Mysore: ಅ ನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪತ್ನಿ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ನಡೆದಿದೆ ಅನೈತಿಕ ಸಂಬಂಧದ ಬಗ್ಗೆ ತಿಳಿದ ಗಂಡ ಮನೆಯಲ್ಲಿ ಹೆಂಡತಿ ಜೊತೆಗೆ ಗಲಾಟೆ ಮಾಡಿದ್ದ ಬೆನ್ನಲ್ಲೇ ಈ ಕೃತ್ಯ ನಡೆದಿದೆ.

ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಕೊ ಲೆಯಾದ ದುರ್ದೈವಿ. ಮೈಸೂರಿನ ಬೋಗಾದಿ ನಿವಾಸಿ ಲಿಖಿತಾ ಜೊತೆ 12 ವರ್ಷಗಳ ಹಿಂದೆ ಮಂಜು ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಮಂಜು ಮೃತ ವ್ಯಕ್ತಿ. ಮಂಜುಗೆ 12 ವರ್ಷದ ಹಿಂದೆ ಲಿಖಿತಾ ಎನ್ನುವವಳ ಜೊತೆ ಮದುವೆ ಆಗಿತ್ತು.

ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಳ ಮಧ್ಯಮ ಕುಟುಂಬವಾದರೂ ಮಂಜು, ತನ್ನ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಐದಾರು ವರ್ಷಗಳ ಹಿಂದೆ ಮಂಜು ಪತ್ನಿ ಲಿಖಿತಾಗೆ ಅನೈತಿಕ ಸಂಬಂಧ ಶುರುವಾಯಿತು.

ಲಿಖಿತಾಳ ಊರಾದ ಬೋಗಾದಿಯಲ್ಲಿನ ಯುವಕನ ಜೊತೆ ಅ ನೈ ತಿಕ ಸಂಬಂಧ ಬೆಳೆಸಿಕೊಂಡು ಅವನ ಜೊತೆ ಮನೆ ಬಿಟ್ಟು ಹೋಗಿದ್ದಳು. ಆಗ ರಾಜಿ ಪಂಚಾಯಿತಿ ಮೂಲಕ ಮತ್ತೆ ಪತಿ ಮನೆ ಸೇರಿಸಿಕೊಂಡಿದ್ದಳು. ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ದೊಡ್ಡ ಮನಸ್ಸು ಮಾಡಿ ಮಂಜು ಕ್ಷಮಿಸಿದ್ದ. ಆಗ ಊರಿನವರು ಹಾಗೂ ಸಂಬಂಧಿಗಳು ಲಿಖಿತಾಗೆ ಬುದ್ಧಿ ಹೇಳಿ ಸಂಸಾರ ಸರಿ ಮಾಡಿದ್ದರು. ಆದರೂ ಈ ಬಗ್ಗೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು ಈ ವೇಳೆ ಹೆಂಡತಿಯ ನಡವಳಿಕೆ ಬಗ್ಗೆ ಗಂಡ ಆಗಾಗ್ಗೆ ಪ್ರಶ್ನೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ತನ್ನ ಪತ್ನಿಯ ನಡವಳಿಕೆ ಬಗ್ಗೆ ಮಂಜು ಆಗಾಗ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಲಿಖಿತಾ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದಿದ್ದಾಳೆ ಪ್ರಿಯಕರನ ಜೊತೆ ಸೇರಿ ಲಿಖಿತಾ ತನ್ನ ಗಂಡ ಮಂಜು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಈಗ ಮೈಸೂರಿನ ವಿಜಯನಗರ ಪೋಲೀಸರು ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ. ಈಕೆಯ ಕಾಟಕ್ಕೆ ಅತ್ತೆ ಮಾವ ಕೂಡ ಬಲಿ ಆಗಿದ್ದರು ಈಗ ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡನೂ ಬಲಿ ಆಗಿದ್ದು ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!