ಕುಂಭ ರಾಶಿಯವರ ವ್ಯಕ್ತಿತ್ವ ಹೇಗಿರತ್ತೆ, ಇವರು ಯಾರನ್ನ ಹೆಚ್ಚಾಗಿ ಪ್ರೀತಿಸ್ತಾರೆ ಗೊತ್ತಾ

0 3,655

Kannada Astrologer: ದ್ವಾದಶ ರಾಶಿಚಕ್ರಗಳಲ್ಲಿ ಹನ್ನೊಂದನೇ ರಾಶಿ ಕುಂಭ ರಾಶಿ. ಎಲ್ಲದರ ವಿಶಿಷ್ಟತೆಯ ಸಂಕೇತವೇ ಈ ಕುಂಭ ರಾಶಿ. ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದೇ ಈ ರಾಶಿ. ಇವರು ಆಧುನಿಕತೆ, ಸ್ವಾತಂತ್ರ್ಯವನ್ನು ಪ್ರೀತಿಸುವವರು. ಒಳ್ಳೆಯ ಹಾಸ್ಯಗಾರರೂ ಮತ್ತು ಸ್ವಭಾವತಃ ಹರ್ಷಚಿತ್ತದವರಾದ ಇವರು ನಿಮ್ಮನ್ನು ಮೋಡಿ ಮಾಡುವುದರಲ್ಲಿ ಯಾವ ಸಂದೇಹವೇ ಇಲ್ಲ. ಶನಿಯಿಂದ ಆಳಲ್ಪಡುವ ಈ ರಾಶಿಯವರು ಮುಂಗೋಪಿಗಳಾದರೂ ಬುದ್ಧಿವಂತರು, ಸೃಜನಶೀಲವ್ಯಕ್ತಿಗಳು. ನಿಮಗೆ ತಿಳಿದಂತೆ ಅವರ ಈ ಗುಣಗಳನ್ನು ಗಮನಿಸಿದ್ದೀರಾ ನೋಡಿ.

ಹೃದಯ ಪ್ರಕ್ಷುಬ್ಧವಾಗಿದ್ದರೂ, ತೋರಿಸಿಕೊಳ್ಳದ ಮುಕ್ತ ಮನೋಭಾವದ ಕುಂಭ ರಾಶಿ ಸ್ವಾತಂತ್ರ್ಯ ಮತ್ತು ಸಂದರ್ಭಗಳಿಗೆ ಹೊಂದಿಕೊಳ್ಳುವುದನ್ನು ಬಯಸುತ್ತಾರೆ. ಗಾಳಿಯ ಅಂಶದಿಂದ ಆಳಲ್ಪಡುವ ಕುಂಭ ರಾಶಿ ಅಲೆಗಳನ್ನು ಉಂಟು ಮಾಡಲು ಮತ್ತು ವಸ್ತುಗಳ ಸ್ವಾಮ್ಯದ ಮನೋಧರ್ಮವನ್ನು ಪ್ರತಿಬಿಂಬಿಸುತ್ತದೆ. ಗಾಳಿಯು ಅವರಿಗೆ ಅಂತಃಪ್ರಜ್ಞೆಯನ್ನು ನೀಡುತ್ತದೆ. ಅವರು ಮಹಾನ್ ಚಿಂತಕರು, ಸಂವಹನಕಾರರು. ಕೆಲವರು ಶಾಂತ ಮತ್ತು ಸೌಮ್ಯವಾಗಿದ್ದರೆ, ಇತರರು ಉತ್ಸಾಹಭರಿತ ಮತ್ತು ಶಕ್ತಿಯುತವಾಗಿರುತ್ತಾರೆ. ಅವರ ಪ್ರತ್ಯೇಕತೆಯೇ ಅವರನ್ನು ಎದ್ದು ಕಾಣುವಂತೆ ಮಾಡುತ್ತದೆ. ಇವರ ಕೆಲವೊಂದು ಗುಣಗಳ ಕುರಿತ ಅಚ್ಚರಿಯ ಸಂಗತಿಯನ್ನ ಇಲ್ಲಿ ತಿಳಿಸಲಾಗಿದೆ.

