಚಿದ್ದಾರೆ ಪ್ರವಾಹ ಸಮಯದಲ್ಲೂ ಕೋಟಿಗಟ್ಟಲೆ ಹಣವನ್ನು ಬರಪೀಡಿತ ಜನರಿಗೆ ನೀಡಿ ತಮ್ಮ ಉದಾರತೆಯನ್ನು ತೋರಿಸಿಕೊಟ್ಟಿದ್ದಾರೆ..

Leave A Reply

Your email address will not be published.