ಹೀರೊ ಮೋಟೋಕಾರ್ಪ್ ಬೈಕ್ ಕಂಪನಿಯಿಂದ ದೀಪಾವಳಿಯ ಬಂಪರ್ ಕೊಡುಗೆ ಬರಿ 7 ಸಾವಿರ ಕಟ್ಟಿ ಬೈಕ್ ಪಡೆಯುವ ಅವಕಾಶ

0 3

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸ್ಕೂಟರ್ ಅಥವಾ ಮೋಟಾರುಸೈಕಲ್ ಇರುತ್ತದೆ. ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ತಯಾರಿಸುವ ವಿಶ್ವದ ಅತಿದೊಡ್ಡ ಕಂಪನಿಯಾದ ಹೀರೊ ಮೋಟೊಕಾರ್ಪ್ ಕಂಪನಿಯು ತನ್ನ ಗ್ರಾಹಕರಿಗೆ ಕೆಲವು ಆಫರ್ ಗಳನ್ನು ನೀಡುತ್ತಿದೆ. ಕಂಪನಿಯ ಆಫರ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಮತ್ತು ಸ್ಕೂಟರ್ ತಯಾರಿಕಾ ಸಂಸ್ಥೆಯಾದ ಹೀರೊ ಮೋಟೋಕಾರ್ಪ್ ಕಂಪನಿ ತನ್ನ ಗ್ರಾಹಕರಿಗಾಗಿ ಹೊಸ ರಿಟೇಲ್ ಹಣಕಾಸು ಎಂಬ ಹೊಸ ಸ್ಕೀಮ್ ಘೋಷಿಸಿದೆ. ಹಬ್ಬದ ಸಂಭ್ರಮ ಹೆಚ್ಚಿಸಲು ಹಲವು ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಿಂದ(ಎನ್‍ಬಿಎಫ್‍ಸಿ) ಹಣಕಾಸು ನೆರವನ್ನು ಗ್ರಾಹಕರಿಗೆ ಸಿಗುವಂತೆ ಮಾಡಿದೆ. ಪ್ರವೇಶಾವಕಾಶ ಇರುವಂತಹ ಹಣಕಾಸು ಆಯ್ಕೆಗಳು ಮತ್ತು ವೈಯಕ್ತೀಕೃತ ಯೋಜನೆಗಳ ಮೂಲಕ ಅದು ಗ್ರಾಹಕರು ಸುಲಭವಾಗಿ ಖರೀದಿಸುವಂತೆ ಮಾಡಿದೆ. 

ಅಡಮಾನರಹಿತ(ನೋ ಹೈಪಾತಿಕೇಶನ್) ಇಎಮ್‍ಐ ವೆಚ್ಚವಿಲ್ಲದ ಮತ್ತು ನಗದು ಇಎಮ್‍ಐ(ಬ್ಯಾಂಕ್ ಖಾತೆ ಇಲ್ಲದ ಸಾಲ) ಮುಂತಾದ ವಿನೂತನ ಹಣಕಾಸು ಉತ್ಪನ್ನಗಳ ಮೂಲಕ ಸಂಸ್ಥೆಯು ಗ್ರಾಹಕರು ತಮ್ಮ ನೆಚ್ಚಿನ ಹೀರೊ ಮೋಟೋಕಾರ್ಪ್ ಉತ್ಪನ್ನವನ್ನು ಮನೆಗೆ ತರಲು ಬೆಂಬಲ ನೀಡುತ್ತಿದೆ. ಹೀರೊ ಫಿನ್‍ಕಾಪರ್ನ್ ಜೊತೆಗೆ ಅದು ಕಿಸಾನ್ ಇಎಮ್‍ಐ ಹಾಗೂ ಬಲೂನ್ ಇಎಮ್‍ಐನಂತಹ ಉದ್ಯಮದಲ್ಲಿ ಮೊಟ್ಟಮೊದಲನೆಯದಾಗಿ ಈ ಯೋಜನೆಗಳನ್ನು ಪರಿಚಯಿಸುತ್ತಿದೆ.

ಈ ಯೋಜನೆಗಳು ಕೃಷಿ ಆದಾಯ ಆಧಾರಿತ ಗ್ರಾಹಕರಲ್ಲದೆ ತಿಂಗಳ ಆದಾಯವಿರುವ ಗ್ರಾಹಕರಿಗೂ ಸಹ ಅವರ ಅಗತ್ಯಗಳಿಗೆ ತಕ್ಕ ಪರಿಹಾರವನ್ನು ಒದಗಿಸುತ್ತದೆ. ಈ ಅಗತ್ಯಕ್ಕೆ ತಕ್ಕ ವಿನೂತನ ಹಣಕಾಸು ಕೊಡುಗೆಗಳೊಂದಿಗೆ ಹೀರೊ ಮೋಟೋಕಾರ್ಪ್ ದೇಶದಾದ್ಯಂತ ಇರುವ ತನ್ನ ಗ್ರಾಹಕರು ಅದರ ವಿಶ್ವದರ್ಜೆ ಉತ್ಪನ್ನಗಳಿಗೆ ಪ್ರವೇಶ ಪಡೆಯಲು ಅವಕಾಶ ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ. ಈ ರೀತಿಯ ಪ್ರಕ್ರಿಯೆಯಲ್ಲಿ ಅವರ ಜೀವನದ ಗುಣಮಟ್ಟವನ್ನು ಉನ್ನತಗೊಳಿಸುತ್ತದೆ.

ಹೀರೊ ಮೋಟೋಕಾರ್ಪ್ ಆಧಾರಿತ ಹಣಕಾಸು ನೆರವು 6,999 ರೂಪಾಯಿಯಿಂದ ಆರಂಭವಾಗುತ್ತದೆ. ಕಡಿಮೆ ಡೌನ್‍ಪೇಮೆಂಟ್ 5.55% ಬಡ್ಡಿದರ, 48 ತಿಂಗಳುಗಳವರೆಗಿನ ದೀರ್ಘಾವಧಿ ಸಾಲಾವಧಿಗಳು ಮುಂತಾದ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರು ಎಸ್‍ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸುವ ಮೂಲಕ ತಕ್ಷಣ ಹಣಕಾಸು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. 

ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡುವ ಮೂಲಕ ಹೀರೊ ಮೋಟೋಕಾರ್ಪ್ ಹೆಚ್‍ಡಿಎಫ್‍ಸಿ ಬ್ಯಾಂಕ್, ಇಂಡಸ್‍ಇಂಡ್ ಬ್ಯಾಂಕ್,  ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್, ಹೆಚ್‍ಡಿಬಿ ಫೈನಾನ್ಶಿಯಲ್ ಸರ್ವಿಸಸ್, ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಮತ್ತು ವ್ಹೀಲ್ಸ್ ಇಎಮ್‍ಐ ಒಳಗೊಂಡಂತೆ ಹಣಕಾಸು ನೆರವಿಗೆ ಅನೇಕ ಬ್ಯಾಂಕ್ ಗಳು ಹಾಗೂ ಎನ್‍ಬಿಎಫ್‍ಸಿಗಳೊಂದಿಗೆ ಸಹಯೋಗ ಏರ್ಪಡಿಸಿಕೊಂಡಿದೆ. ಹೀಗಾಗಿ ಈ ಕಂಪನಿಯ ಆಫರ್ ಅನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.