ಅಪ್ಪು ಬಾಡಿಗಾರ್ಡ್ ಚಲಪತಿ ಅವರು ಕೆಲಸ ಬಿಡ್ತೀನಿ ಅಂದಾಗ ಅಶ್ವಿನಿ ಅವರು ಏನ್ ಅಂದ್ರು ಗೊತ್ತಾ? ನಿಜಕ್ಕೂ ಇದು ದೊಡ್ಡಗುಣ

0 1

ನೋಡ ನೋಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಬಹಳ ದಿನಗಳೆ ಕಳೆದಿವೆ. ಆದರೂ ಅವರ ನೆನಪು ಸದಾ ನಮ್ಮೊಂದಿಗೆ ಹಸಿರಾಗಿದೆ. ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಿದ ಚಲಪತಿ ಅವರು ಪುನೀತ್ ಅವರ ಬಗ್ಗೆ ಏನು ಹೇಳಿದ್ದಾರೆ ಹಾಗೂ ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪುನೀತ್ ಅವರ ಅಭಿಮಾನಿಗಳಿಗೆ ಅಪ್ಪು ನಮ್ಮನ್ನಗಲಿ ಎಂಟು ತಿಂಗಳಾಯಿತು ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಹೀಗಿರುವಾಗ ಅವರ ಮನೆಯವರಿಗೆ ಇನ್ನು ಕಷ್ಟವಾಗುತ್ತದೆ. ಇನ್ನು ಅಪ್ಪು ಅವರ ಜೊತೆಗೆ ಹತ್ತು ವರ್ಷಗಳ ಕಾಲ ಗನ್ ಮ್ಯಾನ್ ಆಗಿ ಕೆಲಸ ಮಾಡಿದ ಚಲಪತಿ ಅವರು ಅಪ್ಪು ಅವರ ಅಗಲಿಕೆಯನ್ನು ಮರೆಯುತ್ತಿಲ್ಲ. ಈಗಲೂ ಅವರು ನನ್ನ ದೇವರು ನನ್ನ ಜೊತೆಯೆ ಇದ್ದಾರೆ ಎಂದು ಹೇಳುತ್ತಾರೆ. ಚಲಪತಿ ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಲು ಮಿಲಿಟ್ರಿ ತೊರೆದು ಬಂದರು.

ಕಳೆದ ಹತ್ತು ವರ್ಷಗಳಿಂದ ಪುನೀತ್ ಅವರು ಎಲ್ಲೆ ಹೋಗಲಿ ಎಲ್ಲೆ ಬರಲಿ ಯಾವುದೆ ಶೂಟಿಂಗ್ ಇರಲಿ ಸಮಾರಂಭಗಳಿರಲಿ, ಒಟ್ಟಿನಲ್ಲಿ ಪುನೀತ್ ಇದ್ದಲ್ಲಿ ಚಲಪತಿ ಅವರ ಹಿಂದೆಯೆ ಇರುತ್ತಿದ್ದರು. ಚಲಪತಿಯವರನ್ನು ಪುನೀತ್ ಯಾವಾಗಲೂ ತನ್ನ ಕೆಲಸದವರಂತೆ ನೋಡಲೆ ಇಲ್ಲ, ಬಹಳ ಪ್ರೀತಿಯಿಂದ ಒಬ್ಬ ಗೆಳೆಯನಂತೆ ನೋಡಿಕೊಳ್ಳುತ್ತಿದ್ದರು.

ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವೆ ಹಾಗೆ ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಯಾರನ್ನು ಕೀಳಾಗಿ ಕಂಡವರಲ್ಲ, ಕೆಲಸದವರು ಎಂದು ಹೇಳಿದವರೂ ಅಲ್ಲ. ಎಲ್ಲರನ್ನೂ ಬಹಳ ತಮ್ಮವರಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಪುನೀತ್ ಅವರ ಗನ್ ಮ್ಯಾನ್ ಆಗಿದ್ದ ಚಲಪತಿ ಅವರಿಗೂ ಹತ್ತು ವರ್ಷ ಅವರ ಜೊತೆ ಕೆಲಸ ಮಾಡುತ್ತಿದ್ದೆ ಎನ್ನುವುದಕ್ಕಿಂತ ಪುನೀತ್ ಅವರ ಜೊತೆಗೆ ಇದ್ದೆ ಎನ್ನುವ ಖುಷಿ ಇದೆ ಎಂದು ಚಲಪತಿ ಸಂತೋಷದಿಂದ ಹೇಳುತ್ತಾರೆ. ಇದೀಗ ಚಲಪತಿ ಪುನೀತ್ ರಾಜಕುಮಾರ್ ಅವರ ಮನೆಯ ಕೆಲಸವನ್ನು ಬಿಟ್ಟಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿದೆ. ಈ ವಿಷಯದ ಬಗ್ಗೆ ಚಲಪತಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಪುನೀತರಾಜಕುಮಾರ್ ನಮ್ಮನ್ನಗಲಿದ ನಂತರ ಇದುವರೆಗೆ ಅಂದರೆ ಎಂಟು ತಿಂಗಳುಗಳ ಕಾಲ ಚಲಪತಿ ಪುನೀತ್ ಅವರ ಮನೆಯಲ್ಲಿಯೆ ಕೆಲಸ ಮಾಡುತ್ತಿದ್ದರು ಆದರೆ ಚಲಪತಿ ಒಬ್ಬ ಗನ್ ಮ್ಯಾನ್. ಅವರು ಯಾರಿಗಾದರೂ ಸೆಕ್ಯೂರಿಟಿ ಕೊಡಬಹುದು, ಇಷ್ಟು ದಿನ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸೆಕ್ಯೂರಿಟಿ ಆಗಿದ್ದರು. ಅವರ ಮನೆಯಲ್ಲಿ ಚಲಪತಿ ಅವರಿಗೆ ಹೆಚ್ಚಾಗಿ ಕೆಲಸವೇನು ಇರಲಿಲ್ಲ, ಹೀಗಾಗಿ ಅಶ್ವಿನಿ ಅವರು ಕೂಡ ನೀವು ಬೇರೆ ಕೆಲಸ ಸಿಕ್ಕರೆ ನೋಡಿಕೊಳ್ಳಬಹುದು, ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ.

