ಕಮಲ ಪಕ್ಷಕ್ಕೆ ಸೇರಿದ ಚಲುವಿನ ಚಿತ್ತಾರದ ಬೆಡಗಿ

0 1

ಬಿಜೆಪಿ ಪಕ್ಷಕ್ಕೆ ಸೇರಿದ ನಟಿ ಅಮೂಲ್ಯ ಚೆಲುವಿನ ಚಿತ್ತಾರ ಮೂಡಿಸುತ್ತಾರ ಇದರ ಕುರಿತಾಗಿ ಮಾಹಿತಿ ಈ ಲೇಖನದಲ್ಲಿ ಇದೆ ನೋಡಿ.

ಚಿತ್ರರಂಗದ ಅಮೂಲ್ ಬೇಬಿ ಅಮೂಲ್ಯ ಅವರು ಸಧ್ಯ ನಟನೆಯ ಕಡೆಗೆ ಅಷ್ಟೊಂದು ಗಮನ ನೀಡದೆ ರಾಜಕೀಯಕ್ಕೆ ಧುಮುಕಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮೂಲ್ಯ ನಂತರ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ನಂತರದ ದಿನಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿರುತ್ತಾರೆ. ತಮ್ಮ ಮುದ್ದು ಮುಖ ಹಾಗೂ ಮುದ್ದಾದ ಮಾತುಗಳಿಂದ ಎಷ್ಟೋ ಕನ್ನಡ ಅಭಿಮಾನಿಗಳನ್ನು ಸಹ ಇವರು ಹೊಂದಿದ್ದಾರೆ. ಈಗ ಎರಡು ವರ್ಷಗಳ ಹಿಂದೆ ಅಷ್ಟೇ ಅಮೂಲ್ಯ ಅವರು ಜಗದೀಶ್ ಎಂಬವರ ಜೊತೆ ವಿವಾಹ ಆಗಿದ್ದಾರೆ. ಜಗದೀಶ್ ಅವರ ತಂದೆ ಒಬ್ಬ ರಾಜಕಾರಣಿ ಆಗಿದ್ದು ಮದುವೆಯ ನಂತರ ಅಮೂಲ್ಯ ಅವರು ಅಷ್ಟಾಗಿ ಯಾವುದೇ ಸಿನಿಮಾಗಳಲ್ಲಿ ಕೂಡಾ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಅಮೂಲ್ಯ ಕೂಡಾ ರಾಜಕೀಯಕ್ಕೆ ಧುಮುಕಿದ್ದಾರೆ.

ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಆರಂಭ ಆಗಲಿದ್ದು ಸಾಕಷ್ಟು ಕಳೆಗಟ್ಟುತ್ತಿದೆ. ಇದರ ಬೆನ್ನಲ್ಲೇ ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಅವರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಶೇಷ ಅಂದ್ರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಜೆಡಿಎಸ್‌ ಪರಾಜಿತ ಅಭ್ಯರ್ಥಿಯಾಗಿದ್ದ ಅಮೂಲ್ಯ ಅವರ ಮಾವ ಜಿ.ಹೆಚ್.ರಾಮಚಂದ್ರ, ಅಮೂಲ್ಯ ಪತಿ ಜಗದೀಶ್ ಇವರಿಬ್ಬರೂ  ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಜಿ.ಹೆಚ್ ರಾಮಚಂದ್ರ ಮತ್ತು ಅವರ ಸೊಸೆ ಅಮೂಲ್ಯ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ಉಪಸ್ಥಿತರಿದ್ದರು.

Leave A Reply

Your email address will not be published.