Cow worship in Hindu Culture: ಪುರಾತನ ಕಾಲದಿಂದಲೂ ಸಹ ಹಿಂದೂ ಧರ್ಮದಲ್ಲಿ ಹಸುವಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಗೋವನ್ನು ಗೋಮಾತೆಯಾಗಿ ಪೂಜಿಸಲಾಗುತ್ತದೆ ಗೋವನ್ನು ದಿನನಿತ್ಯ ಚಟುವಟಿಕೆಯಲ್ಲಿ ಮಾತೆಯಾಗಿ ಪೂಜಿಸುವ ಸಂಪ್ರದಾಯ ಇಂದಿಗೂ ಸಹ ಗೋವನ್ನು ಪೂಜಿಸಲಾಗುತ್ತದೆ, ಹಾಗೆಯೇ ಗೋವಿಗೆ ಆಹಾರವನ್ನು ನೀಡುವ ಮೂಲಕ ಅನೇಕ ಸಂಕಷ್ಟ ಸಂಕೋಲೆಗಳಿಂದ ದೂರ ಇರಬಹುದು ಗೋವಿನ ಹಾಲು ಸಗಣಿ ಹಾಗೂ ಗೋಮೂತ್ರವು ಹೆಚ್ಚಿನ ಉಪಯೋಗವನ್ನು ಹೊಂದಿದೆ.

ಹಾಲಿನಿಂದಾಗಿ ಅನೇಕ ಬಗೆಯ ಖಾದ್ಯವನ್ನು ತಯಾರಿಸುತ್ತಾರೆ ತುಂಬಾ ಜನರಿಗೆ ಜನಪ್ರಿಯ ಖಾದ್ಯವಾಗಿದೆ ಹಾಗೆಯೇ ಸಗಣಿ ಹಾಗೂ ಗೋಮೂತ್ರ ರೈತರಿಗೆ ಬೆನ್ನೆಲುಬಾಗಿ ಕೃಷಿ ಚಟುವಟಿಕೆಯಲ್ಲಿ ಬಳಸಲಾಗುತ್ತದೆ ಗೋಮೂತ್ರವೂ ಔಷಧೀಯ ಹಾಗೂ ಕ್ರಿಮಿನಾಶಕ ಗುಣವನ್ನು ಹೊಂದಿದೆ ಹಾಗೆಯೇ ಇಂದಿನ ದಿನಮಾನದಲ್ಲಿ ಸಹ ಕೃಷಿ ಚಟುವಟಿಕೆಯಲ್ಲಿ ಗೋಮೂತ್ರ ಹಾಗೂ ಸಗಣಿ ಗೊಬ್ಬರ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಹೆಚ್ಚಿನ ಜನರು ಗೋಮೂತ್ರ ಹಾಗೂ ಸಗಣಿ ಬಳಸಿ ಸಾವಯುವ ಕೃಷಿಯನ್ನು ಮಾಡುತ್ತಾರೆ ಗೋವುಗಳಿಗೆ ಪ್ರತಿದಿನ ಪೂಜೆ ಹಾಗೂ ಆಹಾರವನ್ನು ನೀಡುವುದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ದೀಪಾವಳಿಯ ಹಬ್ಬದಂದು ಗೋವುಗಳಿಗೆ ಸಹ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ ನಾವು ಈ ಲೇಖನದ ಮೂಲಕ ಗೋವುಗಳಿಗೆ ಆಹಾರ ನೀಡುವುದರಿಂದ ಆಗುವ ಅನುಕೂಲ ಹಾಗೂ ಸಾಲ ತಿರುವ ಬಗೆಯ ಬಗ್ಗೆ ತಿಳಿದುಕೊಳ್ಳೋಣ.

