ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಎಲ್ಲಾ ರಾಶಿ ಜನರ ಆಗಸ್ಟ್ 12 ರಿಂದ ಆಗಸ್ಟ್ 18 ರ ತನಕದ ವಾರದ ಭವಿಷ್ಯವನ್ನು ತಿಳಿಯೋಣ ಬನ್ನಿ :-

ಮೇಷ ರಾಶಿ :-ಚಂದ್ರನ ಚಿಹ್ನೆಗೆ ಸಂಬಂಧಪಟ್ಟಂತೆ ಕೇತು ಗ್ರಹವನ್ನು 6 ನೇ ಮನೆಯಲ್ಲಿ ಇರಿಸಿರುವ ಕಾರಣ ರಕ್ತದ ಒತ್ತಡ, ಮಧುಮೇಹ ಅಥವಾ ಸ್ತೂಲಕಾಯ ಇರುವ ರೋಗಿಗಳು ಅವರ ಕುರಿತು ವಿಶೇಷ ಕಾಳಜಿ ವಹಿಸುವುದು ಉತ್ತಮ. ರೋಗಕ್ಕೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಔಷಧಿಗಳ ಸೇವನೆ ಮಾಡಬೇಕು. ಹತ್ತಿರ ಇರುವ ಜನ ಸಾಲವನ್ನು ಕೇಳುವ ಸಾಧ್ಯತೆ ಇದೆ ಅವರಿಂದ, ದೂರ ಉಳಿಯುವುದು ಉತ್ತಮ. ಇಲ್ಲದೆ ಹೋದರೆ ಕೊಟ್ಟ ಹಣ ಮರಳಿ ಸಿಗುವುದಿಲ್ಲ. ಮನಸನ್ನು ಸಕಾರಾತ್ಮಕವಾಗಿ ಇಡಬೇಕು.
ಪರಿಹಾರ :ಪ್ರತಿದಿನ 41 ಬಾರಿ ” ಓಂ ರಾಹುವೆ ನಮಃ. ” ಎಂದು ಜಪ ಮಾಡಬೇಕು.

ವೃಷಭ ರಾಶಿ :-ಕ್ರೀಡೆಯಲ್ಲಿ ಭಾಗವಹಿಸುವುದು ಈ ವಾರ ಹೆಚ್ಚು ಅಗತ್ಯ ಇರುತ್ತದೆ. ಏಕೆಂದರೆ, ಉತ್ತಮ ಆರೋಗ್ಯ ಒಂದು ಯಶಸ್ವಿ ಜೀವನದ ಗುಟ್ಟು ಎಂದು ಎಲ್ಲರಿಗೂ ತಿಳಿದಿರುತ್ತದೆ. ಈ ವಾರ ಈ ರಾಶಿಯ ವ್ಯಕ್ತಿಗಳು ಬೇರೆಯವರಿಗೆ ಸಾಲ ನೀಡುವುದು ಮತ್ತು ಪಡೆಯುವುದು ಎರಡು ಒಳ್ಳೆಯ ಫಲ ಕೊಡುವುದಿಲ್ಲ. ಈ ರಾಶಿಯ ಜನರು ಹಣವನ್ನು ಅವರೇ ಸಂಪಾದನೆ ಮಾಡಿಕೊಳ್ಳುವ ಸಾಧ್ಯತೆ ಇದೆ ಈ ವಾರದಲ್ಲಿ ಕುಟುಂಬದ ಕುರಿತಾಗಿ ಯಾವುದೇ ನಿರ್ಧಾರ ಮಾಡುವುದೇ ಆದರೂ ಎಲ್ಲರ ಜೊತೆ ಚರ್ಚೆ ಮಾಡಿ ಮುಂದುವರೆದರೆ ಒಳ್ಳೆಯದು.
ಪರಿಹಾರ :ಪ್ರತಿದಿನ 24 ಬಾರಿ ” ಓಂ ಭಾರ್ಗವಾಯ ನಮಃ. ” ಎಂದು ಜಪ ಮಾಡಬೇಕು.

