IPS Success Story Ranjitha Sharma: ಸಾಧಿಸುವವನಿಗೆ ಸಾಧಿಸುವ ಛಲ ಹಠ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ, ಆದ್ರೆ ಯಶಸ್ಸು ಬೇಗ ಸಿಗದೇ ಇರಬಹುದು, ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ.. ತನ್ನದು ಮಧ್ಯಮ ವರ್ಗದ ಕುಟುಂಬ, ತಂದೆ ಹಳ್ಳಿಯಲ್ಲಿ ಚಿಕ್ಕ ಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುತ್ತಿರುತ್ತಾರೆ. ಇದರ ಮಧ್ಯೆ ಮಗಳು ದೊಡ್ಡ ಹುದ್ದೆಯಲ್ಲಿ ಸೇರಬೇಕು ಎನ್ನುವ ಕನಸು ಹೊತ್ತು ಗುರಿಯನ್ನು ಬೆನ್ನಟ್ಟಿ ತನ್ನ ಶ್ರಮಕ್ಕೆ ಪ್ರತಿಫಲ ಪಡೆಯುತ್ತಾರೆ. ಅಷ್ಟಕ್ಕೂ ಇವರು ಯಾರು, ಇವರ ಯಶಸ್ಸಿನ ಹದಿ ಹೇಗಿತ್ತು ಅನ್ನೋದನ್ನ ಮುಂದೆ ನೋಡಿ.

ಹೆಸರು ರಂಜಿತಾ ಶರ್ಮ IPS, ಇವರು ಮೂಲತಃ ಹರಿಯಾಣದ ಫರಿದಾಬಾದ್ ಜಿಲ್ಲೆಯ ಧಿನಾ ಹಳ್ಳಿಯವರು ಇವರ ತಂದೆ ವೃತ್ತಿಯಲ್ಲಿ ಚಿಕ್ಕ ವ್ಯಾಪಾರಿ ಇವರ ತಂದೆ ಹೆಸರು ಸತೀಶ್ ಕುಮಾರ್ ಶರ್ಮ, ತಾಯಿ ಸವಿತಾ ಹಾಗೂ ಇವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ.

ಇವರ ಶಾಲಾ ಶಿಕ್ಷಣ ದೆಹಲಿಯ ಖಾಸಗಿ ಶಾಲೆಯಲ್ಲಿ ನಡೆಯಿತು. ಇವರು ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಮಾಡಿದ್ದಾರೆ. ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ನಲ್ಲಿ ಸಾರ್ವಜನಿಕ ಸಂಪರ್ಕದಲ್ಲಿ ಪಿಜಿ ಮಾಡಿದ್ದಾರೆ. 8 ವರ್ಷಗಳ ಕಾಲ ಖಾಸಗಿ ಕಂಪನಿಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡಿದ್ದರು ಆದ್ರೆ ಈ ಕೆಲಸ ಇವರಿಗೆ ಅಷ್ಟೊಂದು ತೃಪ್ತಿ ನೀಡುವುದಿಲ್ಲ ಅಷ್ಟೇ ಅಲ್ಲದೆ ಖಾಸಗಿ ಕೆಲಸದಲ್ಲಿ ಏನು ಸಾಧಿಸಲು ಆಗೋದಿಲ್ಲ ಎಂಬುದಾಗಿ ತನ್ನ ತಂದೆ ಬಳಿ ಹೇಳುತ್ತಾರೆ. ಇದರಿಂದ ತನ್ನ ತಂದೆ ಈ ಮಾತನ್ನು ಹೇಳುತ್ತಾರೆ ಮಗಳೇ ನೀವು IPS ಅಧಿಕಾರಿಯಾದ್ರೆ ನಾಲ್ಕು ಜನಕ್ಕೆ ಸೇವೆ ಸಲ್ಲಿಸಬಹುದು ಹಾಗೂ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಎಂಬುದಾಗಿ ಮಗಳಿಗೆ ತಂದೆ ಹೇಳುತ್ತಾರೆ. ಇದರಿಂದ ಮಗಳು ಸಿವಿಲ್ ಕಡೆ ಹೆಚ್ಚು ಗುರಿ ಹೊಂದುತ್ತಾರೆ.

