ಸ್ಯಾಂಡಲ್ ವುಡ್ ರಂಗದಲ್ಲಿ ಅನೇಕ ಕಲಾವಿದರು ತಮ್ಮ ನಟನೆಯ ಮೂಲಕ ಜನರ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾರೆ ಕೆಲವರು ತಮ್ಮ ಅಳುಮುಂಜಿ ನಟನೆ ಇಂದ ಆದರೆ ಕೆಲವರು ಅಹಂಕಾರಿ ನಾಯಕನ ಪಾತ್ರದ ನಟನೆಯ ಮೂಲಕ ಅನೇಕ ಅಭಿಮಾನಿ ಬಳಗವನ್ನು ತನ್ನ ಬೊಕ್ಕಸೆಗೆ ಇಟ್ಟುಕೊಂಡಿದ್ದಾರೆ. ಇಂದಿಗೂ ಅವರ ಅಭಿನಯವನ್ನು ಮರೆಯುವಂತಿಲ್ಲ ಅವರ ಹೊಸ ಸಿನಿಮಾ ಬಿಡುಗಡೆ ಆದರೆ ಇಂದಿಗೂ ಅಷ್ಟೆ ಇಷ್ಟ ಪಟ್ಟು ನೋಡುತ್ತಾರೆ

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಸಂಗೀತ ಮೂಲಕ ಪ್ರಖ್ಯಾತಿ ಆಗಿರುವ ನಟಿ ಮಾಲಾಶ್ರೀ ಅವರು ಚಿಕ್ಕ ಪ್ರಾಯದಲ್ಲೇ ಬಾಲ ನಟಿಯಾಗಿ ಹಲವರು ಸಿನಿಮಾ ಅಲ್ಲಿ ನಟಿಸಿದ್ದಾರೆ ಇವರು ಆಗಸ್ಟ್ 10 1973 ಅಲ್ಲಿ ಜನಿಸಿದರು ಕನ್ನಡ ಚಿತ್ರ ರಂಗದಲ್ಲಿ ತನ್ನ ಭಾವನಾತ್ಮಕ ನಟನೆ ಮೂಲಕ ಪ್ರಖ್ಯಾತಿ ಹೊಂದಿದ್ದು 1989 ರ ಸಾರ್ವಕಾಲಿಕ ಜನಪ್ರಿಯವಾದ ಸಿನಿಮಾ ನಂಜುಂಡಿ ಕಲ್ಯಾಣ ಅಲ್ಲಿ ಅಹಂಕಾರಿ ಹೆಣ್ಣಿನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆ ಅಭಿನಯಿಸಿ ಒಂದೇ ರಾತ್ರಿ ಅಲ್ಲಿ ಎಲ್ಲರ ಕನಸಿನ ರಾಣಿಯಾಗಿ ಪ್ರಸಿದ್ದಿ ಪಡೆದ ನಟಿ.

ನಂತರ ಒಂದರ ಹಿಂದೆ ಒಂದರಂತೆ ಹಲವಾರು ಅವಕಾಶಗಳು ಇವರ ಪಾಲಿಗೆ ಬಂದು ಎಷ್ಟೋ ಸಿನಿಮಾಗಳು ಇವರಿಗೆ ಅಂತಾನೆ ಕಥೆಯನ್ನು ನಿರೂಪಿಸಿ ಅಭಿನಯ ಮಾಡಿದ್ದಾರೆ ಗಜಪತಿ ಗರ್ವಭಂಗ ಪ್ರತಾಪ್ ಕಿತ್ತೂರಿನ ಹುಲಿ ಚಾಮುಂಡಿ ಶಕ್ತಿ ಕಿರಣ್ ಬೇಡಿ ಗೃಹ ಪ್ರವೇಶ ಹೀಗೆ ಹಲವರು ಸಿನಿಮಾ ಅಲ್ಲಿ ನಟನೆ ಮಾಡಿದ್ದಾರೆ ಹಾಗೂ ಅವರ ಉತ್ತಮ ಅಭಿನಯಕ್ಕೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ ಅವರ ಪತಿಯು ಕೂಡ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕ ರಾಮು ಅವರನ್ನು ಎಲ್ಲರೂ ಕೋಟಿ ರಾಮು ಎಂದೇ ಕರೆಯುತ್ತಾರೆ

