Indian Temple: ಜೀವನದಲ್ಲಿ ನೀವು ಕಳೆದುಕೊಂಡಿದ್ದು ಏನೇ ಇರಲಿ, ಮರಳಿ ತಕ್ಷಣ ನೀಡುತ್ತಾಳೆ ಈ ದೇವಿ

0 100

Indian Temple: ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ (Shri Rajarajeshwari) ದೇವಸ್ಥಾನದ ಮಹಿಮೆಯನ್ನು ನಾವು ಇಲ್ಲಿ ನೋಡಬಹುದು. ನಿಮ್ಮ ಸಂಕಷ್ಟಗಳನ್ನೆಲ್ಲ ಪರಿಹಾರ ಮಾಡುವಂತಹ ಮಹಾ ಶಕ್ತಿಯಾದ ಈ ತಾಯಿಯು ನೀವು ಕಳೆದುಕೊಂಡಿದ್ದನ್ನು ಮರಳಿ ನೀಡುತ್ತಾಳೆ ಎಂದು ಹೇಳುತ್ತಾರೆ. ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಗಳನ್ನ ತಾಯಿ ರಾಜೇಶ್ವರಿ ಮುಂದೆ ಹೇಳಿಕೊಳ್ಳಿ ನಿಮ್ಮ ಎಲ್ಲಾ ಕಷ್ಟಗಳಿಗೂ ಪರಿಹಾರ ಕಂಡುಕೊಳ್ಳಿ

ಈ ದೇವಸ್ಥಾನದ ಹಿನ್ನೆಲೆಯನ್ನ ನೋಡುವುದಾದರೆ ಇದು ತುಂಬಾ ಪುರಾತನವಾದ ದೇವಸ್ಥಾನವಾಗಿದ್ದು ಈ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ.ಶ್ರೀ ರಾಜರಾಜೇಶ್ವರೀ (Shri Rajarajeshwari) ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಇತಿಹಾಸದಲ್ಲಿ ಹೇಳಲಾಗುತ್ತದೆ. ಸುರಥ ಮಹಾರಾಜನ ಆಸ್ಥಾನಕ್ಕೆ ಶತ್ರುಗಳ ಆಕ್ರಮಣದಿಂದ ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಕಾಡು ದಾರಿಯಲ್ಲಿ ಹೋಗುತ್ತಿರುವಾಗ ಸುಮೇಧ ಎಂಬ ಮುನಿ ಸಿಕ್ಕಿದರು ಆಗ ಸುರಥ ಮಹಾರಾಜನು ತನ್ನ ಕಷ್ಟಗಳನ್ನೆಲ್ಲ ಸುಮೇದ ಮುನಿಯವರ ಹತ್ತಿರ ಹೇಳಿಕೊಂಡನು.

ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನು ಮಾಡಿದನು. ರಾಜನು ಶ್ರೀದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಂಡ ಅರಸ ವಿಷಯವನ್ನು ಮುನಿಗೆ ತಿಳಿಸಿದ ಆಗ ಮುನಿ ನೀನು ಕಂಡಂತೆ ಮೂರ್ತಿಯನ್ನು ಸೃಷ್ಟಿಸಿ ಅದನ್ನು ಪೂಜಿಸು ಎಂದು ಮಾರ್ಗದರ್ಶನ ನೀಡುತ್ತಾನೆ. ಇದನ್ನು ಮಾಡಿದ ನಂತರ ಮಹಾರಾಜನಿಗೆ ಮರಳಿ ತನ್ನ ಆಸ್ಥಾನ ಸಿಕ್ಕಿತು ಎಂದು ಹೇಳುತ್ತಾರೆ.

ಇನ್ನು ಹುಳಿನಾಪುರ ದೇವಸ್ಥಾನದ ಬಗ್ಗೆ ನೋಡುವುದಾದರೆ
ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ ಎಂದು ಹೆಸರು ಬಂತು. ಪವಿತ್ರವಾದ ಪಲ್ಗುಣಿ ನದಿಯ ಎಡದಂಡೆಯಲ್ಲಿ ಹೊಲ, ಗುಡ್ಡ ಬೆಟ್ಟಗಳ ಮದ್ಯದಲ್ಲಿ ಶ್ರೀ ಕ್ಷೇತ್ರ ರಾರಾಜಿಸುತ್ತಿದೆ. ಶ್ರೀಕ್ಷೇತ್ರದ ಹೊರಾಂಗಣದ ಬಲಭಾಗದಲ್ಲಿ ದುರ್ಗಾಪರಮೇಶ್ವರಿಯ ಗುಡಿ ಇದ್ದು, ಎಡ ಭಾಗದಲ್ಲಿ ಕ್ಷೇತ್ರ ಪಾಲನ ಗುಡಿ ಇದೆ. ಸ್ವಾಮಿ ಸುಬ್ರಹ್ಮಣ್ಯನ ಸನ್ನಿಧಿ ಕೂಡ ತುಂಬಾ ವಿಶೇಷವಾಗಿದೆ.

ಈ ದೇವಸ್ಥಾನದ ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರಿ,ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ. ರಾಜರಾಜೇಶ್ವರಿಯ ಮಹಿಮೆಯನ್ನು ಕೇಳಿದ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಕೇಳಿದ್ದನ್ನು ಕೊಡುವುದೇ ಈ ತಾಯಿಯ ಮಹಿಮೆ. ಮಂಗಳವಾರ, ಗುರುವಾರ ಆದಿತ್ಯವಾರಗಳಲ್ಲಿ ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ.

ಈ ತಾಯಿಗೆ 18 ಮೊಳದ ಸೀರೆ ನೀಡುವುದು ವಿಶೇಷವಾಗಿದೆ ಹಾಗೂ ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ. ಈ ಸಾನಿಧ್ಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ, ನಿಮ್ಮ ಆಸೆ ಆಕಾಂಕ್ಷೆಗಳನ್ನು ಕೂಡ ರಾಜರಾಜೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ನಿಮಗೂ ಕೂಡ ಆ ತಾಯಿ ಕೇಳಿದ್ದನ್ನು ನೀಡಿ ಸಹಕರಿಸಲಿ ಎಂದು ಆಶಿಸುತ್ತೇನೆ. ಇದನ್ನೂ ಓದಿ.. ದುಡ್ಡು ಕಾಸಿನ ಏನೇ ಸಮಸ್ಯೆ ಇರಲಿ 5 ನಿಮಿಷದಲ್ಲಿ ಬಗೆಹರಿಸುತ್ತಾಳೆ ಈ ಶಕ್ತಿಶಾಲಿ ದೇವತೆ

Leave A Reply

Your email address will not be published.