ಈ ರಾಶಿಯ ಚಿಹ್ನೆಯು ಬುದ್ಧಿವಂತಿಕೆ, ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಇವರು ಬಂಡಾಯಗಾರರು ಮಾತ್ರವಲ್ಲದೇ ಸೃಜನಶೀಲರೂ ಕೂಡ. ಇವರು ಭಾವುಕರೂ ಕೆಲವೊಮ್ಮೆ ಭಾವನೆಗಳನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಗುಣದವರು. ಇವರ ಮನಸ್ಸು ಇತರರಿಗೆ ಅರ್ಥವಾಗದಷ್ಟು ಸಂಕೀರ್ಣವಾದುದು. ತಮ್ಮ ನಿಜವಾದ ಭಾವನೆಗಳನ್ನು ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಗಂಭೀರವಾಗಿರುವ ಇವರು ಚಿಂತನಾಶೀಲ ಸ್ವಭಾವದವರು. ಬುದ್ದಿವಂತರಾದ ಇವರು ಆರ್ಥಿಕವಾಗಿ ಪ್ರಾಯೋಗಿಕವಾಗಿರುತ್ತಾರೆ. ಇವರು ತುಂಬಾ ಸಾಮಾಜಿಕವಾಗಿದ್ದರೂ ತಮ್ಮ ಸ್ನೇಹಿತರ ಆಯ್ಕೆಯ ಬಗ್ಗೆ ಬಹಳ ಆಲೋಚನೆ ಮಾಡುತ್ತಾರೆ. ಕಠಿಣ ಶ್ರಮಜೀವಿಗಳು, ಸಂಘಟನಾ ಸಾಮರ್ಥ್ಯವಿರುವ ಇವರು ಚಾಣಾಕ್ಷರಾಗಿದ್ದು ಸದಾ ಎಚ್ಚರವಾಗಿರುತ್ತಾರೆ. ಸ್ವಂತ ಆಲೋಚನೆಗಳನ್ನು, ವಿವೇಚನೆಯನ್ನು ಬಳಸಿ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ.

ಎರಡನೇ ಮನೆಯ ಅಧಿಪತಿಯಾದ ಗುರುವಿನಿಂದಾಗಿ ಈ ರಾಶಿಯವರು ವಿಜ್ಞಾನಿಗಳು, ಉತ್ತಮ ಕಾರ್ಯನಿರ್ವಾಹಕರು, ದೊಡ್ಡ ಕಂಪನಿಯಲ್ಲಿ ಉನ್ನತ ಸ್ಥಾನ ಪಡೆಯಬಹುದು. ಕೆಲವರು ಉಪನ್ಯಾಸಕರು, ಜ್ಯೋತಿಷಿ, ಕಾನೂನು, ಹಣಕಾಸು ಅಥವಾ ಶಿಕ್ಷಣ ಸಲಹೆಗಾರರೂ ಆಗಬಹುದು. ಆರನೇ ಮನೆಯ ಅಧಿಪತಿ ಚಂದ್ರನ ಸ್ಥಾನದಿಂದಾಗಿ ಔಷಧ ವಲಯ, ಸಾಮಾಜಿಕ ಸೇವೆ, ಹಡಗಿನಲ್ಲಿ ಸಾಗಾಣೆ ಮತ್ತು ರಫ್ತು ವ್ಯವಹಾರ, ನಾವಿಕರು, ದ್ರವಗಳ ರಫ್ತು ಮತ್ತು ಆಮದು ವ್ಯವಹಾರ ಮಾಡಬಹುದು. ಹತ್ತನೇ ಮನೆಯ ಅಧಿಪತಿ ಮಂಗಳನಿಂದಾಗಿ ಇವರು ನಿರ್ಮಾಣ ಕಾರ್ಯ, ರಾಸಾಯನಿಕ ಕಂಪನಿಯಲ್ಲಿ ಕೆಲಸ, ಮೆಕ್ಯಾನಿಕಲ್‌ ಇಂಜಿನಿಯರ್, ಇಟ್ಟಿಗೆ ಗೂಡು ಮಾಲೀಕರು, ಸಿಮೆಂಟ್‌ ವ್ಯಾಪಾರಸ್ಥರು, ಶಸ್ತ್ರಚಿಕಿತ್ಸಕರು, ಸೀಸ, ತಾಮ್ರ ಅಥವಾ ಉಕ್ಕಿನ ವ್ಯಾಪಾರ ಅಥವಾ ಉನ್ನತ ಅಧಿಕಾರಿಯೂ ಆಗಬಹುದು.

ಕುಂಭ ರಾಶಿಯವರು ಬುದ್ಧಿವಂತರಾಗಿರುವುದರಿಂದ ಯಾವಾಗಲೂ ವಿದ್ಯಾವಂತ ಹಾಗೂ ತಮ್ಮಷ್ಟೇ ಬುದ್ಧಿವಂತ ಸಂಗಾತಿಯನ್ನು ಬಯಸುತ್ತಾರೆ. ಸಮಾನ ಮನಸ್ಕರೊಡನೆ ಮಾತ್ರವೇ ಮುಕ್ತವಾಗಿ ಮಾತನಾಡುತ್ತಾರೆ. ಇವರು ಶಾಶ್ವತ ಹಾಗೂ ಬಲವಾದ ಸಂಬಂಧಗಳನ್ನು ಮಾತ್ರವೇ ಬಯಸುತ್ತಾರೆ. ಯಾವುದೇ ಭಯವನ್ನು ಹೊಂದಿರದ ಇವರು ತಮ್ಮ ಸಂಗಾತಿಯ ಮೇಲೆ ಎಂದಿಗೂ ಹಿಡಿತ ಸಾಧಿಸಲು ಪ್ರಯತ್ನಿಸಲಾರರು. ಕೆಲವೊಂದು ವ್ಯಕ್ತಿಗಳ ಮನೋಸ್ಥಿತಿಯನ್ನು ಅರ್ಥಮಾಡಿಕೊಂಡ ಬಳಿಕ ನಿಧಾನವಾಗಿ ಮತ್ತು ಯಾವುದೇ ಕಾರಣವಿಲ್ಲದೇ ತಮ್ಮ ಸ್ನೇಹ ಮತ್ತು ಸಂಬಂಧವನ್ನು ಕೊನೆಗೊಳಿಸಬಹುದು. ಕುಂಭ ರಾಶಿಯವರು ತಮ್ಮ ಸಂಗಾತಿಯ ಮೇಲಿರುವ ಪ್ರೀತಿಯನ್ನು ಎಂದಿಗೂ ತೋರ್ಪಡಿಸುವುದಿಲ್ಲ. ಇವರನ್ನು ಪ್ರೀತಿಸುವವರು ಕೂಡಾ ನಿಜವಾದ ಪ್ರಾಮಾಣಿಕ, ಕರ್ತವ್ಯನಿಷ್ಠ ಹಾಗೂ ಉದಾತ್ತ ಮನೋಭಾವದ ಪ್ರೇಮಿಯಾಗಿರುತ್ತಾರೆ. ಕುಂಭ ರಾಶಿಯವರನ್ನು ಮದುವೆಯಾಗುವವರು ಅವರಲ್ಲಿ ಮಾನವೀಯತೆ, ದಯೆ, ಸಹಾನುಭೂತಿ, ಕಾಳಜಿ ಹಾಗೂ ಉದಾರತೆಯನ್ನು ಕಾಣುತ್ತಾರೆ.

ಕುಂಭ ರಾಶಿಯವರು ಸೋಂಕು ಸಂಬಂಧೀ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅತಿಯಾಗಿ ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳುವುದೂ ಅವಶ್ಯಕವಾಗಿರುತ್ತದೆ. ಹೃದಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಂಧಿವಾತ, ರಕ್ತದೊತ್ತಡದ ಸಮಸ್ಯೆಗಳೂ ಇವರನ್ನು ಕಾಡಬಹುದು. ಹಲ್ಲು, ಗಂಟಲು, ಕಾಲುಗಳ ಊತ, ಕಾಲು ನೋವು, ಕಿವಿಗೆ ಸಂಬಂಧಪಟ್ಟ ಅನಾರೋಗ್ಯವೂ ಕಾಣಿಸಿಕೊಳ್ಳಬಹುದು. ಆರನೇ ಮನೆಯ ಅಧಿಪತಿಯಾಗಿರುವ ಚಂದ್ರನು ಸಾಮಾನ್ಯ ಖಾಯಿಲೆಗಳಿಗೆ ಕಾರಣವಾಗುತ್ತಾನೆ. ಗ್ರಹಗಳ ಸ್ಥಾನದಿಂದ ಧನಿಷ್ಠಾ ನಕ್ಷತ್ರದವರಿಗೆ ಜ್ವರ, ಮಲೇರಿಯಾ, ಅಧಿಕ ರಕ್ತದೊತ್ತಡ, ಮೂಳೆ ಮುರಿತದಂತಹ ಅಪಾಯಗಳು ಕಾಡಬಹುದು. ಶತಭಿಷಾ ನಕ್ಷತ್ರದವರಿಗೆ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆ, ರಕ್ತದೊತ್ತಡ, ನಿದ್ರಾಹೀನತೆ ಅಥವಾ ಮಲಬದ್ಧತೆಯನ್ನು ಎದುರಿಸಬಹುದು. ಪೂರ್ವಭಾದ್ರ ನಕ್ಷತ್ರವಾಗಿದ್ದಲ್ಲಿ ರಕ್ತಪರಿಚಲನೆಯ ಸಮಸ್ಯೆ, ಚರ್ಮದ ಸಮಸ್ಯೆ, ಬಾಯಲ್ಲಿ ಅಲ್ಸರ್‌ನಂತಹ ಸಮಸ್ಯೆಗಳು ಕಾಡಬಹುದು. ಶುಕ್ರನು ಬಾಧಕ ಸ್ಥಾನದಲ್ಲಿದ್ದು ಎರಡನೇ ಹಾಗೂ ಏಳನೇ ಸ್ಥಾನದಲ್ಲಿ ಮಾರಕನಾಗಿ ಗುರು ಮತ್ತು ಸೂರ್ಯನ ಅಧಿಪತ್ಯವು ದೀರ್ಘಾಯುಷ್ಯದ ಮೇಲೆ ಪರಿಣಾಮ ಬೀರುತ್ತದೆ.