ಅಶ್ವಿನಿ ಅವರು ಚಲಪತಿ ಅವರಿಗೆ ನಿಮ್ಮ ಕಮೆಂಟ್ಮೆಂಟ್ ಗಳಿಗೆ ಅನುಕೂಲವಾಗುವ ಹಾಗೆ ಬೇರೆ ಕೆಲಸ ಸಿಕ್ಕರೆ ಹೋಗಬಹುದು ಎಂದು ಹೇಳಿದ್ದಾರೆ. ಚಲಪತಿ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಕೆಲಸವನ್ನು ಬಿಟ್ಟರು ಕೂಡ, ಅಶ್ವಿನಿ ಅವರಿಗೆ ಯಾವುದೆ ತುರ್ತು ಸಮಯದಲ್ಲಿ ಅಗತ್ಯವಿದ್ದರೆ ಚಲಪತಿ ಅಲ್ಲಿ ಹಾಜರಿರುತ್ತಾರೆ. ಚಲಪತಿ ಇದೀಗ ಬೆಳಗಾವಿಯಲ್ಲಿ ಕೆಲಸಕ್ಕೆ ಸೇರುವ ಸಾಧ್ಯತೆ ಇದೆ. ತಾನು ಇನ್ನು ಮುಂದೆ ಗನ್ ಮ್ಯಾನ್ ಕೆಲಸ ಮಾಡುವುದಿಲ್ಲ ಯಾಕೆಂದರೆ ನನಗೆ ನನ್ನ ಯಜಮಾನರನ್ನು ಮರೆಯುವುದಕ್ಕೆ ಇಷ್ಟವಿಲ್ಲ. ಅವರ ಜೊತೆಗೆ ಕಳೆದ ಕ್ಷಣ ಸದಾ ಹಸಿರಾಗಿರಬೇಕು. ಹೀಗಾಗಿ ನಾನು ಬೇರೆ ಯಾರಿಗೂ ಗನ್ ಮ್ಯಾನ್ ಆಗಿ ಕೆಲಸ ಮಾಡುವುದಿಲ್ಲ ಎಂದು ಚಲಪತಿ ಹೇಳಿದ್ದಾರೆ.

ಅಷ್ಟೆ ಅಲ್ಲ ಬೆಳಗಾವಿಯಲ್ಲಿ ಪುನೀತ್ ಅವರ ಅಭಿಮಾನಿ ಒಬ್ಬರ ಜೊತೆ ಚಲಪತಿ ಕೆಲಸ ಮಾಡಲಿದ್ದಾರೆ. ಪುನೀತ್ ನಡೆದ ದಾರಿಯಲ್ಲೆ ನಡೆಯುವ ಆ ವ್ಯಕ್ತಿ ಅಪ್ಪುವಿನಂತೆ ಸಾಕಷ್ಟು ಸಮಾಜಪರ ಕಾರ್ಯಗಳನ್ನು ಮಾಡಲಿದ್ದಾರೆ. ಹೀಗಾಗಿ ನಮ್ಮ ಅಪ್ಪು ಜೊತೆ ಇದ್ದ ನೀವು ನಮ್ಮ ಜೊತೆ ಕೈಜೋಡಿಸಿದರೆ ನಮಗೂ ಖುಷಿ ಅಂತ ಚಲಪತಿಯವರನ್ನ ಕರೆದಿದ್ದಾರೆ. ಹೀಗಾಗಿ ಸದ್ಯದಲ್ಲೆ ಬೆಂಗಳೂರು ತೊರೆದು ಬೆಳಗಾವಿ ಸೇರಲಿರುವ ಚಲಪತಿ ನನ್ನ ದೇವರಿದ್ದ ಯಜಮಾನರ ಮನೆಯನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ, ಮತ್ತೆ ಮತ್ತೆ ಅಪ್ಪು ಅವರ ಮನೆಗೆ ಹೋಗುತ್ತಿರುತ್ತೇನೆ. ಸಾಯುವವರೆಗೂ ಅವರ ಮನೆ ಸೇವೆ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ. ಒಟ್ಟಿನಲ್ಲಿ ಅಪ್ಪು ಇಲ್ಲದ ದೊಡ್ಡಮನೆ ಕಳೆ ಕಳೆದುಕೊಂಡಿದ್ದಂತು ಹೌದು. ಚಲಪತಿ ಅವರ ಮುಂದಿನ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಆಶಿಸೋಣ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.