ಕುಂಭ ರಾಶಿಯಲ್ಲಿ ಶನಿ ಪರಿವರ್ತನೆ, ಅಕ್ಟೋಬರ್ 11 ರಿಂದ ಎಷ್ಟೊಂದು ಶುಭ ವಿಚಾರಗಳಿವೆ ನೋಡಿ

0 4

ಜಾತಕದ ವಿಷಯವನ್ನು ತೆಗೆದುಕೊಂಡಾಗ ಎಲ್ಲರೂ ತಿಳಿಯುವುದು ಶನಿದೇವ ಒಂದು ಕೆಡುಕಿನ ಗ್ರಹ ಎಂದು ಅದೇ ರೀತಿ ಶನಿಗ್ರಹದ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆ ಉಂಟಾದರೂ ಕೂಡ ಅದು ನಿಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಶನಿದೇವನನ್ನು ನ್ಯಾಯದ ದೇವತೆಯೆಂದು ಕೂಡ ಕರೆಯಲಾಗುತ್ತದೆ ಅದೇ ರೀತಿಯಾಗಿ ಬೇರೆ ಬೇರೆ ಗ್ರಹದ ತುಲನೆಯಲ್ಲಿ ಜನರಿಗೆ ಶನಿಗ್ರಹದ ಕುರಿತು ಹೆಚ್ಚಿನ ಭಯ ಕಂಡುಬರುತ್ತದೆ.

ಒಂದು ಬಾರಿ ವ್ಯಕ್ತಿಯ ಮನಸ್ಸಿನಲ್ಲಿ ಶನಿ ಗ್ರಹದ ಕುರಿತು ನಕಾರಾತ್ಮಕ ಭಾವನೆಗಳು ಕಂಡುಬಂದಲ್ಲಿ ಅಂದರೆ ಶನಿಯ ಸಾಡೇಸಾತೀ ನಡೆಯುತ್ತದೆ ಎಂಬುದು ತಿಳಿದು ಬಂದರೆ ಅಂತಹ ವ್ಯಕ್ತಿಗೆ ಬಯಕ್ಕಿಡಾಗುತ್ತಾನೆ. ಇಂತಹ ಗುಣವೈಶಿಷ್ಟ್ಯಗಳು ಮತ್ತು ಸದಾ ಎಲ್ಲರ ಭಯಕ್ಕೆ ಕಾರಣವಾಗುವಂತಹ ಶನಿದೇವನು ಈಗ ತನ್ನ ಸ್ಥಿತಿಯಲ್ಲಿ ಬದಲಾವಣೆಗೈಯಲು ಹೊರಟಿದ್ದಾನೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಅಂದರೆ ಇಲ್ಲಿಯವರೆಗೂ ವಕ್ರ ಸ್ಥಿತಿಯಲ್ಲಿದ್ದ ಶನಿದೇವನು ಈಗ ಮಾರ್ಗಿ ಯಾಗಿ ಬದಲಾಗಲಿದ್ದಾನೆ ಶನಿದೇವನು ಎರಡು ಸಾವಿರದ ಇಪ್ಪತ್ತೊಂದರ ಮೇ ತಿಂಗಳಿನ ಇಪ್ಪತ್ಮೂರನೇ ದಿನಾಂಕದಿಂದ ಮಕರ ರಾಶಿಯಲ್ಲಿ ವಕ್ರೀ ಅವಸ್ಥೆಯಲ್ಲಿ ಸ್ಥಿತ ಆಗಿದ್ದನು. ವಕ್ರಿ ಅಂದರೆ ಹಿಮ್ಮುಖ ಚಲನೆಯನ್ನು ಹೊಂದಿದ್ದನು ಆದರೆ ಈಗ ಶನಿದೇವನು ನೇರ ಸಂಚಾರವನ್ನು ಕೈಗೊಳ್ಳಲಿದ್ದಾನೆ ಅಂದರೆ ಅಕ್ಟೋಬರ್ ತಿಂಗಳಿನ ಹನ್ನೊಂದರ ಸೋಮವಾರದ ಬೆಳಿಗ್ಗೆ ಎಂಟು ಗಂಟೆ ಮೂರು ನಿಮಿಷಕ್ಕೆ ಶನಿದೇವನು ವಕ್ರ ಸ್ಥಿತಿಯಿಂದ ಮಾರ್ಗಿ ಸ್ಥಿತಿಗೆ ಬದಲಾವಣೆ ಹೊಂದಲಿದ್ದಾನೆ.

