ಅಲ್ಲು ಅರ್ಜುನ್ ಸಿನಿಮಾದಲ್ಲಿ ಡಾನ್ಸ್ ಮಾಡಲು ದಿಶಾ ಪಟಾಣಿ ಕೇಳಿದ ಸಂಭಾವನೆ ಎಷ್ಟು ಗೊತ್ತೇ.? ಚಿತ್ರ ತಂಡ ಶಾಕ್.

0 6

ಬಾಲಿವುಡ್‌ನಲ್ಲಿ ಸದ್ಯ ಬೇಡಿಕೆ ಇರುವ ನಟಿಯರಲ್ಲಿ ದಿಶಾ ಪಟಾಣಿ ಕೂಡ ಒಬ್ಬರು. ಎಂಎಸ್‌ ಧೋನಿ, ಭಾಘಿ 2, ಮಲಂಗ್, ಭಾರತ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ದಿಶಾ, ಪ್ರಸ್ತುತ ಸಲ್ಮಾನ್ ಖಾನ್ ಅಭಿನಯದ ರಾಧೇ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಇದೀಗ ಅವರು ತೆಲುಗಿನ ಪುಷ್ಪ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ, ಆ ಹಾಡಿನಲ್ಲಿ ಹೆಜ್ಜೆ ಹಾಕೋಕೆ ದಿಶಾ ಭಾರಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಲು ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರ ದಿಶಾ ಪಟಾಣಿ?

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿ ದಿಶಾ ಪಟಾಣಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ಮಾಡೋದಕ್ಕೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಇದು ತುಂಬ ದುಬಾರಿ ಆಯ್ತು ಅನ್ನೋದು ತಂಡದ ಅಭಿಪ್ರಾಯ ಎನ್ನಲಾಗಿದೆ. ಅಷ್ಟಕ್ಕೂ ದಿಶಾ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ, ಇದು ಪ್ಯಾನ್‌ ಇಂಡಿಯಾ ಸಿನಿಮಾ. ಹಿಂದಿಯಲ್ಲೂ ಪುಷ್ಪ ಸಿನಿಮಾ ತೆರೆಗೆ ಬರುವುದರಿಂದ ದಿಶಾ ಐಟಂ ಸಾಂಗ್ ಮಾಡಿದರೆ, ವ್ಯವಹಾರಿಕವಾಗಿ ತಂಡಕ್ಕೆ ಲಾಭವಾಗಲಿದೆ ಎಂದು ಅಂದಾಜಿಸಿದ್ದರು ಪುಷ್ಪ ಸಿನಿಮಾ ನಿರ್ಮಾಪಕರು. ಆದರೆ, ದಿಶಾ ಕಡೆಯಿಂದ ಕೇಳಿಬಂದಿರುವ ಸಂಭಾವನೆ ಬಗ್ಗೆ ತಿಳಿದು ಅವರು ಅಚ್ಚರಿಪಟ್ಟಿದ್ದಾರೆ ಎನ್ನಲಾಗಿದೆ.

ದಿಶಾ ಪಟಾಣಿ ಬೇಡಿಕೆ ಕೇಳಿ ಸಿನಿಮಾ ತಂಡ ಶಾಕ್ ಆಗಿದೆ ಎನ್ನಲಾಗುತ್ತಿದೆ. ಒಂದು ಹಾಡಿಗಾಗಿ ಪುಷ್ಪ ತಂಡ ಇಷ್ಟೊಂದು ಮೊತ್ತದ ಹಣ ನೀಡಲು ತಯಾರಿಲ್ಲ ಎನ್ನಲಾಗುತ್ತಿದೆ. ದಿಶಾ ಪಟಾಣಿಯನ್ನು ಆಯ್ಕೆ ಮಾಡಲು ಕಾರಣ, ಪುಷ್ಪ ಸಿನಿಮಾ ತೆಲುಗು ಮಾತ್ರವಲ್ಲದೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಹಾಗಾಗಿ ದಿಶಾ ಅವರನ್ನು ಆಯ್ಕೆ ಮಾಡಿದೆ ಸಿನಿಮಾತಂಡ. ಆದರೆ ಈಗ ದಿಶಾ ಸಂಭಾವನೆ ಕೇಳಿ ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಬೇಕಿತ್ತು. ಆದಕೆ ಕೊರೊನಾದಿಂದ ತಡವಾಗಿದ್ದು, ಇತ್ತೀಚಿಗಷ್ಟೆ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹೊಡೆತದಿಂದಾಗಿ ಪುಷ್ಪ ಶೂಟಿಂಗ್ ಶುರುವಾಗುವುದು ಈಗಾಗಲೇ 9 ತಿಂಗಳು ತಡವಾಗಿದೆ. ಅಲ್ಲದೆ, ಮೊದಲಿಗಿಂತಲೂ ಈಗ ಚಿತ್ರೀಕರಣಕ್ಕೆ ಹೆಚ್ಚು ಹಣ ಬೇಕಾಗುತ್ತದೆ. ಇದರ ಮಧ್ಯೆ ಹಲವು ಬಾರಿ ಶೂಟಿಂಗ್ ಶುರುವಾಗಿ, ನಿಲ್ಲುತ್ತಿದೆ. ಇದೆಲ್ಲದರಿಂದಾಗಿ ನಿರ್ಮಾಪಕರಿಗೆ ಆರ್ಥಿಕವಾಗಿ ಕೊಂಚ ಹೊರೆಯಾಗಿದೆ. ಈ ಮಧ್ಯೆ ಬರೀ ಐಟಂ ಸಾಂಗ್‌ಗಾಗಿ ನಿರ್ಮಾಪಕರು 1.50 ಕೋಟಿ ರೂಪಾಯಿ ಸಂಭಾವನೆ ನೀಡುತ್ತಾರಾ? ಅನ್ನೋದು ಸದ್ಯದ ಪ್ರಶ್ನೆ. ಈ ಬಗ್ಗೆ ಅಧಿಕೃತವಾಗಿ ದಿಶಾ ಕಡೆಯಿಂದಾಗಲಿ ಅಥವಾ ಪುಷ್ಪ ಸಿನಿಮಾದ ನಿರ್ಮಾಪಕರ ಕಡೆಯಿಂದಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.

ಆರಂಭದಲ್ಲಿ ತಮಿಳಿನ ವಿಜಯ್ ಸೇತುಪತಿ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಡೇಟ್ ಸಮಸ್ಯೆಯಿಂದಾಗಿ ಅವರು ಸಿನಿಮಾದಿಂದ ಹೊರನಡೆದಿದ್ದರು. ಬಾಬ್ಬಿ ಸಿಂಹ ಆ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಇದೀಗ ಆ ಜಾಗಕ್ಕೆ ಈಗ ನಟ ಆರ್ಯ ಬರಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ಈ ಸಿನಿಮಾದ ಮತ್ತೊಂದು ಪ್ರಮುಖ ಖಳ ಪಾತ್ರಕ್ಕೆ ಕನ್ನಡದ ನಟ ಡಾಲಿ ಧನಂಜಯ ಆಯ್ಕೆಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

Leave A Reply

Your email address will not be published.