ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕುಂಭ ರಾಶಿಯವರ ಮೇ ತಿಂಗಳ ಮಾಸಿಕ ಭವಿಷ್ಯವನ್ನು ತಿಳಿಯೋಣ.

ಕುಂಭ ರಾಶಿಯವರು ಅವರ ಬಳಿ ಇರುವ ಹಣವನ್ನು ಎಲ್ಲೋ ಒಂದು ಕಡೆ ಹೂಡಿಕೆ ಮಾಡುವುದು, ಬೇರೆಯವರಿಗೆ ಸಾಲ ಕೊಡುವುದು, ತಿಳಿಯದ ವ್ಯವಹಾರಗಳಿಗೆ ಕೈ ಹಾಕುವುದು ಈ ರೀತಿ ಯಾವ ವ್ಯವಹಾರಕ್ಕೂ ಕೈ ಹಾಕಬಾರದು ಇದರಿಂದ, ಹಣ ನಷ್ಟ ಆಗುತ್ತದೆ. ಯಾವುದೇ ಕೆಲಸ ಕಾರ್ಯ ಮಾಡುವ ಮುನ್ನ ಯೋಚನೆ ಮಾಡಿ ಹಿರಿಯರ ಸಲಹೆ ಪಡೆದು ನಂತರ ಮುಂದುವರೆದರೆ ಉತ್ತಮ ಇಲ್ಲದೇ ಹೋದರೆ ನಷ್ಟ ಆಗುವುದು ಕಟ್ಟಿಟ್ಟ ಬುತ್ತಿ.

ವೈದ್ಯಕೀಯ ರಂಗದಲ್ಲಿ ಇರುವ ಕುಂಭ ರಾಶಿಯ ಜನರಿಗೆ ಹೆಚ್ಚಿನ ಸಾಧನೆ ಮಾಡುವ ಅವಕಾಶ ಒದಗಿ ಬರುತ್ತದೆ. ಚರ್ಮ ರೋಗ ತಜ್ಞರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ವ್ಯಾಪಾರ ವ್ಯವಹಾರ ಮಾಡುವ ಜನರಿಗೆ ಹೆಚ್ಚು ಅನುಕೂಲಕರ ಕಾಲ ಇದಾಗಿದೆ.
ಎಷ್ಟೇ ಅಡೆತಡೆ ಇದ್ದರೂ ಅದನ್ನು ಮೆಟ್ಟಿ ನಿಂತು ಯಶಸ್ಸು ಗಳಿಸುವ ಸಂಭವ ಇದೆ. ಜನಗಳು ಯಾವ ರೀತಿ ಇರುವರು ಎನ್ನುವ ಮನವರಿಕೆಯಾಗುತ್ತದೆ ಈ ತಿಂಗಳಿನಲ್ಲಿ. ಯಾರು ನಂಬಿಕಸ್ತರು ಯಾರು ನಂಬಿಕೆಗೆ ಅರ್ಹರು ಎನ್ನುವ ಎಲ್ಲಾ ವಿಷಯವನ್ನು ಕುಂಭ ರಾಶಿಯವರು ಈ ಸಮಯದಲ್ಲಿ ತಿಳಿದುಕೊಳ್ಳಬಹುದು.

ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಕೆ ಚೆನ್ನಾಗಿರುತ್ತದೆ. ಆದರೆ, ಸ್ವಲ್ಪ ಹೆಚ್ಚಿನ ಮಟ್ಟದ ಬುದ್ದಿವಂತಿಕ್ಕೆ ಉಪಯೋಗ ಮಾಡಿದರೆ ನೀವು ನಿರೀಕ್ಷೆ ಮಾಡಿರುವ ಲಾಭ ಬಂದು ನಿಮ್ಮ ಕೈ ಸೇರುತ್ತದೆ. ಸಾಲ ತೆಗೆದುಕೊಳ್ಳುವುದು ಅಥವಾ ಕೊಡುವುದು ಎರಡು ಈ ಸಮಯದಲ್ಲಿ ಒಳಿತನ್ನು ಮಾಡುವುದಿಲ್ಲ.

ಆತ್ಮವಿಶ್ವಾಸ ಮತ್ತು ಹಠದ ಗುಣ ನಿಮ್ಮನ್ನು ಕಾಪಾಡುತ್ತದೆ. ಸಂಘ-ಸಂಸ್ಥೆಗಳನ್ನು ನಡೆಸುವ ಜನರಿಗೆ ಒಳ್ಳೆಯ ಫಲ ಲಭಿಸುತ್ತದೆ. ರಾಜಕಾರಣಿಗಳಿಗೆ ಒಳ್ಳೆ ಸ್ಥಾನಮಾನ ಸಿಗುತ್ತದೆ ಮತ್ತು ಅವರ ಯೋಜನೆಗಳೆಲ್ಲ ಶುಭ ತರುತ್ತವೆ. ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಮದುವೆ ಸಮಾರಂಭಗಳಲ್ಲಿ ಭಾಗವಹಿಸುವುದು, ಅವಿವಾಹಿತರಿಗೆ ವಿವಾಹ ಯೋಗ, ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.

ಸಂಗಾತಿಯ ಜೊತೆ ಜಂಟಿ ವ್ಯವಹಾರ ಮಾಡುತ್ತಿದ್ದರೆ ಅದು, ಹೆಚ್ಚು ಉತ್ತಮ ಲಾಭ ತರುತ್ತದೆ. ಬಾಕಿ ಇರುವ ಹಣ ಸದ್ಯಕ್ಕೆ ಬಂದು ಕೈ ಸೇರುವುದಿಲ್ಲ ಆದರೆ, ಸಕಾಲಕ್ಕೆ ಬಂದು ಕೈ ಸೇರುವ ಸಂಭವ ಇದೆ. ಕೃಷಿಯಲ್ಲಿ ತೊಡಗಿರುವ ಜನರು ಹೊಸ ಪ್ರಯೋಗಗಳನ್ನು ಮಾಡುವರು. ನೂತನ ಆಸ್ತಿ ಖರೀದಿ ಮಾಡುವ ಯೋಚನೆ ಇದ್ದರೆ ಅದನ್ನು ಮಾಡಬಹುದು. ಈ ರಾಶಿಯವರು ಅವರ ಬಳಿ ಇರುವ ಸಂಪತ್ತು, ಬೆಲೆಬಾಳುವ ವಸ್ತುಗಳು ಎಲ್ಲವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

ಪರಿಹಾರಗಳು :-ಶ್ರೀ ದುರ್ಗಾ ದೇವಿಯ ಆರಾಧನೆ ಮಾಡುವುದು ಒಳ್ಳೆಯದು. ಶ್ರೀ ಗಣಪತಿ ಪೂಜೆಯನ್ನು ಮಾಡಬೇಕು. ಪವಿತ್ರ ಕ್ಷೇತ್ರದಲ್ಲಿ ನಾಗದೇವರ ಹೋಮ ಮಾಡಿಸಬೇಕು. ದೇವಸ್ಥಾನಗಳಲ್ಲಿ ಮಾಡುವ ನಾಗ ಹೋಮಕ್ಕೆ ಕೈಯಲ್ಲಾದ ಸಹಾಯ ಮಾಡಿದರೆ ಉತ್ತಮ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *