ಬೋರ್ ವೆಲ್ ಪಾಯಿಂಟ್ ಮಾಡಲು ಜನಗಳು ಮೊದಲಿಗೆ ತೆಂಗಿನಕಾಯಿ, ಕಬ್ಬಿಣದ ರಾಡ್, ಕೀಲಿ ಕೈ, ಹಗ್ಗ ಉಪಯೋಗ ಮಾಡುತ್ತಿದ್ದರು. ಆದರೆ ಈಗ, ನಿಮ್ಮ ಮೊಬೈಲ್ ಮೂಲಕವೇ ಬೋರ್ವೆಲ್ ಪಾಯಿಂಟ್ ಹುಡುಕಬಹುದು, 100% ನೀರು ಬರುವುದಾ ಇಲ್ಲವಾ ಅನ್ನೋದು ತಿಳಿಯುವುದು ಗ್ಯಾರಂಟಿ. 

ಪ್ರಪಂಚದಲ್ಲಿ ಟೆಕ್ನಾಲಜಿ ( technology ) ಯಾವ ರೀತಿ ಮುಂದುವರಿದಿದೆ ಎಂದರೆ. ಇದೇ ಹತ್ತು ವರ್ಷಗಳ ಹಿಂದೆ ಈ ವಿಧವಾದ ಒಂದು ಪರಿವರ್ತನೆ ಸಂಭವಿಸುತ್ತದೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಆದರೆ, ಇಂದು ಟೆಕ್ನಾಲಜಿ ( technology ) ಮುಖಾಂತರ ಆಗದೆ ಇರುವ ಕೆಲಸವೇ ಇಲ್ಲ. ಅಡಿಗೆ ಮನೆಯಿಂದ ಹಿಡಿದು ಆಕಾಶದ ಎತ್ತರಕ್ಕೆ ಹಾರಿ ನಾಭವನ್ನು ದಾಟುವ ಉಪಗ್ರಹದ ತನಕ ಎಲ್ಲ ಕಡೆ ಟೆಕ್ನಾಲಜಿ ( technology ) ಬಳಕೆ ಆಗುತ್ತಿದೆ.

ಪ್ರತಿ ನಿತ್ಯದ ಎಲ್ಲಾ ಚಟುವಟಿಕೆಗಳಿಗೂ ಈ ಟೆಕ್ನಾಲಜಿ ( technology ) ಬಳಕೆಗೆ ಬದಲಾಗುತ್ತಿರುವ ಕಾರಣ ಬದುಕು ಬಹಳ ಸರಳ ಎನಿಸುತ್ತಿದೆ. ಅದರೊಂದಿಗೆ, ಕೆಲವು ವಿಚಾರಗಳಲ್ಲಿ ಟೆಕ್ನಾಲಜಿ ( technology) ಸಹಾಯದಿಂದ ದುಡ್ಡು ಸಹ ಉಳಿತಾಯ ಆಗುತ್ತದೆ.

ಇಷ್ಟೆಲ್ಲಾ ಉಪಯೋಗ ಆಗುತ್ತಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಸಹ ಮುಂದುವರಿಯಬೇಕು ಎನ್ನುವುದು ತಂತ್ರಜ್ಞರ ಆಶಯ. ಯಾವುದು ಎಷ್ಟರ ಮಟ್ಟಿಗೆ ಮುಂದುವರೆದರೂ ಸಹ ರೈತ ಮತ್ತು ಕೃಷಿ ಇಲ್ಲದೆ ಹೋದರೆ ಕ್ಷಣಮಾತ್ರದಲ್ಲಿ ಎಲ್ಲಾ ಶೂನ್ಯ ಎನಿಸುತ್ತದೆ.

ಅದರಿಂದ, ರೈತ ಮಾಡುವ ಕೃಷಿ ಕೆಲಸಕ್ಕೂ ಸಹ ಟೆಕ್ನಾಲಜಿ ( technology ) ಅಡವಳಿಕೆ ತಂದರೆ ರೈತನ ಕಷ್ಟವನ್ನು ಕಡಿಮೆ ಆಗುತ್ತದೆ ಹಾಗು ರೈತನಿಗೆ ಆಗುವ ನಷ್ಟವನ್ನು ಕೂಡ ತಪ್ಪಿಸಬೇಕು ಎಂದು ಹಲವಾರು ರೀತಿಯ ಹೊಸ ಪ್ರಯತ್ನಗಳು ನಡೆಯುತ್ತಿದೆ.

ಕೃಷಿ ಉಪಕರಣಗಳ ಬಳಕೆಯ ವಿಚಾರದಲ್ಲಿ ಇಂಧನ ಚಾಲಿತ ವಾಹನಗಳ ಉಪಯೋಗಕ್ಕೆ ಬಂದಿದ್ದು ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಇದರೊಂದಿಗೆ ಪ್ರತಿ ಒಂದು ವಿಚಾರದಲ್ಲಿ ಸಹ ರೈತ ಸ್ನೇಹಿಯಾಗಿ ಟೆಕ್ನಾಲಜಿ ( technology ) ಬಳಕೆ ಆಗಬೇಕು ಎನ್ನುವುದೇ ಎಲ್ಲರ ಬಯಕೆ.

