Gurubala ಗುರುಬಲ ಇಲ್ಲದಿದ್ದರೆ ಈ ಕೆಲಸ ಮಾಡುವುದರಿಂದ ಗುರುಬಲ ನಿಮ್ಮದಾಗುತ್ತದೆ ಸದಾ ನೆಮ್ಮದಿಯಿಂದ ಇರುತ್ತೀರಿ. ಪ್ರತಿಯೊಬ್ಬ ಮನುಷ್ಯನಿಗೂ ತಾನು ಜೀವನದಲ್ಲಿ ಉತ್ತುಂಗ ಸ್ಥಾನಕ್ಕೆ ಇರಬೇಕು ಹಾಗೂ ತನ್ನ ಪಾಲಿಗೆ ಅದೃಷ್ಟಗಳು ಒದಗಿ ಬರಬೇಕು ಎಂಬ ಹಂಬಲ ಇರುತ್ತದೆ ಇಂತಹ ಅದೃಷ್ಟಗಳನ್ನ ಪಡೆಯಲು ಗುರು ಬಲ (Gurubala) ಅತಿ ಮುಖ್ಯವಾಗಿರುತ್ತದೆ ಗುರುವಿನ ಅನುಗ್ರಹ ನಿಮ್ಮ ಜೊತೆ ಇದ್ದರೆ ನೀವು ಜೀವನದಲ್ಲಿ ಯಶಸ್ಸನ್ನ ಕಾಣಬಹುದು.

ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಗುರುಬಲ ಬಂದೇ ಬರುತ್ತದೆ ಅದು ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಗುರುಬಲ ಗುರುದಶ ಹಾಗೂ ಗುರು ಭುಕ್ತಿ ಈ ಮೂರು ತುಂಬಾ ಶ್ರೇಷ್ಠವಾದದ್ದು. ನಮ್ಮ ಜನ್ಮನಕ್ಷತ್ರ ನಮ್ಮ ಪೂರ್ವ ಜನ್ಮದ ಪುಣ್ಯ ಹಾಗೂ ನಮ್ಮ ಜೀವನದ ಕಾರ್ಯಗಳ ಮೇಲೆ ಇವುಗಳು ಅವಲಂಬಿತವಾಗಿರುತ್ತವೆ ಮನುಷ್ಯ ತಾನು ತನ್ನ ಜೀವನದಲ್ಲಿ ನಡೆಯುವ ಕಷ್ಟ ಕಾರ್ಪಣ್ಯಗಳ ಬಗ್ಗೆ ನೊಂದುಕೊಳ್ಳುತ್ತಾನೆ. ನಾನು ಅಂದುಕೊಂಡ ಕೆಲಸಗಳು ಯಾವುದು ಸರಿಯಾಗಿ ನೆರವೇರುವುದಿಲ್ಲ ಎಂದು ಒಳಗೊಳಗೆ ಕೊರಗುತ್ತಾನೆ

ಹೀಗೆ ಮನುಷ್ಯನ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಸಹ ಗುರುಬಲ ಎನ್ನುವುದು ಒಂದು ಅತ್ಯುತ್ತಮ ತಿರುವು ಎಂದು ಹೇಳಬಹುದು. ಹಾಗಾದರೆ ಗುರುಬಲ ಇಲ್ಲದೇ ಹೋದರೆ ನಮ್ಮ ಜೀವನದ ಯಾವ ಕೆಲಸವೂ ಆಗುವುದಿಲ್ಲ ಎನ್ನುವುದು ಸುಳ್ಳು. ನಡೆಯುವಂತ ಕಾರ್ಯಗಳು ನಡೆದೆ ತೀರುತ್ತವೆ. ಹಾಗಾದರೆ ಗುರುವಿನ ಬಗ್ಗೆ ಕೆಲವು ಮಾಹಿತಿಯನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

Gurubala 2023

ಶಾಸ್ತ್ರದಲ್ಲಿ ಹೇಳುವುದಾದರೆ ಗುರು ಅತ್ಯಂತ ದೊಡ್ಡ ಗ್ರಹ ಇಂತಹ ಗುರು ಗ್ರಹದ ಅನುಗ್ರಹದಿಂದ ಮನುಷ್ಯನ ಜೀವನದಲ್ಲಿ ಗುರುಬಲ ಎನ್ನುವಂಥದ್ದು ಕಂಡುಬರುತ್ತದೆ ಈ ಗುರುಬಲದಿಂದ ಮನುಷ್ಯನ ಜೀವನಶೈಲಿಯು ಉತ್ತುಂಗಕ್ಕೆ ಏರುತ್ತದೆ ಸಾಮಾನ್ಯವಾಗಿ ಶಾಸ್ತ್ರದಲ್ಲಿ ಗುರುವನ್ನು ಈಶ್ವರನಿಗೆ ಹೋಲಿಸಲಾಗುತ್ತದೆ ಆದ್ದರಿಂದ ನಿಮ್ಮಲ್ಲಿ ಗುರುವಿನ ಅನುಗ್ರಹ ಶಾಶ್ವತವಾಗಿ ನೆಲೆಸಬೇಕು ಎಂದಾದರೆ ಒಂಬತ್ತು ಸೋಮವಾರ ಅಥವಾ ಪ್ರತಿ ಸೋಮವಾರ ಶಿವನ ಸನ್ನಿಧಾನದಲ್ಲಿ ಬಿಲ್ವಾರ್ಜನೆ ರುದ್ರಾಭಿಷೇಕ ಮತ್ತು ಭಸ್ಮಾರ್ಚನೆಯನ್ನ ಮಾಡಿಸಬೇಕು

ಇದನ್ನ ಮಾಡುವುದರಿಂದ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಹೊಂದುತ್ತೀರಿ ಹಾಗೆ ಅರ್ಚನೆ ಮಾಡಿಸಿದ ಭಸ್ಮ ವನ್ನು ಪ್ರತಿನಿತ್ಯ ಹಣೆಗೆ ಹಚ್ಚಿಕೊಂಡು ಬಿಲ್ವಪತ್ರೆಯನ್ನು ನಿಮ್ಮ ಜೇಬಿನಲ್ಲಿ ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಕ್ಕೆ ತೆರಳಿದರೆ ನಿಮ್ಮ ಸರ್ವ ಕಾರ್ಯವು ಪೂರ್ಣಗೊಳ್ಳುತ್ತದೆ.

ಅಷ್ಟೇ ಅಲ್ಲದೆ ಹೀಗೆ ಶಿವನ ಆರಾಧನೆಯನ್ನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಂಡು ಬರುವ ತೊಂದರೆಗಳಾದ ಲಗ್ನ ,ದಾಂಪತ್ಯ ,ಸಂತಾನ, ವ್ಯವಹಾರ ಇತ್ಯಾದಿ ವಿಷಯಗಳಲ್ಲಿ ಗುರು ಪ್ರಬಲನಾಗಿರುತ್ತಾನೆ ಆದ್ದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಈ ಮೂಲಕವೇ ಪರಿಹಾರಗಳುತ್ತವೆ.ಇದನ್ನೂ ಓದಿ ವೃಶ್ಚಿಕ ರಾಶಿಯವರಿಗೆ ಈ ಆಗಸ್ಟ್ ತಿಂಗಳಲ್ಲಿ ಕಷ್ಟಗಳು ದೂರ ಆಗುತ್ತಾ? ಈ ತಿಂಗಳು ಹೇಗಿರತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *