ಸಿಂಹ ರಾಶಿ ಹಾಗೂ ಸಿಂಹ ಲಗ್ನದವರ ಬಗ್ಗೆ ನೋಡುವುದಾದರೆ, ಇದು ಅಗ್ನಿತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಸೂರ್ಯ ಗ್ರಹವಾಗಿದೆ. ಸಿಂಹ ರಾಶಿಯವರ ಗುಣ, ಸ್ವಭಾವ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಸಿಂಹ ರಾಶಿಯವರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ ಇವರ ಕಣ್ಣು ಹಾಗೂ ಮುಖ ತೇಜಸ್ಸಿನಿಂದ ಕೂಡಿರುತ್ತದೆ. ಇವರು ನಿರ್ಬೀತರಾಗಿದ್ದು ಉದಾರಿಗಳಾಗಿದ್ದು ವಿಶಾಲ ಮನಸ್ಸಿನವರಾಗಿರುತ್ತಾರೆ. ಎಲ್ಲರಿಗೂ ಸಹಾಯ ಮಾಡುತ್ತಾರೆ ಸಂಬಂಧಿಕರು ಹಾಗೂ ಸ್ನೇಹಿತರ ಮೇಲೆ ಅತಿಯಾದ ವಿಶ್ವಾಸ ಇಡುತ್ತಾರೆ. ಇವರು ಆದರ್ಶವಾದಿಗಳಾಗಿರುತ್ತಾರೆ ಬುದ್ಧಿವಂತರಾಗಿರುತ್ತಾರೆ.

ಇವರು ಓಪನ್ ಮೈಂಡ್ ಸ್ವಭಾವವನ್ನು ಹೊಂದಿರುತ್ತಾರೆ. ಇವರು ತಮ್ಮ ನಿರ್ಣಯಗಳು ಯಾವಾಗಲೂ ಸರಿಯಾಗಿರುತ್ತದೆ ಎಂದು ಭಾವಿಸುತ್ತಾರೆ ಹಾಗೂ ಎಂಥಹ ಸಿಚುವೇಷನ್ ಬಂದರೂ ಇವರು ನಿರ್ಧಾರದ ಬಗ್ಗೆ ಸ್ಥಿರವಾಗಿರುತ್ತಾರೆ. ಇವರಿಗೆ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಧರ್ಮದ ಹೆಸರಿನಲ್ಲಿ ಮೋಸ ಮಾಡುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ.

ಸಿಂಹ ರಾಶಿಯವರು ಆಸ್ತಿಕರು, ದಾನಿಗಳು ಆಗಿದ್ದು ಮಾನವೀಯ ಗುಣವನ್ನು ಹೊಂದಿರುತ್ತಾರೆ. ಸ್ಥಿರತೆ ಈ ರಾಶಿಯವರ ವಿಶೇಷ ಗುಣವಾಗಿದೆ. ಇವರು ಯಾರಿಗೂ ಮೋಸ ಮಾಡುವುದಿಲ್ಲ ಹಾಗೆಯೆ ಬೇರೆಯವರಿಂದ ಮೋಸವನ್ನು ಸಹಿಸುವುದಿಲ್ಲ. ಇವರಿಗೆ ಸಿಟ್ಟು ಜಾಸ್ತಿ ಇರುತ್ತದೆ ಆದರೆ ಅಷ್ಟೆ ಬೇಗ ಶಾಂತವಾಗುತ್ತಾರೆ. ಇವರಿಗೆ ಫುಡ್ ಹಾಗೂ ಬೆಟ್ಟ ಗುಡ್ಡ ಟ್ರಾವೆಲ್ ನಲ್ಲಿ ಆಸಕ್ತಿ ಇರುತ್ತದೆ. ಇವರು ಸ್ವಾಭಿಮಾನಿಗಳು ಆಗಿರುತ್ತಾರೆ. ಇವರು ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇಷ್ಟ ಪಡುವುದಿಲ್ಲ, ಯಾರ ಒತ್ತಡವು ಇಲ್ಲದೆ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಇವರು ತನ್ನ ಶ್ರಮದಿಂದ ಕೀರ್ತಿ, ಪ್ರತಿಷ್ಠೆ ಪಡೆಯುತ್ತಾರೆ.