ಮೇಲೆ ತಿಳಿಸಿದಂತೆ ಇವರು ಸೃಜನಶೀಲರು ಆದರೆ ಇತರರು ಅವರ ಮನವೊಲಿಸುವುದು ಕಷ್ಟ. ಇತರರ ಮಾತನ್ನು ಅವರು ಕೇಳುವುದಿಲ್ಲ. ಬೇರೆಯವರನ್ನು ನಂಬುವುದಿಲ್ಲ ಕೂಡ. ಇವರ ವಿಶಿಷ್ಟ ಗುಣ, ಸದಾ ಬದಲಾಗುವ ಸ್ವಭಾವದಿಂದಾಗಿ ಇವರು ತಮ್ಮಂತೆಯೇ ಇರುವವರನ್ನು ಹುಡುಕುತ್ತಾರೆ. ಆದ್ದರಿಂದ ಇತರರೊಂದಿಗೆ ಹೊಂದಾಣಿಕೆಯಾಗುವುದು ತುಂಬಾ ಕಷ್ಟ. ಇವರು ಕೆಲಸ ಮಾಡುವ ರೀತಿ ವಿಭಿನ್ನವಾದುದು ಇದು ಇತರರಿಗೆ ಮಿತಿಮೀರಿದ ಸ್ವಭಾವದಂತೆ ಕಾಣಬಹುದು. ಕೆಲಸದ ಸ್ಥಳದಲ್ಲಿ ಇತರರನ್ನು ಗೌರವಿಸುವಾಗ ಕೆಲವೊಮ್ಮೆ ತಮ್ಮ ಮಿತಿಗಳನ್ನು ದಾಟಬಹುದು. ಇವರು ದುಃಖ, ಖಿನ್ನತೆ, ಆಕ್ರೋಶ ಹಾಗೂ ಒತ್ತಡವನ್ನು ಒಂದೇ ಬಾರಿಗೆ ಹೊರಹಾಕುತ್ತಾರೆ. ವಿಶಾಲ ಮನೋಭಾವದ ವ್ಯಕ್ತಿಯಾದರೂ ತಮ್ಮ ಸ್ವಭಾವದಲ್ಲಿ ಬಹಳಷ್ಟು ಹಠಮಾರಿ. ಏನನ್ನಾದರೂ ಬಯಸಿದರೆ ಅದು ಸಿಗಲು ಏನು ಬೇಕಾದರೂ ಮಾಡುತ್ತಾರೆ. ತಮ್ಮ ಅಭಿಪ್ರಾಯಗಳ ಬಗ್ಗೆ ಇವರು ತುಂಬಾ ಹಠಮಾರಿಯಾಗಿರುತ್ತಾರೆ. ತಮ್ಮ ಮಾತೇ ನಡೆಯಬೇಕೆಂಬ ನಕಾರಾತ್ಮಕ ಗುಣ ಇವರದ್ದಾಗಿದೆ.

Leave A Reply

Your email address will not be published.