ಗುರು ಗ್ರಹವನ್ನು ದೇವರು ಎಂದು ಪರಿಗಣಿಸಲಾಗುತ್ತದೆ ಗುರು ಗ್ರಹ ಧನು ಹಾಗೂ ಮೀನ ರಾಶಿಯ ಅಧಿಪತಿ ಆಗಿರುತ್ತದೆ. ಇದೆ ಬರುವ ಮೇ ತಿಂಗಳಿನ ಒಂದನೆ ತಾರೀಖಿನಂದು ಗುರು ಸಂಕ್ರಮಣ ನಡೆಯಲಿದೆ ಗುರು ಸಂಕ್ರಮಣದ ಪ್ರಭಾವ ಕೆಲವು ರಾಶಿಗಳ ಮೇಲಾಗುತ್ತದೆ ಹಾಗಾದರೆ ಗುರು ಸಂಚಾರದ ಪ್ರಭಾವವನ್ನು ಪಡೆಯುವ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಗುರುದೇವ ಒಂದು ರಾಶಿಯಲ್ಲಿ ಒಂದು ವರ್ಷ ವಾಸಿಸುತ್ತಾನೆ ಪ್ರಸ್ತುತ ಅವನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೇ 1ನೇ ತಾರೀಖಿನಂದು ಗುರು ಸಂಕ್ರಮಣ ನಡೆಯಲಿದೆ. ಅಂದು ಗುರು ಶುಕ್ರನ ರಾಶಿಯಾದ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಸಾಮಾನ್ಯವಾಗಿ ಗುರು ಸಂಕ್ರಮಣ ಮಾಡಿದಾಗ ಅದರ ಪ್ರಭಾವ ಮೇಷ ರಾಶಿಯಿಂದ ಮೀನ ರಾಶಿಗಳ ಮೇಲೆ ಆಗುತ್ತದೆ. ಗುರು ವೃಷಭ ರಾಶಿಯನ್ನು ಪ್ರವೇಶ ಮಾಡಿದಾಗ ಕುಬೇರ ಯೋಗ ಉಂಟಾಗುತ್ತದೆ ಈ ಯೋಗ ಮಂಗಳಕರವಾಗಿದ್ದು ಕೆಲವು ರಾಶಿಗಳಲ್ಲಿ ಜನಿಸಿದವರು ಧನ ಸಂಪತ್ತನ್ನು ಸಂಪಾದಿಸುತ್ತಾರೆ ಹಾಗೂ ಶ್ರೀಮಂತರಾಗುವ ಅವಕಾಶ ಒದಗುತ್ತದೆ.

ಈ ಯೋಗದಿಂದ ವೃಷಭ ರಾಶಿಯವರಿಗೆ ಶುಭವಾಗುತ್ತದೆ ವೃಷಭ ರಾಶಿಯ ಮೊದಲನೆ ಮನೆಯಲ್ಲಿ ಈ ಯೋಗ ಏರ್ಪಾಡುತ್ತಿರುವುದರಿಂದ ಈ ರಾಶಿಯವರು ಉತ್ತಮ ಬೌದ್ಧಿಕ ಸಂತೋಷವನ್ನು ಪಡೆಯುತ್ತಾರೆ. ಈ ರಾಶಿಯವರು ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಈ ರಾಶಿಯವರು ವ್ಯವಹಾರದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಅಂತ್ಯಗೊಳ್ಳುತ್ತದೆ, ಕುಬೇರ ಯೋಗದಿಂದ ವೃಷಭ ರಾಶಿಯವರ ಜೀವನದಲ್ಲಿ ಸಾಕಷ್ಟು ಪ್ರಗತಿಯಾಗುತ್ತದೆ.

ವೃಷಭ ರಾಶಿಯ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೃಷಭ ರಾಶಿಯವರ ಆರ್ಥಿಕ ಜೀವನ ಉತ್ತಮವಾಗುತ್ತದೆ ಹಣಕಾಸಿನ ಹರಿವು ಅವರ ಜೀವನದಲ್ಲಿ ಕಂಡು ಬರುತ್ತದೆ, ಬೇರೆ ಬೇರೆ ಆದಾಯದ ಮೂಲಗಳು ತಿಳಿಯುತ್ತದೆ ಅಲ್ಲದೆ ವೃಷಭ ರಾಶಿಯವರು ಅನಗತ್ಯ ಖರ್ಚುಗಳಿಂದ ಮುಕ್ತರಾಗುತ್ತಾರೆ. ಕುಬೇರ ಯೋಗದಿಂದ ಲಾಭ ಪಡೆಯುತ್ತಿರುವ ಇನ್ನೊಂದು ರಾಶಿ ಕರ್ಕಾಟಕ ರಾಶಿ ಈ ರಾಶಿಯವರಿಗೆ ಇದು ಮಂಗಳಕರವಾಗಿದೆ. ಈ ರಾಶಿಯವರು ಅವರ ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತಾರೆ.

ಇವರಿಗೆ ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಆಸಕ್ತಿ ಬೆಳೆಯುತ್ತದೆ, ವ್ಯಾಪಾರಿಗಳಿಗೆ ಹಾಗೂ ಜಂಟಿ ಉದ್ಯೋಗದಲ್ಲಿ ತೊಡಗಿರುವವರಿಗೆ ಒಳ್ಳೆಯದಾಗುತ್ತದೆ ಹಾಗೂ ಇವರ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕರ್ಕಾಟಕ ರಾಶಿಯವರಿಗೆ ಹೊಸ ಆದಾಯದ ಮೂಲಗಳು ದೊರಕುತ್ತದೆ, ಕೆಲಸದ ಸಂಬಂಧ ಪ್ರವಾಸಕ್ಕೆ ಹೋಗುವ ಅವಕಾಶಗಳು ಸಿಗುತ್ತವೆ. ಹಣಕಾಸಿನ ವಿಷಯದಲ್ಲಿ ಅನಿರೀಕ್ಷಿತ ಸುಧಾರಣೆ ಕಂಡುಬರುತ್ತದೆ, ಕಟಕ ರಾಶಿ ಉದ್ಯೋಗಿಗಳಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಕರ್ಕಾಟಕ ರಾಶಿಯವರ ಪ್ರೀತಿಯ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿಯ 9ನೆ ಮನೆಯಲ್ಲಿ ಕುಬೇರ ಯೋಗ ರೂಪುಗೊಳ್ಳುತ್ತದೆ ಇದರಿಂದ ಅವರಿಗೆ ಲಾಭವಿದೆ ಈ ರಾಶಿಯ ಕೆಲಸಕ್ಕೆ ಹೋಗುತ್ತಿರುವವರಿಗೆ ಹೆಚ್ಚಿನ ವೇತನ ಹಾಗೂ ಬಡ್ತಿ ಸಿಗುವ ಸಾಧ್ಯತೆ ಇದೆ. ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಕನ್ಯಾ ರಾಶಿಯವರಿಗೆ ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿ ಬರುತ್ತದೆ, ಕೆಲಸಕ್ಕೆ ಸಂಬಂಧಿಸಿದಂತೆ ಕನ್ಯಾ ರಾಶಿಯವರು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ಕನ್ಯಾ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಹಾಗೂ ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಉತ್ತಮ ಬೆಂಬಲ ಸಿಗುತ್ತದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಈ ಮೂರು ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

By

Leave a Reply

Your email address will not be published. Required fields are marked *