ಶನಿದೇವನು ರಾಶಿ ಪರಿವರ್ತನೆಗೈಯದೆ ಕೇವಲ ಮಕರ ರಾಶಿಯಲ್ಲಿದ್ದುಕೊಂಡೆ ತನ್ನ ಸ್ಥಿತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲಿದ್ದಾನೆ. ಶನಿದೇವನು ಮಕರ ರಾಶಿಯಲ್ಲಿ ಇದ್ದುಕೊಂಡೇ ಅಕ್ಟೋಬರ್ ಹನ್ನೊಂದನೇ ತಾರೀಖಿನಂದು ಮಾರ್ಗಿ ಅವಸ್ಥೆಗೆ ಬದಲಾವಣೆಹೊಂದಲಿದ್ದಾನೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗುತ್ತದೆ. ಬಹುತೇಕ ಪರಿಸ್ಥಿತಿಗಳಲ್ಲಿ ಬದಲಾವಣೆ ಕಂಡುಬರಲಿದೆ. ಈ ರೀತಿಯಾಗಿ ಶನಿದೇವನ ಸ್ಥಿತಿ ಬದಲಾವಣೆಯಿಂದ ಮುಖ್ಯವಾಗಿ ಕುಂಭರಾಶಿಯಲ್ಲಿ ಯಾವ ಎಲ್ಲ ರೀತಿಯ ಬದಲಾವಣೆಗಳು ಕಂಡು ಬರುತ್ತವೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಶನಿ ದೇವರು ಕುಂಭರಾಶಿಯವರ ಜಾತಕದ ಸ್ವಾಮಿ ಗ್ರಹ ಆಗಿದ್ದಾನೆ. ಜೊತೆಗೆ ಪ್ರಸ್ತುತದಲ್ಲಿ ಕುಂಭ ರಾಶಿಯ ದ್ವಾದಶ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಒಂದು ಕಡೆ ಶನಿದೇವನು ಕುಂಭರಾಶಿಯವರಿಗೆ ಹೆಚ್ಚಿನ ಪರಿಶ್ರಮವನ್ನು ನೀಡುತ್ತಿದ್ದನು. ನೀವು ಪರಿಶ್ರಮವನ್ನು ಹಾಕಿದರೂ ಸಹ ಲಾಭದಲ್ಲಿ ಶನಿದೇವನು ಅಡ್ಡಿಯನ್ನು ಮಾಡುತ್ತಿದ್ದನು. ಜೊತೆಗೆ ಬಹುತೇಕ ಕೆಲಸಗಳಲ್ಲಿ ಶನಿದೇವನು ಅಡೆತಡೆಗಳನ್ನು ಒಡ್ಡುತ್ತಿದ್ದನು. ಶನಿದೇವನು ಮಾರ್ಗಿಯಾಗಿ ಬದಲಾವಣೆ ಹೊಂದುತ್ತಿರುವುದು ಕುಂಭರಾಶಿಯವರಿಗೆ ಒಂದಿಷ್ಟು ಸಮಾಧಾನವನ್ನು ಕೊಡುತ್ತದೆ.