ಮಿಥುನ ರಾಶಿ :-ಈ ವಾರ ಈ ರಾಶಿಯ ಜನರಿಗೆ ಉತ್ತಮ ಮನಸ್ಥಿತಿ ಇರುತ್ತದೆ ಅದರಿಂದ, ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದವರ ಆರೋಗ್ಯದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲೂ ಕೂಡ ಈ ವಾರ ಉತ್ತಮವಾಗಿರುತ್ತದೆ. ಆದರೆ ಹೂಡಿಕೆ ಮಾಡುವುದನ್ನು ಮಿಥುನ ರಾಶಿಯವರು ಈ ವಾರ ತಪ್ಪಿಸಿದರೆ ಉತ್ತಮ. ಈ ವಾರ ಬೇರೆಯವರಿಂದ ಕುಟುಂಬದಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾಗಬಹುದು. ಈ ಕಾರಣದಿಂದ ರಕ್ತದ ಒತ್ತಡ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಪರಿಹಾರ :ಪ್ರತಿ ದಿನ 41 ಬಾರಿ ” ಓಂ ನಮೋ ನಾರಾಯಣಾಯ. ” ಎಂದು ಜಪ ಮಾಡ್ಬೇಕು.

ಕಟಕ ರಾಶಿ :-ಈ ರಾಶಿಯ ಜನರು ಈ ವಾರ ಸಂಬಂಧಿಕರು ಅಥವಾ ಸ್ನೇಹಿತರ ಜೊತೆ ಅಲ್ಪ ಪ್ರಯಾಣ ಮಾಡಲು ಹೋಗುವ ಸಾಧ್ಯತೆ ಇದೆ. ಆದರೆ, ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣ ಮಾಡುವುದು ಒಳ್ಳೆಯದಲ್ಲ. ಹಣ ಅಥವಾ ವಾಲೆಟ್ ಕಳೆದುಹೋಗುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸದೆ ಇದ್ದಲ್ಲಿ ನಷ್ಟ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೂತನ ಮನೆ ಖರೀದಿ ಮಾಡುವ ಇಚ್ಛೆ ಇರುವವರು ಕುಟುಂಬದ ಸದಸ್ಯರ ಜೊತೆ ಚರ್ಚೆ ನಡೆಸಿ ಮುಂದುವರೆಯಬಹುದು. ಇತರರಿಗೆ ಉತ್ತಮ ಉದಾಹರಣೆಯಾಗಿ ನಿಂತು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವ ಸಾಧ್ಯತೆ ಕರ್ಕಾಟಕ ರಾಶಿಯ ಜನರಿಗೆ ಈ ವಾರ ಇದೆ.
ಪರಿಹಾರ :ಪ್ರತಿದಿನ 11 ಬಾರಿ ” ಓಂ ಚಂದ್ರಾಯ ನಮಃ ” ಎಂದು ಜಪ ಮಾಡಬೇಕು.

ಸಿಂಹ ರಾಶಿ :-ಈ ವಾರ ಸಿಂಹ ರಾಶಿಯ ಜನರು ಸಂಪೂರ್ಣವಾಗಿ ಚುರುಕುತನದಿಂದ ಕೂಡಿರುತ್ತಾರೆ. ಆದರೆ, ಈ ರಾಶಿಯ ಜನರು ಅವರ ಆಹಾರ ಪದ್ಧತಿಯ ಕುರಿತಾಗಿ ಗಮನ ಕೊಡಬೇಕು. ಹಣ್ಣುಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹೆಚ್ಚು ಉತ್ತಮ. ಹಣಕ್ಕೆ ಕುರಿತಾಗಿ ಬರುವ ಯಾವುದೇ ಅಪಾಯವನ್ನು ಈ ವಾರ ಸಿಂಹ ರಾಶಿಯ ಜನರು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಒಳ್ಳೆಯದು. ಬೇರೆ ವಿವಿಧ ಮೂಲಗಳಿಂದ ಹಣದ ಒಳಹರಿವು ಹೆಚ್ಚಾಗುವ ಸಾಧ್ಯತೆ ಈ ವಾರ ಸಿಂಹ ರಾಶಿಯ ಜನರಿಗೆ ಇರುತ್ತದೆ. ಕೆಲಸದ ಸ್ಥಳ ಮತ್ತು ವೈಯಕ್ತಿಕ ಜೀವನವನ್ನು ದೂರ ಇಡಲು ಈ ವಾರ ಉತ್ತಮವಾಗಿ ಇರುತ್ತದೆ.
ಪರಿಹಾರ :ಪ್ರತಿ ದಿನ 19 ಬಾರಿ ” ಓಂ ಭಾಸ್ಕರಾಯ ನಮಃ. ” ಎಂದು ಜಪ ಮಾಡಬೇಕು.

