Guru Sanchara 2024: ಗುರುವಿನಿಂದ ಈ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ವೃತ್ತಿ ಜೀವನದ ವಿಚಾರದಲ್ಲಿ ಯಶಸ್ಸು ಸಿಗುತ್ತದೆ. ಹೌದು 2024ರ ಹೊಸ ವರ್ಷದಲ್ಲಿ ಉಂಟಾಗುವ ಗುರುವಿನ ಸಂಚಾರದಿಂದ ಇಂತಹ ರಾಶಿಯವರಿಗೆ ಅನೇಕ ವಿಚಾರಗಳಲ್ಲಿ ಒಳ್ಳೆಯ ಬದಲಾವಣೆಗಳು ಕಂಡು ಬರಲಿವೆ ಈ ರಾಶಿಯವರು ತಮ್ಮ ಉದ್ಯೋಗ ವ್ಯವಹಾರದಲ್ಲಿ ಬಹಳ ಒಳ್ಳೆಯ ಫಲಗಳನ್ನು ಕಾಣಲು ಸಾಧ್ಯವಾಗುತ್ತದೆ ಹಾಗಾದರೆ ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಗುರುದೆಸೆಯು ದ್ವಾದಶ ರಾಶಿಯ ಮೇಲೆ ಬೀರುವ ಪ್ರಭಾವದಿಂದ ಅಂತಹ ರಾಶಿಗಳ ಅದೃಷ್ಟದಲ್ಲಿ ಬದಲಾವಣೆ ಉಂಟಾಗುತ್ತದೆ ಗುರು ಉತ್ತಮ ಫಲಿತಾಂಶವನ್ನು ನೀಡುವ ಗ್ರಹವಾಗಿದ್ದು ಒಳ್ಳೆಯ ಪ್ರಭಾವವನ್ನೇ ತಾನು ಸಂಚರಿಸುವ ರಾಶಿಗಳ ಮೇಲೆ ಬೀರುತ್ತಾನೆ. ಮೊದಲನೆಯದಾಗಿ ಮೇಷ ರಾಶಿ, ಈ ಹೊಸ ವರ್ಷದಲ್ಲಿ ಗುರು ಮೇಷ ರಾಶಿಯ ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ಹಾಗಾಗಿ ಮೇಷ ರಾಶಿಯವರಿಗೆ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆಗಳು ಉಂಟಾಗುವುದರ ಜೊತೆಗೆ ನಿಮ್ಮ ಕಾರ್ಯಕ್ಷಮತೆಯನ್ನು ತೋರಿಸಲು ಒಳ್ಳೆಯ ಅವಕಾಶಗಳು ಕಂಡುಬರುತ್ತವೆ ನಿಮ್ಮ ಕೆಲಸಗಳಲ್ಲಿ ಬಹಳಷ್ಟು ಆಯ್ಕೆಗಳನ್ನ ನೀವು ಪಡೆಯುತ್ತೀರಾ ಹಾಗೆ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ವಿಶೇಷವಾಗಿ ನಿರುದ್ಯೋಗಿಗಳಿಗೆ ಈ ಹೊಸ ವರ್ಷದಲ್ಲಿ ಖಂಡಿತವಾಗಿ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಗುರುವಿನ ಈ ಸಂಚಾರದಿಂದ ಮೇಷ ರಾಶಿ ಅವರಿಗೆ ತುಂಬಾ ಒಳ್ಳೆಯ ಫಲಿತಾಂಶ ಕಂಡು ಬರಲಿದೆ.

ಇನ್ನೂ ಧನು ರಾಶಿ ಗುರು ಧನು ರಾಶಿಯ ಆರನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಗುರು ಧನು ರಾಶಿಯ ಅಧಿಪತಿಯಾಗಿರುವುದರಿಂದ ವೃತ್ತಿ ಜೀವನ ವ್ಯಾಪಾರ ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಒಳ್ಳೆಯ ಬದಲಾವಣೆಗಳನ್ನೇ ಉಂಟು ಮಾಡುತ್ತಾನೆ ಹಾಗಾಗಿ ಧನು ರಾಶಿಯವರು ತಾವು ಮಾಡುವ ಕೆಲಸವನ್ನ ಆಶಾವಾದದೊಂದಿಗೆ ಮಾಡಿಕೊಂಡು ಹೋದರೆ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತೀರಾ.
ಕುಂಭ ರಾಶಿ. ಕುಂಭ ರಾಶಿಯವರಿಗೆ 2024ನೆಯ ಹೊಸ ವರ್ಷ ಬಹಳ ವಿಶೇಷವಾಗಿದೆ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾಗುತ್ತದೆ ನೀವು ನಿಮ್ಮ ಜೀವನದಲ್ಲಿ ಏನನ್ನ ಪಡೆಯಲು ಬಯಸಿದ್ದೀರೋ ಅವೆಲ್ಲವೂ ಈ ಹೊಸ ವರ್ಷದಲ್ಲಿ ನಿಮ್ಮ ಕೈ ಸೇರುತ್ತವೆ ನೀವು ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಬಯಸಿದಂತಹ ಯಶಸ್ಸನ್ನ ಸಾಧಿಸಲು ಗುರು ನಿಮಗೆ ಸಹಾಯ ಮಾಡುತ್ತಾನೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಗುರು ಖಂಡಿತವಾಗಿಯೂ ನೀಡುತ್ತಾನೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ನಿಮ್ಮ ಸಂಬಳದಲ್ಲಿ ಹೆಚ್ಚಳ ಕೂಡ ಉಂಟಾಗಬಹುದು.

ಇನ್ನು ಸಿಂಹ ರಾಶಿ ಈ ವರ್ಷದಲ್ಲಿ ಸಿಂಹ ರಾಶಿಯ ಹತ್ತನೇ ಮನೆಯಲ್ಲಿ ಗುರುವಿನ ಸಂಚಾರ ಕಂಡು ಬರಲಿದ್ದು ನಿಮ್ಮ ರಾಶಿಯ ಜನರಲ್ಲಿ ವೃತ್ತಿಪರ ಬದಲಾವಣೆಗೆ ಹೆಚ್ಚಾಗಿ ಅವಕಾಶಗಳು ಕಂಡುಬರುತ್ತದೆ ನಿಮ್ಮ ಉತ್ತಮ ನಾಯಕತ್ವದ ಗುಣ ನಿಮ್ಮನ್ನ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ ಈ ಹೊಸ ವರ್ಷ ಗುರುವಿನ ಕೃಪೆಯಿಂದ ನಿಮ್ಮ ಉದ್ಯೋಗದ ವಿಚಾರ ಕೆಲಸದ ವಿಚಾರ ಹಾಗೂ ವ್ಯಾಪಾರದ ವಿಚಾರ ಇನ್ನಿತರ ಕ್ಷೇತ್ರಗಳಲ್ಲಿ ನಿಮ್ಮ ಸಾಧನೆ ಶ್ರೇಷ್ಠವಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *