October Horoscope For Dhanu Rashi: ಮೂಲ ನಕ್ಷತ್ರದ ರಾಶಿಯವರ ನಾಲ್ಕು ಚರಣಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣಗಳು ಉತ್ತರಾಷಾಢ ನಕ್ಷತ್ರದ ಮೊದಲನೇ ಚರಣಗಳನ್ನ ಧನು ರಾಶಿ ಒಳಗೊಂಡಿರುತ್ತದೆ ಇಂತಹ ಧನು ರಾಶಿಯವರ ಅದೃಷ್ಟದ ಬಣ್ಣ ಹಳದಿ ಮತ್ತು ಕೆಂಪು ಬಣ್ಣ ಆಗಿರುತ್ತದೆ ಹಾಗೆಯೇ ಈ ರಾಶಿಯವರ ಅದೃಷ್ಟ ದೇವತೆ ಮಹಾವಿಷ್ಣು ಆಗಿರಲಿದ್ದಾನೆ ಇದರ ಜೊತೆಯಲ್ಲಿ ಧನು ರಾಶಿಯವರ ಮಿತ್ರ ರಾಶಿ ಮೀನ ಹಾಗೂ ಸಿಂಹ ರಾಶಿಗಳಾಗಿರುತ್ತವೆ, ಅದರೊಂದಿಗೆ ಶತ್ರು ರಾಶಿಗಳು ಕಟಕ ವೃಶ್ಚಿಕ ಆಗಿರಲಿದೆ.

ಧನು ರಾಶಿಯವರು ಬಹಳಷ್ಟು ಜ್ಞಾನವನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ ಇಂತಹ ವ್ಯಕ್ತಿಗಳು ಯಾವುದೇ ಒಂದು ಸಂದರ್ಭವನ್ನು ಸುಧಾರಿಸುವಂತಹ ಚಾಣಕ್ಯತೆ ಹಾಗೂ ಕಲೆಯನ್ನ ಹೊಂದಿರುತ್ತಾರೆ ಇಂತಹ ಧನು ರಾಶಿಯವರಿಗೆ ಅಕ್ಟೋಬರ್ ತಿಂಗಳ 5,7,8, 17, 21, 24 ನೇ ತಾರೀಕುಗಳು ಬಹಳ ಅದ್ಭುತವಾದಂತಹ ದಿನಗಳಾಗಿವೆ ಈ ದಿನಗಳಲ್ಲಿ ನೀವು ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಯಶಸ್ಸನ್ನು ಪಡೆಯುತ್ತೀರಿ ಇದರ ಜೊತೆಗೆ ದಿಡೀರ್ ಬದಲಾವಣೆಯಿಂದಾಗಿ ಒಂದಷ್ಟು ಅನುಕೂಲಕರ ಬದಲಾವಣೆಗಳು ನಿಮ್ಮ ಪಾಲಾಗುವ ಸಂದರ್ಭವೂ ಒದಗಿ ಬರಬಹುದು. ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ ನೀವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದಲ್ಲಿ ಅಥವಾ ಪ್ರಾರಂಭಿಸಿದ ಕಾರ್ಯವನ್ನು ಉನ್ನತ ಸ್ಥಾನಕ್ಕೆ ಏರಿಸುವಲ್ಲಿ ಯಶಸ್ಸು ಪಡೆಯುತ್ತೀರಿ.

ಇನ್ನು ಧನು ರಾಶಿಯ ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಉದ್ಯೋಗಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ವಿಶೇಷವಾಗಿ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಸವಾಲುಗಳು ಬರಬಹುದು ಆದರೆ ಅವುಗಳನ್ನು ಸರಿಯಾಗಿ ನಿಭಾಯಿಸುವುದರ ಮೂಲಕ ನಿಮ್ಮ ಯಶಸ್ಸು ನಿಮಗೆ ದೊರೆಯುತ್ತದೆ. ವಿಶೇಷವಾಗಿ ಅಕ್ಟೋಬರ್ ತಿಂಗಳಲ್ಲಿ ರಾಜಕಾರಣಿಗಳಿಗೆ ಕಲಾವಿದರಿಗೆ ಅಥವಾ ಸಂಘ-ಸಂಸ್ಥೆಗಳನ್ನ ನಡೆಸುತ್ತಿರುವವರಿಗೆ ತಮ್ಮ ಸ್ಥಾನಮಾನದಲ್ಲಿ ಇರುವ ನಿರೀಕ್ಷೆಗಳಿಗೆ ಪ್ರತಿಫಲ ದೊರೆಯಬೇಕಾದರೆ ಸ್ವಲ್ಪ ಪ್ರಯತ್ನ ಪಡಬೇಕಾಗುತ್ತದೆ ಇನ್ನೂ ರೈತರಿಗೂ ಕೂಡ ಈ ಸಮಯ ಒಳ್ಳೆಯ ಫಲ ದೊರೆಯಲಿದ್ದು ಉತ್ತಮ ಲಾಭವನ್ನು ಗಳಿಸಲಿದ್ದಾರೆ.

October Horoscope For Dhanu Rashi

ಧನು ರಾಶಿಯವರು ಈ ಒಂದು ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಅದರಂತೆಯೇ ಈ ತಿಂಗಳಿನ ಆರಂಭದ ಭಾಗದಲ್ಲಿ ಧನು ರಾಶಿಯವರ ಮನಸ್ಸಿಗೆ ಸಂತೋಷದ ಸಮಯ ಕಂಡುಬರುವ ಸಾಧ್ಯತೆ ಇದೆ. ಇನ್ನು ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಅವುಗಳನ್ನ ಸರಿದೂಗಿಸುವಲ್ಲಿ ಪ್ರಯತ್ನಪಟ್ಟರೆ ಇಲ್ಲಿಯೂ ಕೂಡ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತವೆ ಜೊತೆಗೆ ರಾಜಕಾರಣಿಗಳಿಗೆ ವಿದ್ಯಾರ್ಥಿಗಳಿಗೆ ಇದು ಬಹಳ ಉಪಯುಕ್ತವಾದ ಸಮಯವಾಗಿರುತ್ತದೆ ಅಷ್ಟೇ ಅಲ್ಲದೆ ಉದ್ಯೋಗದಲ್ಲಿ ಕುಟುಂಬದಲ್ಲಿ ವ್ಯವಹಾರದಲ್ಲಿ ನೆಮ್ಮದಿ ದೊರೆಯಲಿದೆ.

ಇನ್ನು ದ್ವಿತೀಯಾರ್ಧದಲ್ಲಿ ಧನು ರಾಶಿಯವರಿಗೆ ವಿಶೇಷವಾಗಿ ಪತಿ-ಪತ್ನಿಯರ ಮಧ್ಯದಲ್ಲಿ ಅಥವಾ ಪ್ರೇಮಿಗಳ ಮಧ್ಯದಲ್ಲಿ ಬಹಳಷ್ಟು ಹೊಂದಾಣಿಕೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೂ ಕೂಡ ಈ ಸಮಯದಲ್ಲಿ ಉತ್ತಮ ಅವಕಾಶ ಒದಗಿ ಬರಲಿದೆ ಈ ಸಮಯದಲ್ಲಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯ ದೊರೆಯುತ್ತದೆ ಇದರ ಜೊತೆಗೆ ಹಣದ ಒಳಹರಿವು ತಿಂಗಳು ಕೊನೆಯ ಭಾಗದಲ್ಲಿ ಸ್ವಲ್ಪ ಜಾಸ್ತಿಯಾಗಿ ಕಂಡು ಬರುತ್ತದೆ ಒಟ್ಟಾರೆಯಾಗಿ ಧನು ರಾಶಿಯವರಿಗೆ ಈ ತಿಂಗಳಿನಲ್ಲಿ ಬಹಳ ಅದ್ಭುತವಾದ ಫಲ ದೊರೆಯುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *