ಕನ್ಯಾ ರಾಶಿಯವರಿಗೆ ಯುಗಾದಿ ಭವಿಷ್ಯ ಚನ್ನಾಗಿದೆ, ಆದ್ರೆ ಈ 2 ವಿಷಯದಲ್ಲಿ ಎಚ್ಚರವಹಿಸಿ

0 2,266

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕನ್ಯಾ ರಾಶಿಯವರ ಯುಗಾದಿ ಹಬ್ಬದ ವಾರ್ಷಿಕ ಭವಿಷ್ಯವನ್ನು ತಿಳಿಯೋಣ.

ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ ಹಬ್ಬ. ಮೇಷ ರಾಶಿಯಲ್ಲಿ ಇದ್ದ ಗುರು ಗ್ರಹ ಮೇ ತಿಂಗಳ 1 ನೇ ತಾರೀಖು ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕನ್ಯಾ ರಾಶಿಯ ಜನರಿಗೆ ಗುರು ಬಲ ಇರುವುದಿಲ್ಲ. ಮೇ ತಿಂಗಳಿನಿಂದ ಗುರು ಗ್ರಹದ ಸ್ಥಾನ ಬದಲಾವಣೆ ಕನ್ಯಾ ರಾಶಿಯ ಜನರಿಗೆ ಹೆಚ್ಚು ಒಳ್ಳೆಯ ಮಂಗಳಕರ ಫಲಗಳನ್ನು ತಂದು ಕೊಡುತ್ತದೆ. ಲಕ್ಷ್ಮಿ ನಾರಾಯಣ ಯೋಗ ಉಂಟಾಗುತ್ತದೆ ಅದರಿಂದ, ಹೆಚ್ಚು ಧನ ಲಾಭ ಪಡೆಯಬಹುದು. ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಇದೆ ಡಿಸೆಂಬರ್ ತಿಂಗಳವರೆಗೂ ಆ ಗ್ರಹ ಯಾವ ಸ್ಥಾನ ಬದಲಾವಣೆ ಮಾಡುವುದಿಲ್ಲ.

ಆದಾಯ 5, ಅದೇ ರೀತಿ ಖರ್ಚು ವೆಚ್ಚ ಕೂಡ 5 ಈ ರಾಶಿಯವರು ಗಳಿಕೆ ಮಾಡಿದ ಹಣವನ್ನು ಖರ್ಚು ಮಾಡುವರು ಯಾವುದೇ, ಉಳಿತಾಯ ಮಾಡುವುದಿಲ್ಲ. ಇವರದ್ದು ಬುಧತತ್ವ ರಾಶಿ ಅಂದರೆ ಎಲ್ಲವನ್ನು ಸಮತೋಲನವಾಗಿ ಸರಿದೂಗಿಸಿಕೊಂಡು ಹೋಗುವರು.

ಹೊಸ ಬ್ಯುಸಿನೆಸ್ ಉಪಾಯಗಳನ್ನು ಮಾಡುವ ಮತ್ತು ಕ್ರಿಯಾಶೀಲವಾಗಿ ಆಲೋಚನೆ ಮಾಡುವ ಸಾಮರ್ಥ್ಯ ಈ ರಾಶಿಯ ಜನರಿಗೆ ಇದೆ. ಕೇತು ಗ್ರಹ ಜ್ಞಾನವನ್ನು ನೀಡಬಹುದು, ವೈರಾಗ್ಯವನ್ನು ನೀಡಬಹುದು, ಸಂಪತ್ತನ್ನು ಕೊಡಬಹುದು ಇಲ್ಲ ಅದನ್ನು ನಾಶ ಕೂಡ ಮಾಡಬಹುದು.

ಕೇತು ಗ್ರಹ ಮನಸಿಗೆ ಹೆಚ್ಚು ಚಿತ್ರ-ವಿಚಿತ್ರವಾದ ಆಲೋಚನೆ ನೀಡುತ್ತದೆ. ಕೆಲಸಗಳಲ್ಲಿ ಮಧ್ಯವರ್ತಿಗಳಿಂದ ದೂರ ಇರುವುದು ಒಳ್ಳೆಯದು. ಸರ್ಕಾರಿ ಜಮೀನು ಖರೀದಿ, ಭೂ ಸ್ವಾಧೀನ ಮಾಡಿಕೊಳ್ಳುವುದು ಎಲ್ಲಾ ಒಳ್ಳೆ ಫಲಗಳನ್ನು ಕೊಡುತ್ತದೆ.