ಅಂದರೆ ನೀವು ಒಂದು ರೀತಿಯಲ್ಲಿ ನಿಟ್ಟಿಸಿರು ಬಿಡುವಂತಹ ಸಮಯದ ಆಗಮನ ಆಗಲಿದೆ. ಕುಂಭ ರಾಶಿಯವರ ಪಾಲಿಗೆ ಶನಿಯ ಸಾಡೇಸಾತಿಯ ಪ್ರಥಮ ಚರಣ ನಡೆಯುತ್ತಿದೆ ಹಾಗಾಗಿ ಶನಿಯು ವಕ್ರ ಸ್ಥಿತಿಯಲ್ಲಿದ್ದ ನೂರಾನಲವತ್ತೊಂದು ದಿನಗಳು ನೀವು ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಕೆಲಸಕಾರ್ಯಗಳಲ್ಲಿ ನಿಧಾನಗತಿ ಉಂಟಾಗುತ್ತಿದ್ದವು ಲಾಭ ರಹಿತವಾಗಿ ವ್ಯಾಪಾರ ನಡೆಸಿಕೊಂಡು ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು ಆದರೆ ಈಗ ಅಂತಹ ಸ್ಥಿತಿ ಕುಂಭರಾಶಿ ಜಾತಕದವರ ಪಾಲಿಗೆ ಖಂಡಿತವಾಗಿ ಬದಲಾಗಲಿದ್ದು ನಿಮ್ಮ ಕೆಲಸ ಕಾರ್ಯಗಳಿಗೆ ಖಂಡಿತವಾಗಿ ವೇಗದ ಸ್ಥಿತಿ ದಕ್ಕಲಿದೆ. ಹಿಂದಿನ ನೂರಾನಲವತ್ತೊಂದು ದಿನಗಳ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳ ಹೊರತಾಗಿ ನಿಮ್ಮ ಪಾರಿವಾರಿಕ ಜೀವನದಲ್ಲಿ ಸಮಸ್ಯೆಗಳು ಕಂಡುಬರುತ್ತಲಿದ್ದವು. ಈಗ ಮಾರ್ಗಿ ಸ್ಥಾನಕ್ಕೆ ಬದಲಾಗಲಿರುವ ಶನಿದೇವನು ಕೆಲವು ವಿಷಯಗಳಲ್ಲಿ ನಿಮಗೆ ಕಂಡಿತವಾಗಿಯೂ ಸುಖವನ್ನು ನೀಡಲಿದ್ದಾನೆ.

ಹಣಕಾಸಿನ ವಿಷಯದಲ್ಲಿಯೂ ಲಾಭದಾಯಕ ಸ್ಥಿತಿಯನ್ನು ನಿರ್ಮಾಣವಾಗಲಿದೆ ನೀವು ಹಣಕಾಸಿನ ವಿಷಯದಲ್ಲಿ ಸಿಲುಕಿಕೊಂಡಿದ್ದರೆ ಹಣವನ್ನು ಮರಳಿ ಪಡೆಯುವ ಯೋಗವು ಪ್ರಯತ್ನಿಸಿದರೆ ನಿಮಗೆ ಸಿಗಲಿದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಈ ಸಮಯದಲ್ಲಿ ನಿಮ್ಮ ಮನಸ್ಸು ಆಧ್ಯಾತ್ಮಿಕದಲ್ಲಿ ಹೆಚ್ಚು ತಲ್ಲೀನ ವಾಗಲಿದೆ. ನಿಮಗೆ ಮಾನಸಿಕ ನೆಮ್ಮದಿ ಕಂಡು ಬರಲಿದ್ದು ಮನಸ್ಸು ಶಾಂತವಾಗಿ ಕಂಡುಬರಲಿದೆ ಆದಾಗ್ಯೂ ಕೂಡ ನೀವು ಈಗಲೂ ಸಹ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಒಂದು ನಿಖರವಾದ ಯೋಜನೆಯೊಂದಿಗೆ ಹಣಕಾಸಿನ ನಿರ್ವಹಣೆಯನ್ನು ಮಾಡಬೇಕು.

ವಿಶೇಷವಾಗಿ ಈ ಅವಧಿಯಲ್ಲಿ ನೀವು ಸಾಲದಿಂದ ದೂರವಿರುವುದು ಉತ್ತಮ ಇನ್ನು ಕಾರ್ಯಕ್ಷೇತ್ರದಲ್ಲಿಯು ಶನಿ ದೇವನ ಮಾರ್ಗಿ ಸ್ಥಿತಿಯು ಪರಿಣಾಮ ಬೀರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬರಲಿದೆ ನಿಮ್ಮ ಬದಲಾದ ಕಾರ್ಯಶೈಲಿಯು ನಿಮ್ಮ ಹಿರಿಯ ಅಧಿಕಾರಿಗಳ ಗಮನವನ್ನು ಸೆಳೆಯಲಿದ್ದು ಅವರ ದೃಷ್ಟಿಯಲ್ಲಿ ನೀವು ಉತ್ತಮ ಕೆಲಸಗಾರರಾಗಿ ಬಿಂಬುವ ಸಾಧ್ಯತೆ ಇದೆ.

ಹಾಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಬೇಜವಾಬ್ದಾರಿಯನ್ನು ತೋರದೆ ನಿಮ್ಮ ಬಗ್ಗೆ ಬೇರೆಯವರು ಹೊಂದಿರುವ ಸಕಾರಾತ್ಮಕ ಭಾವನೆಗಳನ್ನು ಸದೃಢಗೊಳಿಸುವ ಕಾರ್ಯವನ್ನು ನೀವು ಮಾಡಬೇಕಾಗುವುದು. ಇದರಿಂದ ನಿಮಗೆ ಭವಿಷ್ಯದಲ್ಲಿ ಅನೇಕ ಲಾಭಗಳು ದೊರೆಯಬಹುದಾಗಿದ್ದು ಉನ್ನತಿಯ ಪ್ರಾಪ್ತಿಯು ಕೂಡ ಉಂಟಾಗಲಿದೆ.

ಇನ್ನು ಶನಿದೇವನ ಮಾರ್ಗಿ ಸ್ಥಿತಿಯು ವಿದೇಶಿ ಕಾರ್ಯಗಳಲ್ಲಿ ಅತ್ಯಂತ ವಿಶೇಷವಾಗಿ ಸಾಬೀತಾಗಲಿದೆ. ಇಲ್ಲಿ ವಿದೇಶದಲ್ಲಿ ನೆಲೆಸಿರುವವರಿಗೂ ಬರಪೂರ ಲಾಭಗಳು ಲಭಿಸಬಹುದಾಗಿದ್ದು ಅವರ ಮನೋಕಾಮನೆಗಳು ಈ ಅವಧಿಯಲ್ಲಿ ಈಡೇರುವ ಸಾಧ್ಯತೆ ಇದೆ. ಇಲ್ಲಿ ಯಾರು ವಿದೇಶಕ್ಕೆ ತೆರಳಲು ಇಚ್ಛಿಸುವರು ಅಥವಾ ವಿದೇಶಿ ಪೌರತ್ವವನ್ನು ಪಡೆಯಲಿದ್ದಾರೆ ಅವರಿಗೆ ಸುಖದ ಪರಿಣಾಮ ಉಂಟಾಗಲಿದೆ. ಹಾಗೆಯೇ ವಿದೇಶಿ ಯಾತ್ರೆಯ ಯೋಗವು ಕೂಡ ಪ್ರಬಲವಾಗಿದ್ದು ವಿದೇಶಿ ಯಾತ್ರೆ ಕೈಗೊಳ್ಳುವ ಅವರ ಇಚ್ಛೆಯೂ ಕೂಡ ಪೂರ್ಣವಾಗಲಿದೆ.

ಹಾಗೆಯೇ ಯಾರು ವಿದೇಶಿ ಕಂಪನಿಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಅಥವಾ ವಿದೇಶದೊಂದಿಗೆ ವ್ಯಾಪಾರ ವ್ಯವಹಾರವನ್ನು ಹೊಂದಿದ್ದಾರೆ ಅವರಿಗೆ ಈ ಸಮಯ ಲಾಭದಾಯಕವಾಗಿರಲಿದೆ. ಶನಿದೇವನು ಈ ಎಲ್ಲ ವಿಷಯಗಳಲ್ಲಿ ನಿಮಗೆ ಉತ್ತಮ ಫಲವನ್ನು ಕರುಣಿಸಲಿದ್ದನಾದರೂ ಇಲ್ಲಿ ನೀವು ಕೂಡ ನಿಮ್ಮ ಪ್ರಯತ್ನವನ್ನು ಮಾಡಬೇಕು. ಎಲ್ಲಿಯವರೆಗೆ ನೀವು ನಿತ್ಯ ಪರಿಶ್ರಮಿಗಳಾಗುವುದಿಲ್ಲವೊ ಅಲ್ಲಿಯವರೆಗೆ ಶನಿದೇವನು ನಿಮ್ಮ ಮೇಲೆ ಕರುಣೆ ತೋರಿಸುವುದಿಲ್ಲ. ಹೀಗಾಗಿ ಇಲ್ಲಿ ನೀವು ನಿಮ್ಮ ಪರಿಶ್ರಮವನ್ನು ನಿರಂತರವಾಗಿರಿಸ ಬೇಕು. ವಿಶೇಷವೆಂದರೆ ಶನಿದೇವನು ಎಂದಿಗೂ ಪರಿಶ್ರಮಗಳ ಕೈಯನ್ನು ಬಿಡುವುದಿಲ್ಲ ಶನಿದೇವನ ಉಗ್ರ ಫಲಗಳು ಎಷ್ಟು ಕಟೋರವಾಗಿರುತ್ತವೆ ಹಾಗೆ ಅವನ ಕರುಣೆಯ ಫಲಗಳು ಅಷ್ಟೇ ಲಾಭದಾಯಕವಾಗಿರುತ್ತದೆ.

