ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ನಡವಳಿಕೆ, ಭವಿಷ್ಯ, ವ್ಯಕ್ತಿತ್ವ ಹೊಂದಿರುತ್ತಾರೆ. ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನದವರು ಕೂಡ ತಮ್ಮದೆ ಆದ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಅಲ್ಲದೆ ವಿಶೇಷ ಗುಣವನ್ನು ಹೊಂದಿರುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನದವರ ಗುಣ ಸ್ವಭಾವವನ್ನು ನೋಡುವುದಾದರೆ ವೃಶ್ಚಿಕ ರಾಶಿಯು ಜಲತತ್ವರಾಶಿಯಾಗಿದ್ದು, ಈ ರಾಶಿಯ ಅಧಿಪತಿ ಮಂಗಳಗ್ರಹ ಆಗಿದೆ. ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ ಅಲ್ಲದೆ ಹಠವಾದಿಗಳು ಆಗಿರುತ್ತಾರೆ ಹಾಗೂ ಸಾಹಸಿಗಳು ಆಗಿರುತ್ತಾರೆ. ಇವರು ತನಗೆ ಇಷ್ಟವಾದ ದಾರಿಯಲ್ಲಿ ಹೋಗುತ್ತಾರೆ, ಯಾರ ಹಸ್ತಕ್ಷೇಪವು ಇವರಿಗೆ ಇಷ್ಟ ಆಗುವುದಿಲ್ಲ. ಇವರು ಪರಿಶ್ರಮಿಗಳಾಗಿರುತ್ತಾರೆ. ಇವರಿಗೆ ಯಾವುದೆ ಕೆಲಸವನ್ನು ಕೊಟ್ಟರೂ ಕೂಡ ಅದನ್ನು ಪೋಕಸ್ ಆಗಿ ಫಾಸ್ಟಾಗಿ ಮಾಡುತ್ತಾರೆ.

ಇವರು ತನ್ನ ಕಾರ್ಯವನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ. ಇವರು ಯಾವಾಗಲೂ ಬ್ಯುಸಿಯಾಗಿರುತ್ತಾರೆ ಹಾಗೂ ಬಲಿಷ್ಠವಾಗಿ ಇರುತ್ತಾರೆ. ಇವರಿಗೆ ಅನಾರೋಗ್ಯ ಜಾಸ್ತಿ ಕಾಡುವುದಿಲ್ಲ ಇವರು ದೃಢಪ್ರತಿಜ್ಞೆ ಮಾಡುತ್ತಾರೆ. ಇವರು ಯಾರಿಗಾದರೂ ಮಾತು ಕೊಟ್ಟರೆ ಪ್ರಾಮಿಸ್ ಮಾಡಿದರೆ ಕಡೆಯವರೆಗೂ ಅದನ್ನು ನಿಭಾಯಿಸುತ್ತಾರೆ ಅಂತ ಹೇಳಬಹುದು. ಇವರಿಗೆ ಸಿಟ್ಟು ಬೇಗ ಬರುತ್ತದೆ, ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಬರುತ್ತದೆ.

ಇವರಿಗೆ ಸಿಟ್ಟು ಬಂದರೆ ಹಿಂದೆ ಮುಂದೆ ನೋಡದೆ ಸ್ಟ್ರೈಟ್ ಆಗಿ ಮಾತನಾಡುತ್ತಾರೆ. ಇದರಿಂದ ಇವರಿಗೂ ತೊಂದರೆಯಾಗುತ್ತದೆ ಹಾಗೂ ಬೇರೆಯವರಿಗೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಮತ್ತು ಯಾರಾದರೂ ಇವರ ವಿರುದ್ಧ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಇದರ ಪರಿಣಾಮದ ಬಗ್ಗೆ ಯೋಚಿಸದೆ ವಾದಿಸುತ್ತಾರೆ ಅಂತ ಹೇಳಬಹುದು. ಇವರು ಹೊರಗಿನಿಂದ ಕಠೋರವಾಗಿ ಕಾಣುತ್ತಾರೆ, ಇವರ ಮಾತು ಕಟೋರವಾಗಿರುತ್ತದೆ ಆದರೆ ಅವರ ಮನಸ್ಸು ತುಂಬಾ ಮೃದುವಾಗಿರುತ್ತದೆ.

ಇವರು ಬಹಳ ಎಮೋಷನಲ್ ಆಗಿರುತ್ತಾರೆ ಇವರು ತಮ್ಮ ಭಾವನೆಗಳನ್ನು ಬಚ್ಚಿ ಇಟ್ಟುಕೊಂಡಿರುತ್ತಾರೆ ಅದನ್ನು ತೋರಿಸಿಕೊಳ್ಳುವುದಿಲ್ಲ ಆದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಆಗುತ್ತದೆ. ಇವರಿಗೆ ಬೇರೆಯವರಲ್ಲಿ ದೋಷ ಹುಡುಕುವ ಸ್ವಭಾವ ಇರಬಹುದು. ಇವರಿಗೆ ತನ್ನ ತಾಯಿಯ ಜೊತೆ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ ಎಂದು ಹೇಳಬಹುದು. ಇವರು ಜನರ ಜೊತೆಗೆ ಬೇಗ ಬೆರೆಯುತ್ತಾರೆ ಇವರ ಮೆಮೋರಿ ಪವರ್ ಬಹಳ ಚೆನ್ನಾಗಿರುತ್ತದೆ.

