ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಇಂದು ನಾವು 2024ರ ಮೀನ ರಾಶಿಯವರ ಜೂನ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ.

1 ನೇ ತಾರೀಖು ಕುಜ ಗ್ರಹ ಮೇಷ ರಾಶಿಯನ್ನು ಪ್ರವೇಶ ಮಾಡುತ್ತದೆ, 12 ನೇ ತಾರೀಖು ಶುಕ್ರ ಗ್ರಹ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತದೆ, 14 ನೇ ತಾರೀಖು ಮಿಥುನ ರಾಶಿಗೆ ಸೂರ್ಯ ಗ್ರಹದ ಪ್ರವೇಶ ಆಗುತ್ತದೆ, 29 ನೇ ತಾರೀಖು ಕಟಕ ರಾಶಿಗೆ ಬುಧ ಗ್ರಹದ ಪ್ರವೇಶ ಆಗುತ್ತದೆ. ಮೀನ ರಾಶಿಯಲ್ಲಿ ಇರುವ ರಾಹು ಗ್ರಹದಿಂದ ಒತ್ತಡ ಮತ್ತು ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಈ ರಾಶಿಯ ಜನರಿಗೆ ಋಣಾತ್ಮಕ ಆಲೋಚನೆಗಳು ಬರುವ ಸಾಧ್ಯತೆ ಇದೆ. ಆತ್ಮಸ್ಥೈರ್ಯ ಜಾಸ್ತಿ ಮಾಡುವ ಕೆಲಸ ಕಾರ್ಯಗಳಲ್ಲಿ ಮೀನ ರಾಶಿಯವರು ಅವರನ್ನು ತೊಡಗಿಸಿಕೊಂಡರೆ ಉತ್ತಮ.

ಈ ರಾಶಿಯವರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಆಗುತ್ತದೆ. ಇದರ ಜೊತೆಗೆ ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಫಲ ಕೂಡ ಸಿಗುತ್ತದೆ. ಈ ಮಾಸದಲ್ಲಿ ಈ ರಾಶಿಯ ಜನರಿಗೆ ಶ್ರೇಯಸ್ಸು, ಕೀರ್ತಿ, ಅಭಿವೃದ್ಧಿ, ಲಾಭ ಎಲ್ಲಾ ಲಭಿಸುತ್ತದೆ. ಈ ರಾಶಿಯ ಧನ ಸ್ಥಾನದಲ್ಲಿ ಕುಜ ಗ್ರಹ ಇರುವ ಕಾರಣ ಹೆಚ್ಚಿನ ಹಣ ಗಳಿಕೆ ಮಾಡುವ ಅವಕಾಶ ಇವರಿಗೆ ಒದಗಿ ಬರುತ್ತದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಉಂಟಾಗುವ ಸಾಧ್ಯತೆ ಇದೆ. ನ್ಯಾಯ ತೀರ್ಮಾನ ಮಾಡುವ ಯೋಗ ಈ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಲಭಿಸುತ್ತದೆ.

ದುಡ್ಡಿಗೆ ಸಂಬಂಧಪಟ್ಟ ವಿಷಯದಲ್ಲಿ ಹೆಚ್ಚಿನ ವೃದ್ಧಿ ಆಗುತ್ತದೆ. ಸಹೋದರರಿಂದ ಸಹಾಯದ ಅಪೇಕ್ಷೆ ಇರುವ ಜನರಿಗೆ ಸಹಾಯ ಸಿಗುತ್ತದೆ. ರಾಶಿಯಲ್ಲಿ ಇರುವ ಬುಧ ಗ್ರಹ, ಶುಕ್ರ ಗ್ರಹ ಮತ್ತು ರವಿ ಗ್ರಹ ಇರುವ ಕಾರಣ ಇವರ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರು-ಪೇರು ಆಗುವ ಸಾಧ್ಯತೆ ಇದೆ. ಆದ್ದರಿಂದ, ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಮೀನ ರಾಶಿಯ ಜನರಿಗೆ ನೂತನ ವಾಹನವನ್ನು ಖರೀದಿ ಮಾಡುವ ಯೋಗ ಈ ಮಾಸದಲ್ಲಿ ಇರುತ್ತದೆ. ವಾಹನದಲ್ಲಿ ಪ್ರಯಾಣ ಮಾಡುವಾಗ ಅಥವಾ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಯಾವುದೇ ಯಂತ್ರ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಸೂಕ್ತ.

ಭೂಮಿಯನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಈ, ರೀತಿಯ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮೀನ ರಾಶಿಯ ಜನರಿಗೆ ಒಳ್ಳೆಯ ಲಾಭ ಸಿಗುತ್ತದೆ. ಕೃಷಿಗೆ ಸಂಬಂಧಪಟ್ಟ ವಿಚಾರದಲ್ಲಿ ಒಳ್ಳೆಯ ಫಲ ಸಿಗುತ್ತದೆ, ಹೋಟೆಲ್ ಮ್ಯಾನೇಜ್ಮೆಂಟ್ ಬಿಸಿನೆಸ್, ಚಿನ್ನ ಮತ್ತು ವಜ್ರದ ವ್ಯಾಪಾರ ಮಾಡುವ ಜನರಿಗೆ ಮತ್ತು ಚಿನ್ನವನ್ನು ಖರೀದಿ ಮಾಡುವ ಜನರಿಗೂ ಕೂಡ ಒಳ್ಳೆಯ ಲಾಭಾಂಶ ದೊರಕುತ್ತದೆ.
ಭೂಮಿಗೆ ಸಂಬಂಧಪಟ್ಟಂತೆ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವ ಯೋಗ ಕೂಡ ಈಮಾಸದಲ್ಲಿ ಇರುತ್ತದೆ. ಮೀನ ರಾಶಿಯವರು ಅವರ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದಲ್ಲಿ ಒಳ್ಳೆಯ ಶುಭಕರ ಫಲವನ್ನೇ ಕಾಣುವರು.

ಲೇವಾದೇವಿ ವ್ಯವಹಾರ ಮಾಡುವ ಜನರಿಗೂ ಕೂಡ ಒಳ್ಳೆಯ ಮತ್ತು ಉತ್ತಮ ಮಂಗಳಕರ ಫಲ ದೊರಕುತ್ತದೆ. ವಿವಾಹದ ಕುರಿತು ಯೋಚನೆ ಮಾಡುವ ಜನರಿಗೆ ಕಂಕಣ ಬಲ ಕೂಡಿ ಬರುತ್ತದೆ. ಜಂಟಿ ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಇದೆ. ಉದ್ಯೋಗದ ಸಲುವಾಗಿ ಹೊರದೇಶಕ್ಕೆ ಹೋಗುವ ಯೋಗ ಕೂಡ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ಖರ್ಚು ವೆಚ್ಚಗಳಾಳಿಗೆ ಕಡಿವಾಣ ಹಾಕಿ ಅನಗತ್ಯ ಖರ್ಚು, ಹೆಚ್ಚಿನ ನಷ್ಟ ಉಂಟು ಮಾಡುತ್ತದೆ. ದುಷ್ಟ ಚಟಗಳು ಮತ್ತು ದುಷ್ಟ ಜನರಿಂದ ದೂರ ಇರುವುದು ಒಳ್ಳೆಯದು.

ಪರಿಹಾರಗಳು :-ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ ಮಾಡಿಸುವುದರಿಂದ ಎಲ್ಲಾ ದೋಷಗಳು ಪರಿಹಾರ ಆಗುತ್ತದೆ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!