ಸತತ ಪ್ರಯತ್ನಗಳು ಮುಗಿದ ಮೇಲೆ ಮತ್ತೊಂದು ನೂತನ ಆವಿಷ್ಕಾರವನ್ನು ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಂಡುಹಿಡಿಯಲಾಗಿದೆ. ದೇಶದಲ್ಲಿ ಮಳೆಯನ್ನು ನಂಬಿಕೊಂಡು ಕೃಷಿ ಮಾಡುವವರು ವಿರಳ.

ಬಾವಿ ಮತ್ತು ಕೊಳವೆ ಬಾವಿಗಳ ನೀರು ಬಳಕೆ ಮಾಡಿ ತೋಟಗಾರಿಕೆ ಮಾಡಿ ತಮ್ಮ ಆದಾಯ ಹೆಚ್ಚು ಮಾಡಿಕೊಳ್ಳುವುದರೊಂದಿಗೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು ಎನ್ನುವುದು ರೈತರ ಇಚ್ಛೆ.

ಆದರೆ, ಕೊಳವೆ ಬಾವಿಗಳ ವಿಪರೀತ ಸಂಖ್ಯೆ ಏರಿಕೆ ಆಗಿರುವ ಕಾರಣ ಎಲ್ಲ ಜಮೀನಿನಲ್ಲಿ ನೀರಿನ ಸೆಲೆ ಸಿಗುತ್ತಿಲ್ಲ. ಆದರೆ, ಮತ್ತೆ ಮತ್ತೆ ರೈತರು ಅದರ, ಮೇಲೆ ದುಡ್ಡು ಹೂಡಿಕೆ ಮಾಡಿ ನಷ್ಟ ಹೊಂದುತ್ತಿದ್ದಾರೆ ಮತ್ತು ಸಾಲದ ಹೊರೆಯಲ್ಲಿ ಮುಳುಗುತ್ತಿದ್ದಾರೆ.

ಅವರಿಗೆ ಎಲ್ಲಾ ಅನುಕೂಲ ಮಾಡಿಕೊಡಲು ನೂತನ ತಂತ್ರಜ್ಞಾನದ ಮುಖಾಂತರ ನೂತನ ಆವಿಷ್ಕಾರವನ್ನು ಮಾಡಲಾಗಿದೆ. ಈ ವಿಧಾನವನ್ನು ಅನುಕರಣೆ ಮಾಡುವುದರಿಂದ ರೈತರ ಜಮೀನಿನಲ್ಲಿ ನೀರು ಇದ್ದರೆ ಖಂಡಿತವಾಗಿ ಇದರ ಮುಖಾಂತರ ತಿಳಿಯುತ್ತದೆ. ಒಂದು ವೇಳೆ ನೀರು ಇಲ್ಲದೆ ಇದ್ದರೂ. ಅದು, ಸಹ ತಿಳಿಯುತ್ತದೆ. ಇದರಿಂದ, ಅನವಶ್ಯಕವಾಗಿ ಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಬಹುದು. ದೇಹದಲ್ಲಿ ಬಿಪಿ ಶುಗರ್ ಟೆಸ್ಟ್ ಮಾಡುವುದರಿಂದ ಹಿಡಿದು ಯೋಗ ಮಾಡುವುದನ್ನು ಕಲಿಸುವುದಕ್ಕೂ, ಮಳೆ ಬಿಸಿಲಿನ ಸೂಚನೆ ಕೊಡುವುದಕ್ಕೂ ಮೊಬೈಲ್ ಆಪ್’ಗಳು ಬಳಕೆ ಆಗುತ್ತಿದೆ.

ಇದೆ ರೀತಿ ಒಂದು ಆಪ್’ನ ಮುಖಾಂತರ ರೈತರು ಜಮೀನಿನಲ್ಲಿ ಕೊಳವೆ ಬಾವಿ ಹಾಕಿಸಿದರೆ ಸಾಕು ನೀರು ಬರುತ್ತದೆಯಾ ಎಂದು ತಿಳಿದುಕೊಳ್ಳಬಹುದು. ಈ ಒಂದು ಆಪ್ ಹೆಸರು ವಾಟರ್ ಡಿಟೆಕ್ಟರ್ ಆಪ್ (water detector app). ಮೊದಲಿಗೆ ಈ ಆಪ್ ಡೌನ್ಲೋಡ್ ಮಾಡಿಕೊಂಡು ರೈತರು ಅವರ ಜಮೀನಿನಲ್ಲಿ ನೀರು ಇದೆಯೋ ಇಲ್ಲವೋ ಎನ್ನುವ ಪರೀಕ್ಷೆ ಮಾಡಿ ನಂತರ ಬೇರೆ ಕೆಲಸಗಳನ್ನು ಮುಂದುವರೆಸಬಹುದು.

Leave a Reply

Your email address will not be published. Required fields are marked *