ಸಿಂಹ ರಾಶಿಯವರಿಗೆ ಈ ಹೊಸವರ್ಷದಿಂದ ಕೆಲಸದಲ್ಲಿ ಬೆಳವಣಿಗೆ ಹೇಗಿರತ್ತೆ ತಿಳಿದುಕೊಳ್ಳಿ

0 4

Leo Horoscope on 2023 predictions: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಸಿಂಹ ರಾಶಿಯವರಿಗೆ 2023 ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ.

ಸಿಂಹ ರಾಶಿಯವರ ವ್ಯಕ್ತಿತ್ವವನ್ನು ನಾಯಕತ್ವದ ಗುಣ ಎಂದು ಹೇಳಲಾಗುತ್ತದೆ. ಈ ರಾಶಿಯವರು ಯಾವುದೇ ಕೆಲಸವನ್ನು ಮುನ್ನೆಡೆಸುವಲ್ಲಿ ಮುಂದಿರುತ್ತಾರೆ. ಜನರಿಗೆ ಸಹ ಈ ರಾಶಿಯ ಜನರಿದ್ದರೆ ಧೈರ್ಯ ಎನ್ನುವ ಭಾವನೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಈ ವರ್ಷ ಬಹುಪಾಲು ಶುಭಫಲಗಳೇ ಅನುಭವಕ್ಕೆ ಬರಲಿದೆ ಎನ್ನಲಾಗುತ್ತಿದೆ.

ಆದರೂ ಸಹ ಈ ವರ್ಷ ಕೆಲ ವಿಚಾರಗಳಲ್ಲಿ ಮುನ್ನೆಚ್ಚರಿಕೆವಹಿಸುವುದು ಮುಖ್ಯ. ಭಾಗ್ಯದ ಗುರು ಎಲ್ಲಾ ವಿಚಾರಗಳಲ್ಲಿ ನಿಮಗೆ ಶ್ರೀರಕ್ಷೆಯಾಗಲಿದೆ ಎನ್ನಲಾಗುತ್ತದೆ. ಇನ್ನು ಅನಿರೀಕ್ಷಿತವಾದ ನಿವೇಶನ ಖರೀದಿ ಅಥವಾ ಭೂ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯ ಯೋಗವಿದೆ.

ರಾಜಕಾರಣಿಗಳ ಜೊತೆ ಸಂಪರ್ಕ ಅಧಿಕವಾಗುವ ಸಾಧ್ಯತೆ ಇದೆ. ಧರ್ಮ- ದೇವರು ಗುರುಹಿರಿಯರಲ್ಲಿ ನಿಮಗೆ ಶ್ರದ್ಧೆ ಹಾಗೂ ವಿಶ್ವಾಸಗಳು ಜಾಸ್ತಿಯಾಗಲಿದೆ. ಬಂಧು-ಬಾಂಧವರು ನಿಮಗೆ ನಿರಂತರವಾಗಿ ಸಹಾಯವನ್ನೇ ಮಾಡಲಿದ್ದಾರೆ. ನಿಮ್ಮ ಕರ್ತವ್ಯಗಳ ಬಗ್ಗೆ ನಿಮಗೆ ಅತೀವವಾದ ಆಸಕ್ತಿ ಹಾಗೂ ನಂಬಿಕೆ ಬೆಳೆಯಲಿದೆ. ಆದರೂ ಕುಟುಂಬದ ವಿಚಾರದಲ್ಲಿ ಹೆಂಡತಿ ಮಕ್ಕಳಿಂದ ಸ್ವಲ್ಪ ಕಿರಿಕಿರಿಗಳೇ ನಿಮಗೆ ಮುಂದುವರೆಯಲಿದ್ದು, ಆಸ್ಪತ್ರೆ ಸಹವಾಸ ತಪ್ಪುವ ಸಾಧ್ಯತೆ ಇಲ್ಲ.

ಮಾನಸಿಕವಾಗಿ ನಿಮಗೆ ಸಮಾಧಾನ ಸ್ವಲ್ಪ ಕಷ್ಟವೇ ಸರಿ. ಜನವರಿ 1ರಿಂದ 17ರ ವರೆಗೂ ಶನಿಯು ಷಷ್ಠದಲ್ಲಿದ್ದು ಆನಂತರ ಸಪ್ತಮಕ್ಕೆ ಬಂದು ಸೇರುತ್ತಾನೆ. ಗುರುವು ಸ್ವಕ್ಷೇತ್ರದಲ್ಲಿ ಅಷ್ಟಮದಲ್ಲಿ ತನ್ನ ಸ್ವಂತ ಮನೆಯಲ್ಲಿ ಇರುವುದರಿಂದ ಯಾವ ಆತಂಕವೂ ಬಾರದೆ ಪೂರ್ವಜನ್ಮದ ಪುಣ್ಯವು ನಿಮ್ಮನ್ನು ಸದೃಢವಾಗಿ ಕಾಪಾಡಿ ಏ.21ರಿಂದ ಗುರುವು 9ಕ್ಕೆ ಬಂದು ನಿಮ್ಮ ಜೀವನದ ಪ್ರಯಾಣವು ಸುಖಕರವಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಲಾಭವು, ಧೈರ್ಯ, ಕೀರ್ತಿ ಯಶಸಸ್ಸನ್ನು ಕೊಟ್ಟು ನಿಮ್ಮನ್ನು ಬೆಳೆಸಿ, ಉಳಿಸಿ, ಆರೋಗ್ಯವನ್ನು ಇಟ್ಟು ಸಲಹುತ್ತಾನೆ.

ಅರ್ಧ ವರ್ಷದ ನಂತರ ಆಪ್ತರಿಂದ ವಂಚನೆಯ ಭೀತಿ ಇರುತ್ತದೆ. ಅಲ್ಲದೇ ರಾಜ ಸನ್ಮಾನ ಯೋಗವಿರುತ್ತದೆ. ಉಮಾ ಮಹೇಶ್ವರ ಆರಾಧನೆ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಆದಿತ್ಯಹೃದಯ ಪಾರಾಯಣವನ್ನು ಸಿಂಹ ರಾಶಿಯವರು ಮಾಡಲೇಬೇಕು. ಸಿಂಹಕ್ಕೆ ಸಿಂಹವಾಹನಕ್ಕೆ ಅಧಿಪತಿ ದುರ್ಗೆ ಆಗಿರುವುದರಿಂದ ದುರ್ಗಾಷ್ಟೋತ್ತರ ಪಾರಾಯಣ ಮಾಡಿ ಆನಂದವನ್ನು ಸುಖವನ್ನು ತಂದುಕೊಳ್ಳಿರಿ.

ಇದನೊಮ್ಮೆ ಓದಿ..ವೃಷಭ ರಾಶಿಗೆ ಒಳ್ಳೇದೆ ಮಾಡ್ತಾನೆ ಶನಿದೇವ, 2023 ರಲ್ಲಿ ಇವರ ಲೈಫ್ ಹೇಗಿರತ್ತೆ ಗೊತ್ತಾ.. ಒಟ್ಟಾರೆಯಾಗಿ ಈ ರಾಶಿಯವರು 2023ರಲ್ಲಿ ಬಹುತೇಕ ಆರಾಮವಾಗಿ ಜೀವನ ನಡೆಸುತ್ತಾರೆ. ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡರೆ ಸಾಕು. ಹಾಗೆಯೇ ಕುಟುಂಬದವರಿಗು ಸ್ವಲ್ಪ ಸಮಯ ನೀಡಿ ಸಾಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.