ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ.ಕೆ ರವಿ ಬಗ್ಗೆ ಹೇಳಿರುವ ಮಾತಿಗೆ ಕುಸುಮಾ ಅವರು ತಿರುಗೇಟು ನೀಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಂಸದೆ ಶೋಭಾ ಕರಂದ್ಲಾಜೆ ಅವರು ಡಿ.ಕೆ ರವಿ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ತಿರುಗೇಟು ನೀಡಿದ್ದಾರೆ. ಕುಸುಮಾ ಅವರು ಪ್ರೀತಿಯ ಅಕ್ಕ, ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು, ಮಾಡುತ್ತಿರುವವರು ಯಾರು ಎನ್ನುವುದನ್ನು ಇಡಿ ದೇಶವೆ ನೋಡಿದೆ.

ಈ ಸಂದರ್ಭದಲ್ಲಿ ನನಗೆ ಅಕ್ಕಮಹಾದೇವಿ ಅವರ ‘ನೊಂದವರ ನೋವ ನೋಯದವರೆತ್ತ ಬಲ್ಲರೊ ಎಂಬ ವಚನ ನೆನಪಿಗೆ ಬರುತ್ತಿದೆ’ ಎಂದು ಕರಂದ್ಲಾಜೆಯವರನ್ನು ಉದ್ದೇಶಿಸಿ ಲೇವಡಿ ಮಾಡಿದ್ದಾರೆ. ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದೀರಾ ನಿಮಗೆ ನೀವೆ ಹೇಳಿಕೊಂಡಂತಿದೆ. ಕನ್ನಡಿ ಮುಂದೆ ನಿಂತು ಒಮ್ಮೆ ಈ ಹೇಳಿಕೆಯನ್ನು ಹೇಳಿ ನೋಡಿ ಸತ್ಯ ಮನದಟ್ಟಾಗಬಹುದು ಎಂದು ಕುಸುಮಾ ಹೇಳಿದ್ದಾರೆ. ಹೀಗೆ ಕುಸುಮಾ ಶೋಭಾರಿಗೆ ಎದುರುತ್ತರ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *