ಹನಿಮೂನ್ ಮುಗಿಸ್ಕೊಂಡು ಮತ್ತೆ ಚಿತ್ರ ರಂಗಕ್ಕೆ ಹಾಜರಾದ ಕಾಜಲ್ ದಂಪತಿಗೆ ಅಭಿನಂದಿಸಿದ ಮೆಗಾಸ್ಟಾರ್

0 1

ಮತ್ತೆ ಚಿತ್ರೀಕರಣಕ್ಕೆ ಹಾಜರಾದ ಕಾಜಲ್, ನವ ದಂಪತಿಗಳಿಗೆ ಅಭಿನಂದಿಸಿದ ಮೆಗಾ ಸ್ಟಾರ್. ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಕಾಜಲ್ ಸರಳವಾಗಿ ಹಸೆಮಣೆ ಏರಿದ್ದಾರೆ. ಕಾಜಲ್ ಸದ್ಯ ಪತಿ ಗೌತಮ್ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ. ಮದುವೆ ಬಳಿಕ ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿರುವ ಕಾಜಲ್ ಮದುವೆ ಬಳಿಕ ಇನ್ನು ಶೂಟಿಂಗ್ ಗೆ ಹೊರಟಿಲ್ಲ. ಇತ್ತೀಚಿಗಷ್ಟೆ ಮಾಲ್ಡೀವ್ಸ್ ಹನಿಮೂನ್ ಮುಗಿಸಿ ವಾಪಸ್ ಆಗಿರುವ ಕಾಜಲ್ ಇದೀಗ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.

ಮದುವೆಯಾಗಿ ಒಂದು ತಿಂಗಳ ಬಳಿಕ ಕಾಜಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮದುವೆ ಬಳಿಕ ಮಗದೀರ ಸುಂದರಿ ಮೊದಲ ಸಿನಿಮಾಗೆ ಸಹಿ ಮಾಡುವ ಮೂಲಕ ಮತ್ತೆ ಸಿನಿಮಾಗಳಿಗೆ ಮರಳಿದ್ದಾರೆ. ತಮಿಳು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಕಾಜಲ್ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಮಲ್ಟಿ ಸ್ಟಾರರ್ ಸಿನಿಮಾ ವಾಗಿದ್ದು, ಮೂವರು ನಾಯಕಿಯರು ಇರಲಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕ ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ನಡೆಯಲಿದೆ. ಕಾಜಲ್ ಅಗರ್ವಾಲ್ ಸದ್ಯ ಕಮಲ್ ಹಾಸನ್ ಅಭಿನಯದ ಇಂಡಿಯನ್ -2, ಮುಂಬೈ ಸಗಾ ಮತ್ತು ಚಿರಂಜೀವಿ ಜೊತೆ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಮದುವೆಯ ನಂತರ ಸಿನಿಮಾಗೆ ಮರಳಿದ ಕಾಜಲ್ ದಂಪತಿಗಳಿಗೆ ಮೇಘಾ ಸ್ಟಾರ್ ಚಿರಂಜೀವಿ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಸುರೇಂದರ್ ರೆಡ್ಡಿ ನಿರ್ದೇಶನದ ಐತಿಹಾಸಿಕ ಚಿತ್ರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಮೆಗಾಸ್ಟಾರ್ ಚಿರಂಜೀವಿ, ಇದೀಗ ಕೊರಟಾಲ ಶಿವ ನಿರ್ದೇಶನದ ಸಾಮಾಜಿಕ ಸಂದೇಶ ಆಧಾರಿತ ಚಿತ್ರ ಆಚಾರ್ಯ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಆಚಾರ್ಯ ಬಿಗ್ ಬಜೆಟ್ ಚಿತ್ರವಾಗಿದ್ದು, ಕಾಜಲ್ ಅಗರ್ವಾಲ್ ಚಿರಂಜೀವಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾದ ನಟಿ ಕಾಜಲ್ ಅಗರ್ವಾಲ್ ಮತ್ತೆ  ತಮ್ಮ ಕೆಲಸಕ್ಕೆ ಮರಳಿದ್ದಾರೆ.  ಮಂಗಳವಾರ ಕಾಜಲ್ ಮೆಗಾಸ್ಟಾರ್ ಚಿರಂಜೀವಿ ಅವರ ಆಚಾರ್ಯ ಚಿತ್ರದ ಸೆಟ್‌ ಗೆ ಹಾಜರಾದರು. ಆದ್ದರಿಂದ ಚಿರು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸರ್ ಪ್ರೈಸ್ ನೀಡಿದರು. ಹೌದು, ಚಿರಂಜೀವಿ ಅವರು ಗೌತಮ್ ಕಿಚ್ಲು ಮತ್ತು ಕಾಜಲ್ ಅಗರ್ವಾಲ್ ಅವರಿಗೆ ಸಣ್ಣ ಪುರಸ್ಕಾರ ನೀಡಿ, ಅವರಿಗೆ ಹೂಗುಚ್ಛಗಳನ್ನು ನೀಡಿದರು. ಚಿರು ಉಪಸ್ಥಿತಿಯಲ್ಲಿ ಕೇಕ್  ಸಹ ಕಟ್ ಮಾಡಲಾಯಿತು. ಈ ಆತ್ಮೀಯ ಸಮಾರಂಭದಲ್ಲಿ ‘ಆಚಾರ್ಯ’ ನಿರ್ದೇಶಕ ಶಿವ ಕೊರಟಾಲ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚಿತ್ರಕ್ಕೆ ಕೋಕಾಪೇಟೆಯಲ್ಲಿ ಬೃಹತ್ ಸೆಟ್ ಜೋಡಿಸಲಾಗಿದ್ದು, ಕಳೆದ ಕೆಲವು ದಿನಗಳಿಂದ ಶೂಟಿಂಗ್ ಪ್ರಗತಿಯಲ್ಲಿದೆ. ಬ್ಲಾಕ್ ಬಸ್ಟರ್ ‘ಖೈದಿ ನಂ 150’ನ ನಂತರ ಮೆಗಾಸ್ಟಾರ್ ಜೊತೆಗೆ  ಇದು ಕಾಜಲ್ ಎರಡನೇ ಚಿತ್ರವಾಗಿದೆ. 2021 ರ ಬೇಸಿಗೆಗೆ  ಆಚಾರ್ಯ ಬಿಡುಗಡೆಗೆ ಸಿದ್ಧವಾಗಿದೆ. ಆಚಾರ್ಯ ಚಿತ್ರದ ಚಿತ್ರೀಕರಣ ವಿವಿಧ ಕಾರಣಗಳಿಂದ ಹಲವು ತಿಂಗಳು ವಿಳಂಬವಾಗಿದೆ. ಆದರೆ ಶೂಟಿಂಗ್ ಇತ್ತೀಚೆಗೆ ಪುನರಾರಂಭಗೊಂಡಿದ್ದು, ಆಚಾರ್ಯವನ್ನು ಅದ್ದೂರಿಯಾಗಿ ಚಿತ್ರಿಸಲಾಗುತ್ತಿದೆ. ಚಿತ್ರದ ಬಜೆಟ್ 80 ಕೋಟಿ ಮೀರಿದೆ. ಚಿತ್ರದಲ್ಲಿ ಇಂಟ್ರುಡ್ಯೂಸ್ ಹಾಡಿಗಾಗಿ ಹೈದರಾಬಾದ್‌ನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಈ ಅದ್ದೂರಿ ಸೆಟ್‌ಗೆ ಸುಮಾರು 5 ಕೋಟಿ ರೂಪಾಯಿ ವೆಚ್ಚವಾಗಿದೆ. ಆಚಾರ್ಯ ಚಿತ್ರ ಚಿರಂಜೀವಿ ಅವರ 152 ನೇ ಚಿತ್ರವಾಗಿದೆ. ನಿರ್ದೇಶಕರು ಆಚಾರ್ಯ ಚಿತ್ರಕ್ಕೆ ಸಾಲಿಡ್ ಎಂಡಿಂಗ್ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂಗೀತವನ್ನು ಮಣಿ ಶರ್ಮಾ ಸಂಯೋಜಿಸಿದ್ದಾರೆ. ಆಚಾರ್ಯದಲ್ಲಿ ಚಿರಂಜೀವಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇದೆ. ಈ ಚಿತ್ರದಲ್ಲಿ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗಳ ಜೊತೆಗೆ ಕಾಜಲ್ ಒಂದು ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾಜಲ್ ಮೊದಲು ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ ಎಂದು ಕಾದು ನೋಡಬೇಕು.

Leave A Reply

Your email address will not be published.