ಕನ್ನಡ ಬಿಗ್‌ಬಾಸ್‌ ಸೀಸನ್‌ ಆರರಲ್ಲಿ ಫಸ್ಟ್‌ ರನ್ನರ್‌ ಆಗಿ ಹೊರಹೊಮ್ಮಿದ ಗಾಯಕ ನವೀನ್‌ ಸಜ್ಜು ತಮ್ಮ ವಿಭಿನ್ನ ಗಾನ ಶಕ್ತಿಯಿಂದ ಸಾಕಷ್ಟು ಹಾಡುಗಳಿಗೆ ಕಂಠ ನೀಡಿ ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲು ಜನಪದ ಹಾಡುಗಳನ್ನು ನವೀನ್‌ ಸಜ್ಜು ಅವ್ರ ಕಂಠದಲ್ಲಿ ಕೇಳುವ ಮಜಾನೇ ಬೇರೆ. ಮೂಲತಃ ಮೈಸೂರು ಭಾಗದವರಾದ ನವೀನ್‌ ಸಜ್ಜು ಸದ್ಯ ಮೈಸೂರಿನಲ್ಲಿಯೆ ಹೊಸ ಮನೆಯೊಂದನ್ನ ಖರಿದೀ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಗಾಯಕ, ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಗ್‌ ಬಾಸ್‌ ಖ್ಯಾತಿಯ ನವೀನ್ ಸಜ್ಜು ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ನಿನ್ನೆ ನವೀನ್‌ ಅವರ ಹೊಸ ಮನೆಯ ಗೃಹಪ್ರವೇಶ ಅದ್ದೂರಿಯಾಗಿ ನೆಡೆದಿದ್ದು ಕುಟುಂಬದವರು ಸ್ನೇಹಿತರು ಹಾಗೂ ಇಂಡಸ್ಟ್ರಿಯ ಕೆಲವು ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದು ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೋಡೋಣ.

ಚಂದನವನದಲ್ಲಿ ಗಾಯಕ, ಸಂಗೀತ ಸಂಯೋಜಕ, ಬರಹಗಾರ ಮೂಲಕ ಮೋಡಿ ಮಾಡಿರುವ `ಬಿಗ್ ಬಾಸ್’ ಖ್ಯಾತಿಯ ನವೀನ್ ಸಜ್ಜು ಮನೆಯಲ್ಲಿ ಸಂತಸ ಮಾಡಿದೆ. ಹೊಸ ಮನೆಯ ಹೊಸ ಹೊಸ್ತಿಲಲ್ಲಿ ಗಾಯಕ ನವೀನ್ ಸಜ್ಜು ಇದ್ದಾರೆ. ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ನಟಿ ಅಕ್ಷತಾ ಪಾಂಡವಪುರ ಕೂಡ ನವೀನ್ ಮನೆಯ ಗೃಪ್ರವೇಶದಲ್ಲಿ ಪಾಲ್ಗೋಂಡಿದ್ದಾರೆ. ನವೀನ್ ಹೊಸ ಮನೆಯ ಫೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ.‌

ಇನ್ನೂ ನವೀನ್‌ ಅವರಿಗೆ ತನ್ನದೆ ಆದ ಅಭಿಮಾನಿ ಬಳಗವಿದ್ದು ಸಾಕಷ್ಟು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ನವೀನ್‌ ಸಜ್ಜು ಅವ್ರ ಹೊಸ ಮನೆಗೆ ಬಿಗ್‌ಬಾಸ್‌ ಖ್ಯಾತಿಯ ಅಕ್ಷತಾ ಪಾಂಡವ್‌ಪುರ ಭೇಟಿ ನೀಡಿ ಶುಭಾಶಯ ಕೋರಿ, ನವೀನ್ ಜೊತೆಗಿರುವ ಮನೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಮೈಸೂರಿನಲ್ಲಿ ನವೀನನ ಮನೆಯ ಓಪನಿಂಗ್ ಇತ್ತು ಚಂದದ ಮನೆ ಮುಂದಿನ ಎಲ್ಲಾ ದಿನಗಳು ಹೀಗೆ ಮನೆಯಷ್ಟೇ ಚಂದವಾಗಿರಲಿ ನವೀನ್ ಗೆ ಸಜ್ಜು ಒಳ್ಳೆದಾಗಲಿ ಎಂದು ಬರೆದುಕೊಂಡಿದ್ದಾರೆ. ಮಾನಸು’ ಇವತ್ತು ಮೈಸೂರಿನಲ್ಲಿ ನಮ್ಮ ನವೀನ್‌ನ ಮನೆ ಓಪನಿಂಗ್ ಇತ್ತು. ಚಂದದ ಮನೆ, ಮುಂದಿನ ಎಲ್ಲಾ ದಿನಗಳೂ ಹೀಗೆ ಮನೆಯಷ್ಟೇ ಚಂದವಾಗಿರಲಿ ಎಂದು ನಟಿ ಅಕ್ಷತಾ ಶುಭಹಾರೈಸಿದ್ದಾರೆ.

ಇನ್ನೂ ಮತ್ತೊಂದು ವಿಚಾರ ಅಂದ್ರೆ ನವೀನ್‌ ಸಜ್ಜು ಅವರು ತಮ್ಮ ಅದ್ದೂರಿ ಮನೆಗೆ ಮಾನಸು ಎಂಬ ಹೆಸರಿಟ್ಟಿದ್ದಾರೆ. ಮಾನಸು ಎಂದರೆ ಏನು? ಅನ್ನೋ ಪ್ರಶ್ನೆ ಜೊತೆಗೆ ಕುತೂಹಲ ನಿಮಗೆ ಮೂಡೊದು ಸಹಜ. ಈ ಬಗ್ಗೆ ನವೀನ್‌ ಸಜ್ಜು ಅವರು ಮೀಡಿಯಾದವರ ಜೊತೆ ಮಾತನಾಡಿತ್ತಾ ಮಾನಸು ಅಂದ್ರೆ ʻಮಾʼಮಾದೇಗೌಡ, ʻನʼ ಅಂದ್ರೆ ನವೀನ್‌ ಹಾಗೂ ʻಸುʼಅಂದ್ರೆ ಸುಮಿತ್ರ. ತಂದೆ ತಾಯಿ ಹಾಗೂ ತನ್ನ ಹೆಸರಿನ ಮೊದಲ ಅಕ್ಷರವನ್ನು ತೆಗೆದು ಜೋಡಿಸಿ ಮನೆಗೆ ಆ ಹೆಸರನ್ನು ಇಡಲಾಗಿದೆ.

ಮನೆ ಖರೀದಿ ಮಾಡಬೇಕು ಎಂಬುವುದು ಬಹಳ ದಿನದ ಕನಸು ಸದ್ಯ ಆ ಕನಸು ಈಡೇರಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನೂ ನವೀನ್‌ ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗಷ್ಟೆ ನವೀನ್‌ ಸಜ್ಜು ಅವ್ರು ಪವರ್‌ ಸ್ಟಾರ್‌ ಪುನಿತ್‌ ರಾಜ್‌ಕುಮಾರ್‌ ಕುರಿತು ದೊಡ್ಮನೆ ದೊರೆಯೇ ಎಂಬ ಹಾಡೊಂದನ್ನ ಹಾಡಿದ್ದರು. ಈ ಹಾಡನ್ನು ‘ಜೇಮ್ಸ್‌’ ಸಿನಿಮಾದ ನಿರ್ದೇಶಕ ಚೇತನ್‌ ಕುಮಾರ್‌ ಬರೆದಿದ್ದರು. ಹಾಡಿಗೆ ನವೀನ್‌ ಸಜ್ಜು ಅವರೇ ಸ್ವತಃ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು ಹಾಗೂ ವಿಭಿನ್ನವಾದ ಕಾನ್ಸೆಪ್ಟ್‌ ವಿಡಿಯೋವನ್ನು ಕೂಡಾ ಮಾಡಿದ್ದರು. ಆ ಹಾಡು ಬಿಡುಗಡೆಯಾಗಿ ಸಖತ್‌ ವೈರಲ್‌ ಕೂಡಾ ಆಗಿತ್ತು. ಪ್ರತಿಯೊಬ್ಬರೂ ಕೂಡಾ ಆ ಹಾಡನ್ನು ಕೇಳಿ ಭಾವುರಾಗಿದ್ದರು. ಒಟ್ಟಿನಲ್ಲಿ ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ನವೀನ್ ಸಜ್ಜು, ಹೊಸ ಮನೆಯ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಸಾಕ್ಷಿಯಾಗಿದ್ದಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *