Gruhalakshmi Scheme Bank Update ಈಗಾಗಲೇ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಬಿಡುಗಡೆಯ ದಿನಾಂಕವು ಅನೇಕ ಕಾರಣಗಳಿಂದ ಮುಂದೆ ಹಾಕುತ್ತಾ ಬಂದಿದ್ದಾರೆ ಇದೀಗ ಸರ್ಕಾರವು ಅಗಸ್ಟ್ 30ನೇ ತಾರೀಕಿನಂದು ಈ ಯೋಜನೆಯ ಬಿಡುಗಡೆ ಮಾಡಲು ನಿರ್ಧರಿಸಿದ್ದು ಪ್ರತಿಯೊಬ್ಬ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2,000 ಜಮಾ ಆಗಲಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಮಹಿಳೆಯರು ಗಮನದಲ್ಲಿಡಬೇಕಾದ ಕೆಲವು ಅಂಶಗಳು ಏನೆಂದರೆ, ಮುಖ್ಯವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೂ ಕೆ ವೈ ಸಿ ಮಾಡಿಸಿರಬೇಕು ಆರ್‌.ಬಿ.ಐ ಗ್ರಾಹಕರ ರಕ್ಷಣೆಗಾಗಿ ಕೆ ವೈ ಸಿ ಅನ್ನ ಕಡ್ಡಾಯಗೊಳಿಸಿದ್ದು ಮಹಿಳೆಯರು ತಮ್ಮ ಖಾತೆಗೆ ಕೆವೈಸಿ ಮಾಡಿಸದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂ ಹಣ ಜಮಾ ಆಗುವುದಿಲ್ಲ. ಹಾಗಾದರೆ ಕೆ ವೈ ಸಿ ಮನೆಯಲ್ಲೇ ಕೂತು ಮೊಬೈಲ್ ಮೂಲಕವೇ ಮಾಡಿಸಬಹುದು ಅದು ಹೇಗೆ ಎಂಬುದನ್ನು ಈ ಕೆಳಗಿನವು ತಿಳಿದುಕೊಳ್ಳೋಣ.

ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಆನ್ಲೈನ್ ಬ್ಯಾಂಕಿಂಗ್ ಪೋರ್ಟಲ್ ಗೆ ಲಾಗಿನ್ ಮಾಡಬೇಕು ನಂತರ ಕೆ ವೈ ಸಿ ಟ್ಯಾಬನ್ನು ಪತ್ತೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಬೇಕು ಇದಾದ ನಂತರ ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ತುಂಬಬೇಕು ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ಇತರ ಗುರುತಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದಾದ ನಂತರ ನೀವು ಅಪ್ಲೋಡ್ ಮಾಡಿದ ಮೇಲೆ ವಿನಂತಿ ಸ್ವೀಕೃತಿ ನಂಬರನ್ನು ಪಡೆಯುತ್ತೀರಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಗೆ SMS ಬರುತ್ತದೆ.

Gruhalakshmi Scheme Bank Update

ಇನ್ನು ಕೆಲವೊಂದು ಸಂದರ್ಭಗಳಲ್ಲಿ ಮೊಬೈಲ್ ಮೂಲಕ ಕೆ ವೈ ಸಿ ಅಪ್ಲಿಕೇಶನ್ ಹಾಕುವುದು ವಿಫಲವಾಗಬಹುದು ಆಗ ಬ್ಯಾಂಕಿಗೆ ಹೋಗಿ ಕೆ ವೈ ಸಿ ಮಾಡಿಸುವುದು ಅನಿವಾರ್ಯವಾಗುತ್ತದೆ ಒಂದು ವೇಳೆ ನಿಮ್ಮ ಕೆವೈಸಿ ಮಾಡಿಸುವ ಅವಧಿ ಮುಗಿದಿದ್ದು ಅಥವಾ ನಿಮ್ಮ ದಾಖಲೆಗಳಲ್ಲಿ ತೊಂದರೆ ಇದ್ದರೆ ನೀವು ಬ್ಯಾಂಕಿಗೆ ಹೋಗಬೇಕಾದಂತಹ ಸಂದರ್ಭ ಬರುತ್ತದೆ.

ಕೆ ವೈ ಸಿ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದು ಇದು ಪ್ರತಿಯೊಬ್ಬ ಗ್ರಾಹಕರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತದೆ ಈ ಸಂಗ್ರಹಿಸಿದ ಮಾಹಿತಿಯು ಗ್ರಾಹಕರ ಗುರು ತನ್ನ ದೃಢೀಕರಿಸುವುದರ ಜೊತೆಗೆ ಅವರ ಅಪಾಯದ ಮಟ್ಟವನ್ನ ನಿಯಂತ್ರಿಸುವ ಕಾರ್ಯವನ್ನು ಮಾಡುತ್ತದೆ. ಕೆ ವೈ ಸಿ ಮಾಡಿಸುವುದರಿಂದ ಬ್ಯಾಂಕುಗಳ ಪ್ರಕ್ರಿಯೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಪ್ರಾರಂಭದಲ್ಲಿ ಕೆ ವೈ ಸಿ ಅನ್ನ ಕಡ್ಡಾಯ ಮಾಡಲಾಗಿದೆ.

ಅದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಒಂದು ವೇಳೆ ತಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸದೆ ಇದ್ದಲ್ಲಿ ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ ನಂತರ ನಿಮ್ಮ ಖಾತೆಗೆ 2000 ಹಣ ಜಮಾ ಆಗುತ್ತದೆ. ಇದನ್ನೂ ಓದಿ ಇಂತವರ ರೇಷನ್ ಕಾರ್ಡ್ ರದ್ದಾಗಲಿದೆ, ಅನ್ನಭಾಗ್ಯದ ಅಕ್ಕಿಯೂ ಇಲ್ಲ ಗೃಹಲಕ್ಷಿಯ ದುಡು ಇಲ್ಲ ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!