ಇವರು ಲಾಯಲ್ ಆಗಿರುವ ಸಂಗಾತಿಯನ್ನು ಬಯಸುತ್ತಾರೆ, ಇವರು ತಮ್ಮ ಪ್ರೀತಿಯನ್ನು ಕೊನೆಯವರೆಗೂ ನಿಭಾಯಿಸುತ್ತಾರೆ. ಇವರಿಗೆ ತಮ್ಮ ದಾಂಪತ್ಯ ಜೀವನದಲ್ಲಿ ಬೇರೆಯವರು ಮೂಗು ತೂರಿಸುವುದು ಇಷ್ಟ ಆಗುವುದಿಲ್ಲ. ಇವರ ಡಾಮಿನೇಟ್ ಸ್ವಭಾವದಿಂದ ಜಗಳ ಬರುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಬೇಕು. ಇವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ, ಇವರು ಬೇರೆಯವರಿಗೆ ಗೌರವ ಕೊಡುತ್ತಾರೆ ಹಾಗೂ ಬೇರೆಯವರಿಂದ ಗೌರವವನ್ನು ನಿರೀಕ್ಷೆ ಮಾಡುತ್ತಾರೆ. ಸ್ವತಂತ್ರರಾಗಿ ಬದುಕಲು ಇವರು ಇಷ್ಟಪಡುತ್ತಾರೆ. ಇವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ, ಯಾವುದೆ ಕೆಲಸವನ್ನು ಕಾನ್ಫಿಡೆಂಟ್ ಆಗಿ ಮಾಡುತ್ತಾರೆ.

ಸಿಂಹ ರಾಶಿಯವರು ಸಮಾಜದಲ್ಲಿ ಒಂದು ಸ್ಥಾನವನ್ನು ಹೊಂದಿರುತ್ತಾರೆ ಅದಕ್ಕೆ ಧಕ್ಕೆ ಆಗದಂತೆ ಯಾವುದೆ ಕೆಲಸ ಮಾಡುವುದಿಲ್ಲ. ಕೆಲಸದ ಯಾವುದೆ ಕ್ಷೇತ್ರದಲ್ಲಿ ಇವರು ಗುರುತಿಸಿಕೊಳ್ಳುತ್ತಾರೆ. ಇವರು ಲಕ್ಷುರಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಇವರಿಗೆ ಕೇರಿಂಗ್ ನೇಚರ್ ಇರುತ್ತದೆ, ಇವರು ಹೊಗಳಿಕೆಗೆ ಬೇಗ ಕರಗುತ್ತಾರೆ ಇವರ ಜೀವನದಲ್ಲಿ ಎಷ್ಟೆ ಕಷ್ಟ ಬಂದರು ಕುಗ್ಗುವುದಿಲ್ಲ. ಇವರು ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳುವುದಿಲ್ಲ. ಇವರು ಸರ್ಕಾರ ಹಾಗೂ ರಾಜನೀತಿಗೆ ಸಂಬಂಧಿಸಿದ ಕೆಲಸಗಳು, ಶಿಕ್ಷಣ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸಗಳು, ಚಿನ್ನ ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದ ಕೆಲಸ ಫಿಲ್ಮ್ ಇಂಡಸ್ಟ್ರಿಯಲ್ಲಿ ಮಾಡುವ ಕೆಲಸಗಳಿಗೆ ಇವರು ಸೂಕ್ತರಾಗಿರುತ್ತಾರೆ.

ಇವರಿಗೆ ಬೆನ್ನು ನೋವು, ಹಾರ್ಟ್, ಲಿವರ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬರುತ್ತದೆ. ಇವರು ಸೊಂಬೇರಿಯಾಗಿರುತ್ತಾರೆ ಇವರು ಸಿಟ್ಟನ್ನು ನಿಯಂತ್ರಣ ಮಾಡಿಕೊಳ್ಳಬೇಕು ಆಗ ಜೀವನದಲ್ಲಿ ಲವಲವಿಕೆಯಿಂದ ಇರುತ್ತಾರೆ. ಸಿಂಹ ರಾಶಿಯವರು ಸೂರ್ಯ ನಮಸ್ಕಾರ ಮಾಡಬೇಕು ಹಾಗೂ ತಂದೆಯ ಸೇವೆ ಮಾಡಬೇಕು, ಗೋಧಿಯನ್ನು ದಾನ ಮಾಡಬೇಕು ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *