ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಯಲ್ಲಿದ್ದು,ಈ ಯೋಜನೆಗಳ ಸೌಲಭ್ಯವನ್ನು ಬಹಳಷ್ಟು ಜನ ಪಡೆಯುತ್ತಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತ ಶಕ್ತಿ ಯೋಜನೆ ಈ ಯೋಜನೆಯಡಿ ರಾಜ್ಯದ ಮಹಿಳೆಯರು ಉಚಿತ ಬಸ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಈ ಯೋಜನೆಯಿಂದ ಮಹಿಳೆಯರು ಸಾಕಷ್ಟು ಅನುಕೂಲ ಪಡೆದುಕೊಂಡಿದ್ದಾರೆ.

ಪ್ರವಾಸಕ್ಕೆ ಹೋಗುವವರು ಹಾಗೂ ತಮ್ಮ ಯಾವುದೇ ಕೆಲಸಕ್ಕೆ ಹೋಗಲು ಫ್ರೀ ಬಸ್ ಯೋಜನೆ ಸಾಕಷ್ಟು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಯಲ್ಲಿ ಇದೀಗ ರಾಜ್ಯ ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದೆ. ಅದೇನು ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ

ಬಸ್ ಹತ್ತುವಾಗ ನಿರ್ವಾಹಕರು ನೀಡಿದ ಪಿಂಕ್ ಟಿಕೆಟ್ ಕಳೆದುಕೊಂಡರೆ ದಂಡ ಪಾವತಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಹೊಸ ಸೂಚನೆ ನೀಡಿದೆ. ಶಕ್ತಿ ಯೋಜನೆ ಅಡಿಯಲ್ಲಿ ಕಳೆದ 10 ತಿಂಗಳಿನಿಂದ ಎಲ್ಲಾ ಕರ್ನಾಟಕ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಲಕ್ಷಾಂತರ ಮಹಿಳೆಯರು ತಮ್ಮ ನೆಚ್ಚಿನ ಸ್ಥಳಗಳಿಗೆ ಪ್ರತಿದಿನ ಬಸ್‌ನಲ್ಲಿ ಪ್ರಯಾಣಿಸಲು, ತಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಲು ಅಥವಾ ಕೆಲಸ ಮಾಡಲು ಇದನ್ನು ಬಳಸುತ್ತಾರೆ. ವಿಶೇಷವಾಗಿ ಅಂತಹ ಮಹಿಳೆಯರಿಗೆ ಪಿಂಕ್ ಟಿಕೆಟ್ ವಿತರಿಸಲು ಸರ್ಕಾರ ಆದೇಶಿಸಿದೆ. ವಿತರಕರು ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡಿ ಕಳೆದುಕೊಂಡರೆ 10 ರೂಪಾಯಿ ದಂಡ ತೆರಬೇಕಾಗುತ್ತದೆ.

ಶಕ್ತಿ ಯೋಜನೆಯ ಅನುಷ್ಠಾನದ ನಂತರ, KSRTC ಹೊರಡಿಸಿದ ಪಿಂಕ್‌ಗಳು ಬಸ್ ನಿರ್ವಾಹಕರ ಕಾರ್ಯಾಚರಣೆಯನ್ನು ಹೆಚ್ಚು ವಿಶಿಷ್ಟಗೊಳಿಸಿವೆ. ಸಾಮಾನ್ಯ ಟಿಕೆಟ್‌ಗಳಂತೆ, ಈ ಪಿಂಕಿ ಟಿಕೇಟ್ ಗಳಲ್ಲಿ ಹಣದ ಮೂಲಕ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿ ತಿಳಿಸುವುದಿಲ್ಲ. ಬದಲಿಗೆ ನಿರ್ವಾಹಕರು ಟಿಕೆಟ್ಗಳಲ್ಲಿ ಘಟಕ? ವಿಭಾಗ, ಇಂದ, ಗೆ ಹಾಗೂ ವೇಳೆ ಎಂಬ ಎಲ್ಲಾ ಖಾಲಿ ಬಿಡಲಾಗಿರುವ ಜಾಗಗಳನ್ನು ಭರ್ತಿ ಮಾಡಿ ತಮ್ಮ ಸಹಿಯನ್ನು ಹಾಕಿ ಮಹಿಳೆಯರಿಗೆ ವಿತರಣೆ ಮಾಡಬೇಕು.

ಶಕ್ತಿ ಯೋಜನೆ ಜಾರಿಗೆ ಬಂದ ನಂತರ, ಜನದಟ್ಟಣೆಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಬಸ್ ಕಂಡಕ್ಟರ್‌ಗಳು ಪಿಂಕ್ ಟಿಕೆಟ್‌ನಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಮಹಿಳೆಯರು ಈ ಪಿಂಕ್ ಟಿಕೆಟ್‌ಗಳನ್ನು ಕಳೆದುಕೊಂಡರೆ, ಸಂಬಂಧಪಟ್ಟ ಮಹಿಳೆಯರಿಗೆ 10 ರೂಪಾಯಿ ದಂಡ ವಿಧಿಸಲು ಆಡಳಿತ ಮಂಡಳಿ ಆದೇಶಿಸಿದೆ.

By

Leave a Reply

Your email address will not be published. Required fields are marked *