ಕನ್ಯಾ ರಾಶಿ :- ಈ ರಾಶಿಯ ಜನರು ಈ ವಾರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಇವರು ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡದಿಂದ ದೂರ ಉಳಿಯಲು ತಾಜಾ ಹಣ್ಣುಗಳನ್ನು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹಣದ ಕುರಿತಾಗಿ ಜಾಗೃತಿ ವಹಿಸುವುದು ಉತ್ತಮ. ಈ ರಾಶಿಯ ಜನರ ಮಕ್ಕಳು ಇತರರ ಮುಂದೆ ಅಸಭ್ಯವಾಗಿ ವರ್ತಿಸಿ ಅವಮಾನ ಆಗುವಂತೆ ಮಾಡುವ ಸಾಧ್ಯತೆ ಈ ವಾರದಲ್ಲಿ ಇದೆ. ಆದ್ದರಿಂದ, ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಈ ವಾರ ಹೆಚ್ಚಾಗಿ ಮೋಸ ಹೋಗುವ ಸಾಧ್ಯತೆ ಇದೆ.ಪರಿಹಾರ :ಪ್ರತಿ ದಿನ  41 ಬಾರಿ ” ಓಂ ಭಗವತೇ ವಾಸುದೇವಾಯ ನಮಃ. ” ಎಂದು ಜಪ ಮಾಡಬೇಕು

ತುಲಾ ರಾಶಿ :-ಈ ರಾಶಿಯ ಜನರು ಈ ಹಿಂದೆ ಕಿಲು ನೋವು ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದ ಸಾಧ್ಯತೆ ಇದೆ. ಆದರೆ, ಈ ವಾರ ತುಲಾ ರಾಶಿಯವರ ಆರೋಗ್ಯ ಒಳ್ಳೆಯ ಪ್ರಗತಿ ಕಾಣುತ್ತದೆ ಮತ್ತು ಅವರು ಈ ವಾರ ಆರೋಗ್ಯವಾಗಿ ಇರುವರು. ಆರೋಗ್ಯಕ್ಕಾಗಿ ಉತ್ತಮ ಆಹಾರ ಪದ್ಧತಿಯ ಜೊತೆಗೆ ಯೋಗವನ್ನು ಸಹ ಮಾಡಬೇಕು. ಕೆಲವು ಕಿರಿ-ಕಿರಿಗಳು ತುಲಾ ರಾಶಿಯವರ ಸ್ವಭಾವದಲ್ಲಿ ಏರಿಳಿತವನ್ನು ತರುತ್ತದೆ. ಹಠಮಾರಿತನ ವರ್ತನೆ ಮನೆಯಲ್ಲಿರುವ ಜನರ ಬೇಸರಕ್ಕೆ ಕಾರಣವಾಗಬಹುದು. ಇದರಿಂದ, ಬಯಸದಿದ್ದರು ಸಹ ಅವರ ಹೃದಯಕ್ಕೆ ನೋವು ನೀಡುವ ಸಾಧ್ಯತೆ ಇದೆ.
ಪರಿಹಾರ :ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಬೇಕು.