ಶನಿದೇವನನ್ನು ಸಂಪ್ರೀತಗೊಳಿಸುವುದು ಸುಲಭದ ಕೆಲಸವಾಗಿರುತ್ತದೆ ಶನಿದೇವನು ಅತ್ಯಂತ ಪ್ರಬಲ ಶಕ್ತಿಯನ್ನು ಹೊಂದಿರುವವರು ಮತ್ತು ಪರಿಶ್ರಮಗಳ ಹಿಂದೆ ಸದಾ ಇದ್ದು ಅವರನ್ನು ನಿತ್ಯವೂ ಕಾಯುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ನೀವು ನಿಮ್ಮ ಪರಿಶ್ರಮದ ಮೇಲೆ ಹೆಚ್ಚು ಏಕಾಗ್ರತೆಯನ್ನು ವಹಿಸುವುದು ಪ್ರಮುಖವಾಗಿದೆ. ಇನ್ನು ಶನಿದೇವನು ಮಾರ್ಗಿ ಸ್ಥಿತಿಯಲ್ಲಿರುವುದರಿಂದ ನಿಮ್ಮ ಹದಗೆಟ್ಟು ಹೋಗಿರುವ ಸಂಬಂಧಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಸಂಬಂಧಗಳ ದೃಷ್ಟಿಯಿಂದಲೂ ಶನಿದೇವನ ಮಾರ್ಗಿ ಸ್ಥಿತಿಯೂ ನಿಮಗೆ ಅನುಕೂಲಕರವಾಗಿದೆ ಎಂದು ಹೇಳಬಹುದು.

ವಿದ್ಯಾರ್ಥಿಗಳಲ್ಲಿ ಕೆಲವು ಆದರ್ಶಗಳನ್ನು ಮರೆಮಾಡಲಿದ್ದು ಆದರೆ ಗೆಲ್ಲಲೇಬೇಕು ಎಂದು ಯಾರು ಪರಿಶ್ರಮವನ್ನು ಪಡುತ್ತಾರೆ ಅಂತವರಿಗೆ ಈ ಸಮಯದಲ್ಲಿ ಕೆಲವು ವಿಶೇಷ ಫಲಗಳ ಪ್ರಾಪ್ತಿಯಾಗಲಿದೆ. ಇನ್ನು ನೌಕರಿ ವಂಚಿತರ ಪಾಲಿಗೆ ಅಕ್ಟೋಬರ್ ಹನ್ನೊಂದನೇ ತಾರೀಕಿನ ನಂತರದಲ್ಲಿ ಪರಿಸ್ಥಿತಿಗಳಲ್ಲಿ ಸಾಕಷ್ಟು ಸುಧಾರಣೆ ಕಂಡು ಬರಲಿದೆ ಇಲ್ಲಿ ನೌಕರಿ ವಂಚಿತರು ಶನಿದೇವನ ಮಾರ್ಗಿ ಸ್ಥಿತಿಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ.