ಇವರು ಯಾವುದನ್ನೂ ಮರೆಯುವುದಿಲ್ಲ ಇವರಿಗೆ ಯಾರಾದರೂ ಮೋಸ ಮಾಡಿದರೆ ಶತ್ರುತ್ವ ಬೆಳೆಸಿಕೊಂಡರೆ ಅದನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಹೇಳಬಹುದು. ಇವರಿಗೆ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ ಇವರು ರೂಲ್ಸ್ ಅನ್ನು ಫಾಲೊ ಮಾಡುತ್ತಾರೆ ಯಾರಾದರೂ ರೂಲ್ಸ್ ಅನ್ನು ಬ್ರೇಕ್ ಮಾಡಿದರೆ ಇವರಿಗೆ ಇಷ್ಟ ಆಗುವುದಿಲ್ಲ. ಇವರು ಧಾರ್ಮಿಕತೆಯಲ್ಲಿ ಆಸಕ್ತರಾಗಿರುತ್ತಾರೆ, ಇವರು ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಮರ್ಪಿತರಾಗಿರುತ್ತಾರೆ. ಇವರು ತನ್ನ ಪ್ರೀತಿಪಾತ್ರರಿಗೆ ಸರ್ವಸ್ವವನ್ನು ಅರ್ಪಿಸುತ್ತಾರೆ.

ಇವರು ತನ್ನ ಪರಿಶ್ರಮದಿಂದ ಜೀವನದಲ್ಲಿ ಸಫಲರಾಗುತ್ತಾರೆ. ಇವರು ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರಾಗಿರುತ್ತಾರೆ, ಧನ ಹಾಗೂ ಸಂಪತ್ತು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಇವರು ಪ್ರೀತಿಯ ವಿಷಯದಲ್ಲಿ ಬಹಳ ಎಮೋಷನಲ್ ಆಗಿರುತ್ತಾರೆ. ಇವರು ಒಳ್ಳೆಯ ಸಂಗಾತಿಯಾಗಿರುತ್ತಾರೆ ಜೊತೆಗೆ ಇವರು ಬುದ್ದಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುತ್ತಾರೆ. ಇವರು ತನ್ನ ಪರಿವಾರದವರನ್ನು ಬಹಳ ಕೇರ್ ಮಾಡುತ್ತಾರೆ, ಇವರು ಉದಾರಿಗಳು ಆಗಿರುತ್ತಾರೆ.

ಇವರಿಗೆ ಏಕಾಗ್ರತೆ ಜಾಸ್ತಿ ಇರುತ್ತದೆ ಮತ್ತು ಸ್ವಲ್ಪ ಮೂಡಿಯಾಗಿ ಇರುತ್ತಾರೆ. ಇವರಿಗೆ ಗುಪ್ತ ವಿದ್ಯೆಯಲ್ಲಿ ಇಂಟರೆಸ್ಟ್ ಇರುತ್ತದೆ. ಇವರು ಎಲ್ಲರ ಮೇಲೆ ಡೌಟ್ ಜಾಸ್ತಿ ಪಡುತ್ತಾರೆ. ಇವರಿಗೆ ಪೊಸೆಸಿವ್ ನೆಸ್ ಜಾಸ್ತಿ ಇರುತ್ತದೆ. ಇವರು ಜನರನ್ನು ನಂಬುವುದಕ್ಕೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ, ಇವರು ಯಾರನ್ನು ಬೇಗ ನಂಬುವುದಿಲ್ಲ ಇವರು ಎಚ್ಚರದಿಂದ ಇರುತ್ತಾರೆ. ಇವರಿಗೆ ಮೋಸ ಮಾಡುವುದು ಬಹಳ ಕಷ್ಟ. ಇವರು ರಾಜನೀತಿಯಲ್ಲಿ ಚತುರರಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಇದು ಈ ರಾಶಿಯವರ ವಿಶೇಷ ಗುಣ ಆಗಿರುತ್ತದೆ. ಇವರು ಸ್ಥಿರವಾಗಿರುತ್ತಾರೆ, ಬುದ್ಧಿವಂತರಾಗಿರುತ್ತಾರೆ. ಪ್ರಕೃತಿಯನ್ನು ಇವರು ಬಹಳ ಇಷ್ಟಪಡುತ್ತಾರೆ. ಯಾವುದೆ ವಿಷಯ ಆದರೂ ಆಳಕ್ಕಿಳಿದು ಸತ್ಯವನ್ನು ಹುಡುಕುವುದಕ್ಕೆ ಪ್ರಯತ್ನ ಮಾಡುತ್ತಾರೆ.