ಆಶ್ವಾಸನೆ ಮತ್ತು ಭರವಸೆಗಳನ್ನು ನಂಬಿ ಮುಂದುವರೆಯುವುದು ತಪ್ಪು. ಆರೋಗ್ಯದ ಕಡೆ ಕೂಡ ಹೆಚ್ಚು ಗಮನ ಕೊಡಬೇಕು. ಮೇ ತಿಂಗಳ ಒಳಗೆ ಮನೆ ಖರೀದಿ ಹಾಗೂ ವಾಹನ ಖರೀದಿ ಮಾಡಬೇಕು. ಇಲ್ಲದೆ ಹೋದರೆ ಅಕ್ಟೋಬರ್ ತಿಂಗಳಲ್ಲಿ ಖರೀದಿ ಮಾಡಲು ಒಳ್ಳೆಯ ಸಮಯ. ಸಾಲ ಬಾಧೆ ನಿವಾರಣೆ ಆಗುತ್ತದೆ. ಸಂತಾನ ಸಮಸ್ಯೆಗೆ ಸ್ವಲ್ಪ ಅಡ್ಡಿ ಆತಂಕ ಕಾಡಬಹುದು.

ಕಂಕಣ ಭಾಗ್ಯ ಕೂಡಿ ಬರುತ್ತದೆ, ವಿದೇಶದಿಂದ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇರುತ್ತದೆ. ಮೇ ತಿಂಗಳಿನಿಂದ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಇರುವುದು ಕನ್ಯಾ ರಾಶಿಯ ಜನರಿಗೆ ಉತ್ತಮ ಆಯ್ಕೆ.ಹೊಸ ಉದ್ಯೋಗ ಹುಡುಕುವ ಜನರಿಗೆ ಕೆಲಸ ಸಿಗುತ್ತದೆ. ಸಮಯ ತೆಗೆದುಕೊಂಡು ನಿರ್ಧಾರಗಳನ್ನು ಮಾಡಿದರೆ ಒಳ್ಳೆಯದು. ಹೆಚ್ಚು ಆಲೋಚನೆ ಮಾಡಿ ರಾಜಕೀಯ ವಿಚಾರಗಳ ನಿರ್ಧಾರ ಕೈಗೊಂಡರೆ ತುಂಬ ಒಳ್ಳೆಯದು.

ಪರಿಹಾರಗಳು :-ಲಲಿತಾ ಸಹಸ್ರ ನಾಮದ ಒಂದು ಮಂತ್ರವನ್ನು ಪಠಿಸಬೇಕು. ಇದು ಹಣದ ಗಳಿಕೆ ಹೆಚ್ಚು ಮಾಡುತ್ತದೆ ಹಾಗೂ ಹಣವನ್ನು ಉಳಿತಾಯ ಮಾಡುವುದಕ್ಕೆ ಸಹಾಯ ಮಾಡುತ್ತದೆ.
” ಓಂ ಸಂಪತ್’ಕರಿ ಸಮರೂಢ ಸಿಂಧೂರ ರಜಸೇವಿತಾಯೇ ನಮೋ ನಮಃ. ” ಪ್ರತಿ ದಿನ ಸಾಧ್ಯವಾದಷ್ಟು ಬಾರಿ ಈ ಮಂತ್ರವನ್ನು ಜಪ ಮಾಡಬೇಕು. ಕೇತು ಗ್ರಹದ ಶಾಂತಿಗೆ ಪ್ರತಿ ದಿನ ಗಣಪತಿ ದೇವರ ಆರಾಧನೆಯನ್ನು ಹುಲ್ಲಿನ ಗರಿಕೆ ಇಟ್ಟು ಮಾಡಬೇಕು.

ಪ್ರತಿ ದಿನ ಕಾಲಭೈರವನ ಆರಾಧನೆ ಮಾಡಬೇಕು.
ಚಂಡಿ ಆರಾಧನೆ ಮತ್ತು ಚಂಡಿ ಯಾಗದಲ್ಲಿ ಪಾಲುಗೊಳ್ಳಬೇಕು.
ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.