ಖಂಡಿತ ಅವರ ಆದಾಯದ ಪ್ರಾರಂಭ ಇಲ್ಲಿಂದ ಉಂಟಾಗಲಿದೆ ಇಲ್ಲಿ ಗುರುದೇವನು ಕೂಡ ವಕ್ರ ಸ್ಥಿತಿಯಲ್ಲಿ ದ್ವಾದಶ ಭಾವದಲ್ಲಿ ಗೋಚರಿಸುತ್ತಲಿದ್ದು ಗುರುದೇವನು ಕೂಡ ಮುಂದಿನ ದಿನಗಳಲ್ಲಿ ಮಾರ್ಗಿ ಸ್ಥಿತಿಗೆ ಬದಲಾವಣೆ ಹೊಂದಿದ್ದಾನೆ. ಆಗ ಪರಿಸ್ಥಿತಿಗಳು ಮತ್ತಷ್ಟು ಸುಧಾರಣೆ ಆಗಲಿದ್ದು ಶನಿದೇವನ ಸಾಡೇಸಾತಿ ನಡೆಯುವ ಸಮಯದಲ್ಲಿಯೇ ಒಂದಿಷ್ಟು ನೆಮ್ಮದಿ ನಿಮಗೆ ಸಿಗಲಿದೆ. ಅಕ್ಟೋಬರ್ ಹನ್ನೊಂದನೇ ತಾರೀಖಿನ ನಂತರ ನಿಮಗೆ ಭಾಗಶಹ ಸಮಾಧಾನ ಉಂಟು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಹತಾಶೆಗೆ ಒಳಗಾಗದೆ ಆತ್ಮ ಸ್ಥೈರ್ಯದಿಂದ ನೀವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ.

ಇಂತಹ ಸಮಯದಲ್ಲಿ ನೀವು ಶನಿ ದೇವನಿಗಾಗಿ ಕೆಲವು ಪರಿಹಾರೋಪಾಯಗಳನ್ನು ಮಾಡಿಕೊಳ್ಳುವುದು ಉತ್ತಮ ಅವುಗಳನ್ನು ನೋಡುವುದಾದರೆ ದಿವ್ಯಾಂಗರು ಕಂಡಾಗ ಅವರಿಗೆ ಸಹಾಯ ಮಾಡುವುದು ವಿಶೇಷ ಭೋಜನವನ್ನು ಮಾಡಿಸುವುದು ಶನಿದೇವನ ಸಂತೃಪ್ತಿಗೆ ಕಾರಣವಾಗಲಿದೆ. ವಿಶೇಷವಾಗಿ ಅಶಕ್ತರಿಗೆ ಸಹಾಯ ಮಾಡುವುದು ಅನಾರೋಗ್ಯ ಪೀಡಿತರಿಗೆ ಔಷಧೀಯ ಸಹಾಯ ಮಾಡುವುದು ಅಥವಾ ಅವರಿಗೆ ಬೇಕಾದ ನೆರವು ನೀಡುವುದು ಜೊತೆಗೆ ಶನಿವಾರದ ದಿನದಂದು ಬಡವರಿಗೆ ಸಿಹಿ ತಿನಿಸಿನ ದಾನಮಾಡುವುದು ಸಾಕಷ್ಟು ಉತ್ತಮವಾಗಿರಲಿದ್ದು ಖಂಡಿತವಾಗಿ ಇದರಿಂದ ಶನಿದೇವನ ವಿಶೇಷ ಕೃಪೆ ನಿಮ್ಮ ಮೇಲೆ ಪ್ರಾಪ್ತಿಯಾಗಲಿದೆ.

ಸ್ನೇಹಿತರೆ ಈ ರೀತಿಯಾಗಿ ಶನಿದೇವನ ಮಾರ್ಗಿ ಸ್ಥಿತಿಯ ಬದಲಾವಣೆಯಿಂದ ಕುಂಭ ರಾಶಿಯವರ ಮೇಲೆ ಕೆಲವು ಪರಿಣಾಮಗಳು ಉಂಟಾಗಲಿದ್ದು ಕುಂಭ ರಾಶಿಯವರ ಮೇಲೆ ಶನಿಯ ಸಾಡೇಸಾತೀ ಚರಣ ನಡೆಯುತ್ತಿರುವುದರಿಂದ ನಾವು ಮೇಲೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಪರಿಚಿತರಿಗೂ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.