ಮಾನಸಿಕ ಒತ್ತಡ ನಿವಾರಿಸುವ ಜೊತೆಗೆ ನೆಮ್ಮದಿ ಸಿಗಲು, ಇದನೊಮ್ಮೆ ತಿಳಿಯಿರಿ

0 0

ಒಮ್ಮೊಮ್ಮೆ ನಾವು ಅಂದು ಕೊಂಡಂತಹ ವಿದ್ಯೆಗೆ ಸರಿಯಾದ ಸ್ಥಾನ ಸಿಗುವುದಿಲ್ಲ. ಕಾಲಕ್ಕೆ ಸರಿಯಾಗಿ ಬೆಲೆ ಸಿಗುವುದಿಲ್ಲ. ಸ್ಥಾನಕ್ಕೆ ಸರಿಯಾದ ಸಂಭಾವನೆ ಸಿಗುವುದಿಲ್ಲ.ಸಂಭಾವನೆಗೆ ತಕ್ಕಂತ ಒಂದು ಖರ್ಚುಗಳಿಲ್ಲ. ಆಗ ಮನುಷ್ಯ ಗಾಬರಿ ಬೀಳುತ್ತಾನೆ.ಇಡೀ ವಿಶ್ವದಲ್ಲಿ 84ಲಕ್ಷ ಸೃಷ್ಟಿಯ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಯ.ಮತ್ತೆ ಯಾವ ಪಕ್ಷಿ ಪ್ರಾಣಿಗಳಿಗೆ ನಾಳೆ ಎನ್ನುವ ಚಿಂತೆ ಇಲ್ಲ.ನಾಳೆ ಎಂಬ ಚಿಂತೆಯಲ್ಲಿ ಗೆದ್ದು ಮನುಷ್ಯರು ಗಾಬರಿಗೊಳ್ಳುತ್ತಾರೆ.ಇಡೀ ಪ್ರಪಂಚದಲ್ಲಿ ಏಕೈಕ ಜೀವಿ ಎಂದರೆ ಅದು ಮನುಷ್ಯ.ಮನೆಬಿಟ್ಟು ಕಣ್ಣೀರು ಹಾಕುವುದು ಅವನೊಬ್ಬನೇ.ಮನುಷ್ಯ ಖಿನ್ನತೆಗೆ ಒಳಗಾಗುತ್ತಾನೆ.ಇದಕ್ಕೊಂದು ಪರಿಹಾರವಿದೆ ಒಂದು ಯಂತ್ರವನ್ನು ಬಳಸಬೇಕು.ಅದರ ಬಗ್ಗೆ ನಾನು ಇಲ್ಲಿ ತಿಳಿಯೋಣ.

ಕೆಲವೊಮ್ಮೆ ಕೆಲವರು ಅನ್ಯಾಯದ ದಾರಿಯಲ್ಲಿ ನಡೆದು ಲಾಭವನ್ನು ಪಡೆದು ಜೀವನದಲ್ಲಿ ಮುಂದಕ್ಕೆ ಬರುತ್ತಾರೆ.ಆದರೆ ನ್ಯಾಯದ ದಾರಿಯಲ್ಲಿ ನಡೆದು ಲಾಭ ಪಡೆಯದೇ ಇರುವವರಿಗೆ ಇದು ಮನಸ್ಸಿಗೆ ಕಿರಿಕಿರಿಯಾಗುತ್ತದೆ.ನಾನು ಇಷ್ಟು ಕಷ್ಟಪಟ್ಟರು ನಮ್ಮ ಹಣೆಬರಹ ಇಷ್ಟೇ ಎಂದು ಬೇಸರಗೊಳ್ಳುತ್ತಾರೆ.ಇದರಿಂದ ಮನುಷ್ಯ ಖಿನ್ನತೆಗೆ ಒಳಗಾಗಿ ನಿಷ್ಕ್ರಿಯ ಆಗುತ್ತಾನೆ.ಅಂತಹ ಸಮಸ್ಯೆಯಿಂದ ಬಳಲುವವರು ಯಾರಾದರೂ ಸರಿ ಅಂತವರಿಗೆ ಪರಿಹಾರವಿದೆ.

ಈ ಸಮಸ್ಯೆಗಳಿಗೆ ಒಂದು ಯಂತ್ರವಿದೆ.ಯಂತ್ರವನ್ನು ಪಂಚಮುಖಿ ರುದ್ರಾಕ್ಷಿಗಳ ಸಮೇತ ನೀರಿನಲ್ಲಿಟ್ಟು ತೀರ್ಥವನ್ನು ಸೇವನೆ ಮಾಡುವುದರಿಂದ ಅದ್ಭುತವಾದ ಪರಿಣಾಮವನ್ನು ಕಾಣಬಹುದಾಗಿದೆ. ಒಂದು ಬೆಳ್ಳಿಯ ಬಟ್ಟಲಲ್ಲಿ ಕುಡಿಯುವ ನೀರನ್ನು ಹಾಕಿ ಒಂದು ಪಂಚಮುಖಿ ರುದ್ರಾಕ್ಷಿಯನ್ನು ಹಾಕಿರಿ.ದಿನಾಲೂ ಬೆಳಿಗ್ಗೆ ಎದ್ದ ತಕ್ಷಣ ಕರ್ಮಗಳನ್ನು ಮುಗಿಸಿ ಅದನ್ನು ಸೇವಿಸಿ.ಇದನ್ನು ದಿನನಿತ್ಯ ಮಾಡಬೇಕು.ಮನೋರೋಗಕ್ಕೆ ಮದ್ದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಪರಿಹಾರಗಳನ್ನು ಮಾಡಿ ನಿಮ್ಮ ಜೀವನದ ಹಾದಿಗಳನ್ನು ಸುಗಮಗೊಳಿಸಿ.ಇದರಿಂದ ನಿಮ್ಮ ಜೀವನ ನಂದನವನವಾಗುತ್ತದೆ.

Leave A Reply

Your email address will not be published.