ಇವರು ಗೋಲಿಬಾರ್ ಚಿತ್ರ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಏ ಕೆ 47 ಕಲಾಸಿಪಾಳ್ಯ ಹಾಗೂ ಲಾಕಪ್ ಡೆತ್ ಹೀಗೆ ಸುಮಾರು 350 ಕ್ಕೂ ಹೆಚ್ಚು ಸಿನಿಮಾ ನಿರ್ಮಾಪಕ ಹಾಗೂ ವಿತರಕರು ಆಗಿ ಕನ್ನಡ ಚಿತ್ರರಂಗಕ್ಕೆ ತಮ್ಮ ಅನನ್ಯ ಕೊಡುಗೆ ನೀಡಿದ್ದಾರೆ ಆದರೆ ಕರೋನ ಕಾಲದಲ್ಲಿ ಉಸಿರಾಟ ಸಮಸ್ಯೆ ಇಂದ ನಮ್ಮನ್ನು ಬಿಟ್ಟು ಅಗಲಿದ್ದಾರೆ ಇನ್ನೂ ಇವರಿಗೆ ಅನನ್ಯ ಮತ್ತು ಆರ್ಯನ್ ಎಂಬ ಮಕ್ಕಳಿದ್ದಾರೆ

ಪತಿಯ ನಿಧನ ಬಳಿಕ ಮಾಲಾಶ್ರೀ ಅವರು ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಆದರೆ ಇತ್ತೀಚಿಗೆ ಮಾಲಾಶ್ರೀ ಅವರು ತಮ್ಮ ಕುಟುಂಬ ಸಮೇತ ಆಂಧ್ರದ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಅದರ ಕೆಲವೊಂದು ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂ ಅಲ್ಲಿ ಹಾಕಿದ್ದು ದೇವಸ್ಥಾನದ ಮುಂದೆ ಪೂರ್ತಿ ಪರಿವಾರ ಫೋಟೋ ತೆಗೆದು ಕೊಂಡಿದ್ದಾರೆ ಅದನ್ನು ಸೋಶಿಯಲ್ ಮೀಡಿಯಾ ದಿಲ್ಲಿ ಹಂಚಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ ಇದರಲ್ಲಿ ಮಾಲಾಶ್ರೀ ಅವರು ಪಿಂಕ್ ಮತ್ತು ಗ್ರೀನ್ ಸಲ್ವಾರ್ ಅಲ್ಲಿ ಕಾಣಿಸಿಕೊಂಡಿದ್ದು ಮಗಳು ಅನನ್ಯ ಗೋಲ್ಡ್ ಹಾಗೂ ಗ್ರೀನ್ ಕಾಂಬಿನೇಷನ್ ಲಂಗ ದಾವಣಿ ಅಲ್ಲಿ ಮಿಂಚಿದ್ದು ಮಗ ರೇಷ್ಮೆ ಪಂಚೆ ಅಲ್ಲಿ ಕಾಣಿಸಿಕೊಂಡಿದ್ದಾರೆ

ವರ್ಷಗಳ ಬಳಿಕ ಮಾಲಶ್ರೀ ಅವರು ಉಪ್ಪು ಹುಳಿ ಕಾರ ಸಿನಿಮಾಕ್ಕೆ ಬಣ್ಣ ಹಚ್ಚಿ ಪುನಃ ಸಿನಿಮಾದಲ್ಲಿ ತನ್ನ ಜೀವನದಲ್ಲಿ ಬಿಝಿ ಆಗಿದ್ದಾರೆ ಇನ್ನೂ ಇವರ ಯಾವುದೇ ಸಿನಿಮಾಗಳು ಅಷ್ಟೊಂದು ಸೋಲನ್ನು ಕಾಣದೆ ಇರುವುದು ಹೆಮ್ಮೆಯ ವಿಚಾರ ತಮಿಳುನಾಡಿನಲ್ಲಿ ಜನಿಸಿದರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಅವರ ಅಭಿನಯಕ್ಕೆ ಪ್ರೇಕ್ಷಕ ಕನಸಿನ ರಾಣಿಯಾಗಿ ಮೆರೆದಿದ್ದಾರೆ ಬಹಳ ವರ್ಷಗಳ ನಂತರ ನಟಿಸಲಿರುವ ಹೊಸ ಸಿನಿಮಾ ಹಿಟ್ ಆಗಲೆಂದು ಆಶಿಸೋಣ.

Leave a Reply

Your email address will not be published. Required fields are marked *