ಇವರು ದೃಢ ನಿಶ್ಚಯದವರು ಆಗಿರುತ್ತಾರೆ ಮತ್ತು ಶಾಂತವಾಗಿರುತ್ತಾರೆ, ಧೈರ್ಯವಂತರಾಗಿರುತ್ತಾರೆ. ಇವರು ತನಗೆ ಸಿಗುವಂತಹ ಅಪಾರ್ಚುನಿಟಿಯನ್ನು ಚೆನ್ನಾಗಿ ಯುಟಿಲೈಸ್ ಮಾಡುತ್ತಾರೆ. ಬೇರೆಯವರ ಯೋಚನೆಯನ್ನು ಬೇಗ ಕಂಡುಹಿಡಿಯುತ್ತಾರೆ. ಇವರು ಬಹಳ ಯೋಚಿಸಿ ಖರ್ಚು ಮಾಡುತ್ತಾರೆ. ತನ್ನ ರಹಸ್ಯವನ್ನು ಯಾರೊಂದಿಗೂ ಹೇಳುವುದಿಲ್ಲ ಇವರು ಒಂದು ವೇಳೆ ಹೇಳಿದರೆ ಮುಕ್ತವಾಗಿ ಎಲ್ಲವನ್ನು ಹೇಳಿಬಿಡುತ್ತಾರೆ. ಇವರು ಇವರ ಲೈಫ್ ನಲ್ಲಿ ಯಾವುದೆ ಪ್ರಾಬ್ಲಮ್ ಬಂದರೂ ಧೈರ್ಯವಾಗಿ ಎದುರಿಸುತ್ತಾರೆ. ಇವರ ಮೈಂಡ್ ಕ್ಲಿಯರ್ ಆಗಿರುತ್ತದೆ. ಏನೆ ಇದ್ದರೂ ಡೈರೆಕ್ಟಾಗಿ ಹೇಳುತ್ತಾರೆ ಸ್ಟ್ರೈಟ್ ಫಾರ್ವರ್ಡ್ ಆಗಿರುತ್ತಾರೆ, ಇವರು ಗೋಲ್ ಅನ್ನು ಅಚೀವ್ ಮಾಡುತ್ತಾರೆ. ಇವರ ಕರಿಯರನ್ನು ನೋಡುವುದಾದರೆ ಇವರಿಗೆ ರಾಜನೀತಿ, ಸಮಾಜಸೇವೆ, ಪೊಲೀಸ್ ಮಿಲಿಟರಿ, ಡಾಕ್ಟರ್ ಟೀಚರ್ ಹಾಗೂ ಅಗ್ನಿಗೆ ಸಂಬಂಧಿಸಿದ ಕೆಲಸಗಳು ಹಾಗೂ ಬಿಜಿನೆಸ್ ಗಳು ಇವರು ಆಯ್ಕೆ ಮಾಡಿಕೊಳ್ಳಬಹುದು.

ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಅಸಿಡಿಟಿ, ಕತ್ತು ಹಾಗೂ ಕರುಳಿಗೆ ಸಂಬಂಧಿಸಿದ ಖಾಯಿಲೆಗಳು ಪೈಲ್ಸ್, ಜನನಾಂಗಕ್ಕೆ ಸಂಬಂಧಿಸಿದ ಖಾಯಿಲೆಗಳು ಮತ್ತು ಅಲ್ಸರ್ ನಂತಹ ಖಾಯಿಲೆಗಳು ಬರಬಹುದು. ಇವರಿಗೆ ಸಜೇಶನ್ ಕೊಡುವುದಾದರೆ ಇವರಿಗೆ ಸಿಟ್ಟು ಜಾಸ್ತಿ ಬರುವುದರಿಂದ ಅದನ್ನು ಕಡಿಮೆ ಮಾಡಿಕೊಳ್ಳಬೇಕು. ಸ್ವಲ್ಪ ಮೃದುವಾಗಿ ಮಾತನಾಡಿದರೆ ಒಳ್ಳೆಯದು ಖಾರವಾದ ಪದಾರ್ಥಗಳನ್ನು ಜಾಸ್ತಿ ಸೇವಿಸಬಾರದು ಇದರಿಂದ ಹೆಲ್ತ್ ಪ್ರಾಬ್ಲಮ್ ಜಾಸ್ತಿಯಾಗುತ್ತದೆ. ಮಂಗಳವಾರ ಸಾಲವನ್ನು ಪಡೆಯಬಾರದು, ಇನ್ನು ಹನುಮನ ಮಂದಿರದಲ್ಲಿ ಹನುಮಾನ್ ಚಾಲೀಸವನ್ನು ಪಠಿಸಿದರೆ ಮತ್ತು ಓಂ ಮಂಗಳಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ಇವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ವೃಶ್ಚಿಕ ರಾಶಿಯವರಿಗೆ ತಿಳಿಸಿ.

Leave a Reply

Your email address will not be published. Required fields are marked *