ವೃಶ್ಚಿಕ ರಾಶಿ :-ಈ ರಾಶಿಯ ಜನರು ಈ ವಾರ ಅನಿರೀಕ್ಷಿತ ಪ್ರವಾಸಕ್ಕೆ ಹೋಗುವ ಸಾಧ್ಯತೆ ಕಂಡು ಬರುತ್ತದೆ. ಈ ಪ್ರಯಾಣದಿಂದ ವೃಶ್ಚಿಕ ರಾಶಿಯ ಜನರಿಗೆ ಬಳಲಿಕೆ ಹೆಚ್ಚಾಗುತ್ತದೆ. ಆದ್ದರಿಂದ, ಈ ಪ್ರಯಾಣವನ್ನು ಮುಂದುವರೆಯುವುದು ಒಳ್ಳೆಯದು. ಈ ಸಮಯದಲ್ಲಿ ವೇತನದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಖರ್ಚು ವೆಚ್ಚ ಹೆಚ್ಚಾದರೂ ಕೂಡ ಅದು, ಆರ್ಥಿಕ ಪರಿಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅನಗತ್ಯ ಖರ್ಚುಗಳನ್ನು ಉಳಿಸಿಕೊಂಡು ಮುಂದುವರೆದರೆ ಇನ್ನೂ ಉತ್ತಮ ಫಲಗಳು ದೊರಕುತ್ತದೆ.
ಪರಿಹಾರ :ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಜಪ ಮಾಡಬೇಕು.

ಧನಸ್ಸು ರಾಶಿ :- ಈ ರಾಶಿಯ ಜನರು ದೇಹ ದಂಡಿಸಲು ಜಿಮ್ ಮೊರೆ ಹೋಗಿದ್ದರೆ ಅವರು, ಈ  ವಾರ ಹೆಚ್ಚು ತೂಕವನ್ನು ಎತ್ತುವುದನ್ನು ತಪ್ಪಿಸುವುದು ಒಳ್ಳೆಯದು. ಇಲ್ಲದೆ ಹೋದರೆ ಸ್ನಾಯುಗಳಿಗೆ ತೊಂದರೆ ಎದುರಾಗುತ್ತದೆ. ಇದರ ಹೊರತುಪಡಿಸಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಕೆಲಸದ ಸ್ಥಳದಲ್ಲಿ ಕೆಲಸ ಹೆಚ್ಚಾಗಿ ಕುಟುಂಬದ ಸಂತೋಷದಿಂದ ಧನಸ್ಸು ರಾಶಿಯ ಜನರು ದೂರ ಉಳಿಯ ಬೇಕಾಗಿಬರಬಹುದು. ಆದರೂ ಮಾನಸಿಕ ಒತ್ತಡದಿಂದ ವಿಶ್ರಾಂತಿ ಪಡೆಯಲು ಬಯಸಿದರೆ ಮನೆಯ ಸದಸ್ಯರ ಜೊತೆ ಸ್ವಲ್ಪ ಸಮಯ ಕಳೆಯುವುದು ಒಳ್ಳೆಯದು.
ಪರಿಹಾರ :ಗುರುವಾರದಂದು ಬಡ ಬ್ರಾಹ್ಮಣರಿಗೆ ಅನ್ನ ದಾನವನ್ನು ಮಾಡಬೇಕು.

ಮಕರ ರಾಶಿ :-ಈ ವಾರ ಮಕರ ರಾಶಿಯ ಜನರಿಗೆ ಹೆಚ್ಚು ಉತ್ಸಾಹ ಇರುತ್ತದೆ. ಈ ವಾರದಲ್ಲಿ ಹೂಡಿಕೆ ಮಾಡುವ ವಿಚಾರವಾಗಿ ಹೆಚ್ಚು ಯೋಚನೆ ಮಾಡಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಕೆ ಮಾಡಬಹುದು.  ಈ ರಾಶಿಯ ಜನರಿಗೆ ಆಪ್ತವಾಗಿ ಇರುವ ಜನರು ಈ ವಾರ ವಿಚಿತ್ರವಾಗಿ ವರ್ತಿಸುವ ಸಾಧ್ಯತೆ ಇದೆ. ಇದರಿಂದ, ಈ ರಾಷ್ಟ್ರೀಯ ಜನರಿಗೂ ಮತ್ತು ಅವರ ಪ್ರೀತಿ ಪಾತ್ರರಿಗು ವೈಮನಸ್ಸು ಸೃಷ್ಟಿ ಆಗಬಹುದು. ನೇರವಾಗಿ ಮಾತನಾಡಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು. ಮಾತನಾಡುವುದು ಅಗತ್ಯ ಇಲ್ಲದ ಕಡೆ ಮೌನ ವಹಿಸುವುದು ಒಳ್ಳೆಯದು.
ಪರಿಹಾರ :ಪ್ರತಿ ದಿನ 44 ಬಾರಿ ” ಓಂ ಮಂಗಳಾಯ ನಮಃ. ” ಎಂದು ಜಪ ಮಾಡಬೇಕು.