ಸಿವಿಲ್ ಪರೀಕ್ಷೆಗೆ ನಿಮ್ಮ ತಯಾರಿ ಹೇಗಿತ್ತು?
ನಮ್ಮ ಗುರಿಯ ಬಗ್ಗೆ ನಮಗೆ ಸ್ಪಷ್ಟತೆ ಇದ್ದರೆ ನಾಗರಿಕ ಗುರಿಗಳನ್ನು ಸಾಧಿಸುವುದು ಕಷ್ಟದ ಕೆಲಸವಲ್ಲ ಎಂದು ನಾನು ನಂಬುತ್ತೇನೆ. ಮೊದಲು ನಮಗೆ ಯಾವ ಥೀಮ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಾವು ಸಲಹೆ ಕೇಳುವ ವ್ಯಕ್ತಿ ಸರಿಯಾದವರಾಗಿರಬೇಕು. ಮುಂದೆ, ನಾವು ವಿಷಯವನ್ನು ಸಂಪೂರ್ಣವಾಗಿ ಓದಲು ಯೋಜಿಸಬೇಕು. ಎರಡು ದಿನಗಳ ಅಧ್ಯಯನದ ನಂತರ ನಾನು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಇಡೀ ದಿನ ಪುಸ್ತಕಗಳೊಂದಿಗೆ ಕುಳಿತುಕೊಳ್ಳುವ ಅಗತ್ಯವಿಲ್ಲ. ಉತ್ತಮ ಯೋಜಿತ ಯೋಜನೆಯೊಂದಿಗೆ ನಿಯಮಿತ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಿ. ನಾನು ದಿನಕ್ಕೆ ಆರು ಗಂಟೆ ಮಾತ್ರ ಓದುತ್ತಿದ್ದೆ. ವಾರಾಂತ್ಯದಲ್ಲಿ ನಾವು ತಯಾರಿಗಾಗಿ ಸ್ವಲ್ಪ ಹೆಚ್ಚು ಸಮಯವನ್ನು ಕಳೆದಿದ್ದೇವೆ. ತಯಾರಿ ಮಾಡುವಾಗ ಏಕಾಗ್ರತೆ ಕಳೆದುಕೊಳ್ಳದಂತೆ ಎಚ್ಚರವಹಿಸಿ.

ಪೊಲೀಸ್ ಅಕಾಡೆಮಿಗೆ ಪ್ರವೇಶಿಸಿದ ನಂತರ, ನಾನು ಸ್ವಲ್ಪ ಸಮಯದವರೆಗೆ ಸಮಸ್ಯೆಯನ್ನು ಎದುರಿಸಿದೆ. ಈ ತರಬೇತಿಯು ಅನೇಕ ಸವಾಲುಗಳನ್ನು ತರುತ್ತದೆ. ಐಪಿಎಸ್ ಅಧಿಕಾರಿಯಾದ ನಂತರ ನಾನಾ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಸಹಿಸಿಕೊಳ್ಳುವುದು ಮಾತ್ರವಲ್ಲ ತಂಡವನ್ನು ಮುನ್ನಡೆಸಬಲ್ಲ ನಾಯಕನೂ ಆಗಬೇಕು. ಆಗ ಮಾತ್ರ ನಾವು ಯಶಸ್ವಿಯಾಗುತ್ತೇವೆ ಎಂಬುದಾಗಿ ಹೇಳುತ್ತಾರೆ/

ಅದೇನೇ ಇರಲಿ ಸಾಧಿಸಲು ಬಡತನ ಅಡ್ಡಿಯಲ್ಲ ಎಂಬುದನ್ನು ತೋರಿಸಿ ಕೊಡುವ ಜೊತೆಗೆ ತಂದೆಯ ಆಸೆಯಂತೆ ಐಪಿಎಸ್ ಅಧಿಕಾರಿಯಾದ ಇವರಿಗೆ ನಮ್ಮದೊಂದು ಸಲ್ಯೂಟ್. ಈ ಹಳ್ಳಿ ಯುವತಿಯ ಸಾಧನೆ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇತರಿಗೂ ಹಂಚಿಕೊಳ್ಳಿ ಇದರಿಂದ ಸ್ಫೂರ್ತಿಪಡೆಯಲಿ.

Leave a Reply

Your email address will not be published. Required fields are marked *

error: Content is protected !!