ಹಿಂದೂ ಸಂಸ್ಕೃತಿಯಲ್ಲಿ ಹಸುವಿಗೆ ಉನ್ನತವಾದ ಸ್ಥಾನ ಇರುತ್ತದೆ ಹಸುವಿನ ಒಳಗೆ ಹಲವಾರು ದೇವರು ಹಾಗೂ ದೇವತೆಗಳು ಇರುತ್ತದೆ ಹಸುವು ಹಾಲನ್ನು ನೀಡುವುದರಿಂದ ತಾಯಿಯಂತೆ ನೀಡಲಾಗುತ್ತದೆ ಈ ಕಾರಣಗಳಿಂದ ಹಸುವನ್ನು ಭಾರತದಲ್ಲಿ ಪೂಜಿಸಲಾಗುತ್ತದೆ ಹಿಂದೂ ಧರ್ಮದ ಪ್ರಕಾರ ಹಸುವಿಗೆ ಅಮಾವಾಸ್ಯೆಯಂದು ಆಹಾರ ನೀಡುತ್ತಾರೆ ಬೆಲ್ಲವನ್ನು ನೀಡುವ ಆಚರಣೆಯಲ್ಲಿದೆ ಹಾಗೆಯೇ ಹಸುವಿಗೆ ಬಾಳೆ ಹಣ್ಣನ್ನು ತಿನ್ನಿಸುವುದು ಒಂದು ರೂಢಿಯಾಗಿದೆ ಹಸುವಿಗೆ ನೀಡುವ ಆಹಾರವು ಜನ್ಮ ಜಾತಕವು ಗ್ರಹಗಳ ದುಷ್ಪರಿಣಾಮಗಳನ್ನು ಎದುರಿಸಲು ಸಾಧ್ಯ ಆಗುತ್ತದೆ ಸಾಮಾನ್ಯವಾಗಿ ಹಸಿ ಹುಲ್ಲು ಮತ್ತು ಸಿಹಿ ಹಿಟ್ಟನ್ನು ಆಕಳಿಗೆ ನೀಡಲಾಗುತ್ತದೆ ಹಾಗಾಗಿ ನಮ್ಮ ಜೀವನದಲ್ಲಿ ಸಕಾರಾತ್ಮಕ ಮನೋಭಾವ ಕಂಡು ಬರುತ್ತದೆ.

ಭೂಮಿ ತಾಯಿಯ ಸ್ವರೂಪವಾಗಿ ಕಾಣಲಾಗುತ್ತದೆ ಬೌದ್ಧ ಧರ್ಮದಲ್ಲಿ ಸಹ ಗೋವನ್ನು ಪವಿತ್ರವಾಗಿ ಕಾಣಲಾಗುತ್ತದೆ ಭಗವಂತ ಕೃಷ್ಣನಿಗೆ ಗೋಪಾಲ ಕೃಷ್ಣ ಹಾಗೂ ಬಾಲ ಕೃಷ್ಣ ಎಂದು ಕರೆಯಲಾಗುತ್ತದೆ ಇದರ ಅರ್ಥ ಗೋವುಗಳ ರಕ್ಷಕ ಎಂದು ಗೋವುಗಳನ್ನು ಪೂಜಿಸುವುದು 33 ಸಾವಿರ ಕೋಟಿ ದೇವರನ್ನು ಪೂಜಿಸುವುದಕ್ಕೆ ಸಮಾನವಾಗಿದೆ ಹಸುಗಳಿಗೆ ಆಹಾರ ನೀಡುವುದರಿಂದ ಅನುಕೂಲಗಳು ಆಗುತ್ತದೆ

ಹಸುಗಳಿಗೆ ಸಂಬಂಧಿಸಿದ ಅನೇಕ ಜೋತಿಷ್ಯ ಪರಿಹಾರ ಇರುತ್ತದೆ ಜಾತಕದಲ್ಲಿ ಸೂರ್ಯನು ಅನುಕೂಲನಾಗಿ ಇಲ್ಲದೆ ಇದ್ದರೆ ಗೋಧಿ ರೊಟ್ಟಿಯನ್ನು ಹಸುವಿಗೆ ನೀಡಬೇಕು ಹಾಗೆಯೇ ಜಾತಕದಲ್ಲಿ ಚಂದ್ರನು ಬಲಹಿನನಾಗಿ ಇದ್ದರೆ ಹಸುವನ್ನು ಸಾಕಬೇಕು ಅಥವಾ ಹಸುವಿಗೆ ಪ್ರತಿನಿತ್ಯ ನೀರನ್ನು ಕೊಡಬೇಕು ಇದರಿಂದ ಚಂದ್ರನ ದುಷ್ಪರಿಣಾಮವನ್ನು ಕಡಿಮೆ ಮಾಡಲಾಗುತ್ತದೆ ಮಂಗಳ ಗ್ರಹ ದುರ್ಬಲವಾಗಿ ಇದ್ದರೆ ಮಂಗಳವಾರದಂದು ಗೋವುಗಳಿಗೆ ಬೆಲ್ಲ ಹಾಗೂ ಬೆಳೆಯನ್ನು ಕೊಡಬೇಕು

ಬುಧ ಗ್ರಹ ದುರ್ಬಲವಾಗಿ ಇದ್ದರೆ ಬುಧವಾರದಂದು ಹಸುಗಳಿಗೆ ಹಸಿ ಹುಲ್ಲು ಅಥವಾ ಹಸಿರು ಎಲೆಯ ತರಕಾರಿಯನ್ನು ನೀಡಬೇಕು ಗುರು ಗ್ರಹದ ಪ್ರಭಾವವನ್ನು ಸುಧಾರಿಸಲು ಗುರುವಾರದಂದು ಬೆಲ್ಲ ಹಾಗೂ ನೆನೆಸಿದ ಕಾಳುಗಳನ್ನು ನೀಡಬೇಕು ಶುಕ್ರನನ್ನು ಬಲಿಷ್ಠಗೋಲಿಸಲು ಆಹಾರದ ಒಂದು ಭಾಗವನ್ನು ಪ್ರತಿದಿನ ನೋಡಬೇಕು ರಾಹು ಮಹಾದೆಸೆಯ ಅವಧಿಯಲ್ಲಿ ಇದ್ದಾಗ ಪ್ರತಿದಿನ ಸಂಜೆ ಕಪ್ಪು ಹಸು ಅಥವಾ ಕಪ್ಪು ಎಮ್ಮೆಗೆ ನೆನೆಸಿದ ಕಪ್ಪು ಬೆಳೆಯನ್ನು ನೀಡಬೇಕು.

ರಾಹುವಿನ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ ಜಾತಕದಲ್ಲಿ ಶನಿ ಪೀಡಿತವಾಗಿರುವಾಗ ಎಣ್ಣೆಯಿಂದ ಬೇಯಿಸಿದ ರೊಟ್ಟಿ ಹಾಗೂ ಹಸಿರು ಪಾಲಕ್ ಅನ್ನು ಗೋವುಗಳಿಗೆ ತಿನ್ನಿಸಬೇಕು ಹಾಗೆಯೇ ಜಾತಕದಲ್ಲಿ ಕೇತು ಅನುಕೂಲಕರನಾಗಿ ಇಲ್ಲದೆ ಇದ್ದರೆ ಗೋಧಿ ಹಿಟ್ಟಿನಲ್ಲಿ ಎಳ್ಳನ್ನು ಬೆರೆಸಿ ಹಸುವಿಗೆ ತಿನಿಸಬೇಕು ಇದು ಕೇತುವಿನ ದುಷ್ಪರಿಣಾಮವನ್ನು ಎದುರಿಸಲು ಸಹಾಯಕ ಆಗುತ್ತದೆ ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಆಗುತ್ತದೆ.

ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾಗ ಸ್ನಾನ ಮಾಡಿದಾಗ ಗೋ ಮಾತೆಯ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯಬೇಕು ಯಾವುದೇ ಕೆಲಸಕ್ಕೆ ಹೋಗುವಾಗ ಹಸಿವನ್ನು ನೋಡುವುದು ಮತ್ತು ಅದರ ಧ್ವನಿಯನ್ನು ಕೇಳುವುದು ಸಹ ಮಂಗಳಕರವಾಗಿ ಇರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ವಾಸ್ತು ದೋಷವನ್ನು ತೆಗೆದು ಹಾಕುವ ಶಕ್ತಿಯನ್ನು ಗೊ ಮಾತೇ ಹೊಂದಿದೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕಂಡು ಬರುತ್ತದೆ ಗೋವು ಜೀವನದಲ್ಲಿ ಸಂವೃದ್ದಿಯನ್ನು ತಂದುಕೊಡುತ್ತದೆ

ಜೀವನದಲ್ಲಿ ಸಂತೋಷವನ್ನು ತಂದುಕೊಡುತ್ತದೆ ಗೋವು ಮತ್ತು ಗೋವಿಗೆ ಸಂಭಂದಿಸಿದ ಎಲ್ಲ ವಸ್ತುಗಳು ಪವಿತ್ರವಾಗಿದೆ ಹಾಲು ಗೋಮೂತ್ರ ಸಗಣಿ ಎಲ್ಲವೂ ಅತ್ಯಂತ ಪವಿತ್ರವಾಗಿದೆ ಗೃಹ ಪ್ರವೇಶದಲ್ಲಿ ಮನೆಯಲ್ಲಿ ಸಂವೃದ್ದಿ ತುಂಬಲು ಹಸುವನ್ನು ಮನೆಯ ಒಳಗೆ ಕರೆದುಕೊಂಡು ಹೋಗುತ್ತಾರೆ ಗೋಮೂತ್ರದಿಂದ ಹಲವು ಖಾಯಿಲೆಗಳು ಶಮನಗೊಳ್ಳುತ್ತದೆ. ದಿನಚರಿಯಲ್ಲಿ ಗೋವಿಗೆ ಆಹಾರ ನೀಡುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಇದರಿಂದ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯ ಆಗುತ್ತದೆ ಬೆಳಿಗ್ಗೆ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸಿಬೇಕು ಇದು ತುಂಬಾ ಪುಣ್ಯಕರ ಕೆಲಸವಾಗಿದೆ

ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಗೋಮಾತೆಯ ಪೂಜೆಯನ್ನು ಮಾಡಬೇಕು ಹೀಗೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ ಮನೆಯಲ್ಲಿ ಹಣ ಮತ್ತು ಧಾನ್ಯದ ಕೊರತೆ ಕಂಡು ಬರುವುದು ಇಲ್ಲ ಗೋವನ್ನು ಪುಣಿಸುವರಿಗೆ ತಾಯಿ ಲಕ್ಷ್ಮೀ ಪ್ರಸನ್ನ ಆಗುತ್ತಾಳೆ ಹೆಚ್ಚಿನ ಸಂಪತ್ತನ್ನು ನೀಡುತ್ತಾಳೆ ಹಸುವಿನ ಬೆನ್ನನ್ನು ಮುದ್ದಿಸುದರಿಂದ ಅನೇಕ ರೋಗಗಳು ನಿವಾರಣೆ ಆಗುತ್ತದೆ ಆರೋಗ್ಯವನ್ನು ಬಲಪಡಿಸುತ್ತದೆ ಕೆಟ್ಟ ಕನಸನ್ನು ಹಾಗೂ ರಾಹು ಸಮಸ್ಯೆಯನ್ನು ಹೊಂದಿರುವರು ಗೋಮೂತ್ರವನ್ನು ಕುಡಿಯಬೇಕು ಹಸುವಿನ ಹತ್ರ ಹೋಗಿ ಸಮಯವನ್ನು ಕಲಿಯುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಹಾಗೂ ಕೋಪ ಕಡಿಮೆ ಆಗುತ್ತದೆ ಹೀಗೆ ಹಸು ಹಿಂದು ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದು ಗೋವುಗಳ ರಕ್ಷಣೆಯ ಜೊತೆಗೆ ಗೋವುಗಳಿಗೆ ಆಹಾರವನ್ನು ನೀಡುವ ಮೂಲಕ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *