ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಜೊತೆಗೆ ಮಾಡಿರುವ ವರ್ತನೆಗೆ ಮಹಿಳೆಯರು ಆತನನ್ನು ಬಂಧಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ದಿಹೆಚ್ ಮಂಜಪ್ಪ, ಈತನ ವಯಸ್ಸು 48. ದಾವಣಗೆರೆಯ ಹಳ್ಳಿಯೊಂದರಲ್ಲಿ ವಾಸ ಮಾಡುವ ವ್ಯಕ್ತಿ ಈತ ಆಗಿದ್ದು. ಅದೇ ಗ್ರಾಮದ ಮಹಿಳೆಯ ಮನೆಗೆ ಉಪ್ಪಿನಕಾಯಿ ಬೇಕು ಎಂದು ಕೇಳಿಕೊಂಡು ಹೋಗಿದ್ದಾನೆ.

ನಂತರ ಆಕೆಯ ಗಲ್ಲ ಕಚ್ಚಿ, ಅತ್ಯಾಚಾರ ಮಾಡುವ ಪ್ರಯತ್ನ ಮಾಡಿದ್ದಾನೆ. ಅಂದು ಮನೆಯಲ್ಲಿ ಬೇರೆ ಯಾರು ಇಲ್ಲ ಎಂದು ತಿಳಿದುಕೊಂಡು, ದುರುದ್ದೇಶದಿಂದಲೇ ಆಕೆಯ ಮನೆಗೆ ಹೋಗಿ ಇಂಥ ಕೆಲಸ ಮಾಡೋ ಪ್ರಯತ್ನ ಮಾಡಿದ್ದಾನೆ. ಈ ಘಟನೆ ನಡೆದು 15 ದಿನಗಳು ಕಳೆದು ಹೋಗಿದ್ದು, ಆ ವ್ಯಕ್ತಿ ಹೀಗೆ ಮಾಡಿದ್ದಕ್ಕೆ ಆ ಮಹಿಳೆ ಹಾಗೂ ಇನ್ನು ಕೆಲವು ಮಹಿಳೆಯರು ಪೊಲೀಸರ ಬಳಿ ದೂರು ನೀಡಿದ್ದಾರೆ.

ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಹಾಗೆಯೇ ಆ ವ್ಯಕ್ತಿ ಕೂಡ ಊರಿನಿಂದ ಪರಾರಿ ಆಗಿದ್ದಾನೆ. ತಮಗೆ ಇಷ್ಟು ತೊಂದರೆ ಆಗಿದ್ದರು ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಇನ್ನು ಕೆಲವು ಮಹಿಳೆಯರು ಪೊಲೀಸ್ ಸ್ಟೇಶನ್ ಹತ್ತಿರ ಹೋಗಿ, ಆತನ ಫೋಟೋ ಹಿಡಿದು ಅವನನ್ನು ಬಂಧಿಸಲೇಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.

ಪೊಲೀಸ್ ಸ್ಟೇಶನ್ ನಲ್ಲಿರುವ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಪ್ರತಿಭಟನೆಯ ಮೂಲಕ ಮನವಿ ಮಾಡಿಕೊಂಡಿದ್ದು, ಅವರು ಶೀಘ್ರದಲ್ಲೇ ಆ ವ್ಯಕ್ತಿಯನ್ನು ಹುಡುಕಿ ಬಂಧಿಸುವುದಾಗಿ ಭರವಸೆ ಕೊಟ್ಟ ನಂತರ ಸ್ಥಳದಿಂದ ಹೊರಹೋಗಿದ್ದಾರೆ.

By AS Naik

Leave a Reply

Your email address will not be published. Required fields are marked *