ಕುಂಭ ರಾಶಿ :-ಈ ರಾಶಿಯ ಜನರಿಗೆ ಅವರ ಕುಟುಂಬ ಸದಸ್ಯರ ಕಳಪೆ ಆರೋಗ್ಯ ಪರಿಸ್ಥಿತಿ ಸುಧಾರಿಸುವುದು ಕಂಡು ಹೆಚ್ಚು ಖುಷಿಯಾಗುತ್ತದೆ.  ಈ ವಾರ ಭೂಮಿ, ಸಾಂಸ್ಕೃತಿಕ ಕಾರ್ಯಕ್ರಮ ಇದರ ಕುರಿತಾಗಿ ಹೆಚ್ಚಿನ ಗಮನ ಕೊಡಬೇಕು ಕುಂಭ ರಾಶಿಯ ಜನರು. ಏಕೆಂದರೆ ಈ ಸಮಯದಲ್ಲಿ ಇದರ ಮೇಲೆ ಹೂಡಿಕೆ ಮಾಡಲು ಈ ಸಮಯ ಉತ್ತಮ ಸಂಯೋಜನೆಯನ್ನು ತಂದುಕೊಡುತ್ತದೆ. ಈ ವಾರ ಅನಿರೀಕ್ಷಿತ ಅತಿಥಿಗಳ ಆಗಮನ ಆಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಕುಟುಂಬ ಪರಿಸ್ಥಿತಿಯಲ್ಲಿ ಶಾಂತಿ ನೆಮ್ಮದಿಯನ್ನು ತಂದುಕೊಡುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ರುಚಿಕರ ಆಹಾರ ತಿನ್ನುವ ಸೌಭಾಗ್ಯ ದೊರಕುತ್ತದೆ. ಕೆಲಸ ಪೂರ್ಣವಾಗಿದೆ ಎಂದು ಭಾವಿಸಿ ದಾಖಲೆಗಳನ್ನು ಅಧಿಕಾರಿಗಳ ಕೈಗೆ ಕೊಡುವುದು ತಪ್ಪು ನಿರ್ಧಾರ.
ಪರಿಹಾರ :ಪ್ರತಿ ದಿನ 21 ಬಾರಿ ”  ಓಂ ನಮಃ ಶಿವಾಯ. ” ಇಂದು ಜಪ ಮಾಡಬೇಕು.

ಮೀನ ರಾಶಿ :-ಈ ರಾಶಿಯ ಜನರು ಈ ವಾರ ಆರೋಗ್ಯದ ಕಡೆ ಹೆಚ್ಚಿನ ಜಾಗೃತಿ ವಹಿಸಬೇಕು ಮತ್ತು ಆಲ್ಕೋಹಾಲ್ ಸೇವನೆ ಮಾಡುವ ಜನರು ಅದರಿಂದ, ದೂರ ಇರಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆ ಬಯಸಬೇಕು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವ ಸಾಧ್ಯತೆ ಇದೆ. ಮೀನ ರಾಶಿಯವರ ತಾಯಿಯ ಆರೋಗ್ಯ ಉತ್ತಮವಾಗಿ ಇರುತ್ತದೆ. ಈ ವಾರ ತಂದೆ ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಪ್ರಗತಿ. ಈ ವಾರ ಮೀನ ರಾಶಿಯವರ ಸ್ವಭಾವ ಸ್ವಾರ್ಥ ಹೆಚ್ಚಾಗುವ ಸಾಧ್ಯತೆ ಇದೆ. ಅಧ್ಯಯನದ ವಸ್ತುಗಳನ್ನು ಆರಂಭದಿಂದಲೇ ಒಂದು ಕಡೆ ಜೋಡಿಸಿ ಇರುವುದು ಉತ್ತಮ.
ಪರಿಹಾರ :ಪ್ರತಿದಿನ 21 ಬಾರಿ ” ಓಂ ಬ್ರಹಸ್ಪತಿಯೇ ನಮಃ. ” ಎಂದು ಜಪ ಮಾಡಬೇಕು.
ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!