2024 ಸಪ್ಟೆಂಬರ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ವೃಶ್ಚಿಕ ರಾಶಿಯ ಸಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ರವಿಯು ಕ್ರಮವಾಗಿ ಹತ್ತು ಮತ್ತು ಹನ್ನೊಂದನೆ ಮನೆ ಕುಜ ಗ್ರಹನು ಎಂಟನೆ ಮನೆ ಬುಧ ಗ್ರಹನು ಒಂಭತ್ತು ಮತ್ತು ಹತ್ತನೆ ಮನೆ ಗುರು ಏಳನೆ ಮನೆ ಶುಕ್ರ ಗ್ರಹ ಹನ್ನೊಂದು ಹಾಗೂ ಹನ್ನೆರಡನೆ ಮನೆ ಶನಿ ಗ್ರಹ ಸ್ವಕ್ಷೇತ್ರ ನಾಲ್ಕನೆ ಸ್ಥಾನ ಕುಂಭ ರಾಶಿಯಲ್ಲಿ ರಾಹು ಐದನೆ ಮನೆ ಕೇತು ಗ್ರಹ ಹನ್ನೊಂದನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರವಿ 10ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತಾನೆ ಇದರಿಂದ ಕೀರ್ತಿ ವೃದ್ಧಿ ಧನ ಲಾಭವಾಗುತ್ತದೆ. ಕಾನೂನು ಜಗಳದಲ್ಲಿ ಇದ್ದವರಿಗೆ ಕಾನೂನಿನಲ್ಲಿ ಜಯ ಸಿಗುತ್ತದೆ.

ರವಿ 11ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವೃಶ್ಚಿಕ ರಾಶಿಯವರು ಧರ್ಮ ನ್ಯಾಯ ನೀತಿಯಲ್ಲಿ ಜೀವನ ಮಾಡುತ್ತಿದ್ದವರಿಗೆ ಶ್ರೇಯೋಭಿವೃದ್ಧಿಯನ್ನು ಕೊಡುತ್ತಾನೆ ಹೀಗಾಗಿ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕುಜನಿಂದ ಆಯುಧ ಯಂತ್ರಗಳಿಂದ ಅಪಘಾತವಾಗಬಹುದು, ರಕ್ತ ಹರಿಯುವಿಕೆ ಆಗಬಹುದು ಹೀಗಾಗಿ ವಾಹನ ಚಲಾಯಿಸುವಾಗ ಯಂತ್ರದ ಹತ್ತಿರ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ವೃಶ್ಚಿಕ ರಾಶಿಯ ಸ್ತ್ರೀಯರಿಗೆ ಹಾರ್ಮೋನ್ ವ್ಯತ್ಯಾಸ ಕಂಡು ಬರುತ್ತದೆ.

ಬುಧನು ಒಂಭತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಉತ್ತಮ ಜ್ಞಾನವೃದ್ಧಿ ವಿದ್ಯಾರ್ಥಿಗಳಿಗೆ ವಿದ್ಯಾಪ್ರಾಪ್ತಿಯನ್ನು ಕೊಡುತ್ತಾನೆ, ಮಿತ್ರರಿಂದ ವಿದ್ಯೆಗಾಗಿ ಸಹಕಾರ ಹಾಗೂ ವಿದ್ಯೆಯಲ್ಲಿ ಪ್ರಶಂಸೆ ಸಿಗುತ್ತದೆ. ಬುಧ 10ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಶತ್ರುನಾಶ ಉದ್ಯೋಗದಲ್ಲಿ ಯಾವುದಾದರೂ ಕಷ್ಟವಿದ್ದರೆ ಅದು ದೂರವಾಗುತ್ತದೆ, ವಿದ್ಯಾ ಕ್ಷೇತ್ರದಲ್ಲಿ ಯಾರಾದರೂ ಶತ್ರುಗಳಿದ್ದರೆ ಅವರಿಗೆ ಅಪಜಯವಾಗುತ್ತದೆ. ವೃಶ್ಚಿಕ ರಾಶಿಯವರು ಗುರುವಿನ ಆರಾಧನೆಯನ್ನು ಮಾಡಬೇಕಾಗುತ್ತದೆ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ದೇವತಾ ಆರಾಧನೆ ಮಾಡುವುದರಿಂದ ಗುರು ಒಳ್ಳೆಯದನ್ನು ಮಾಡುತ್ತಾನೆ.

ಲಾಭ ಸ್ಥಾನದಲ್ಲಿರುವ ಶುಕ್ರನಿಂದ ವೃಶ್ಚಿಕ ರಾಶಿಯವರಿಗೆ ಮಕ್ಕಳಿಂದ ಧನ ಪ್ರಾಪ್ತಿಯಾಗುತ್ತದೆ, ಮಿತ್ರರ ಆಗಮನ ಹಾಗೂ ಅದರಿಂದ ಮನೆಯಲ್ಲಿ ಸಂತೋಷ ಉಂಟಾಗುತ್ತದೆ ಶುಕ್ರನು 12ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವೃಶ್ಚಿಕ ರಾಶಿಯವರಿಗೆ ಆಭರಣ ಆಗಮನ ಅಲಂಕಾರಿಕ ವಸ್ತುಗಳ ಆಗಮನ ಸ್ತ್ರೀಯರಿಗೆ ಹೊಸ ಬಟ್ಟೆಯ ಆಗಮನವಾಗುತ್ತದೆ.

ಶನಿ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಪತಿ-ಪತ್ನಿಯರ ನಡುವೆ ಕಲಹ ಇದರಿಂದ ದಾಂಪತ್ಯ ವಿರಸ ಕಂಡುಬರುತ್ತದೆ ಮಾನಸಿಕ ಅಶಾಂತಿ ಕಾಣಿಸುತ್ತದೆ ಹೀಗಾಗಿ ಕಲಹ ನಡೆಯುತ್ತಿದ್ದಾಗ ಮೌನವಹಿಸುವುದು ಒಳ್ಳೆಯದು. ರಾಹು ಐದನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವಾಹನ ಅಪಘಾತ ಷೇರು ಮಾರ್ಕೆಟ್ ನಲ್ಲಿ ನಷ್ಟ, ಸಂತಾನ ಪಡೆಯಲು ಕಷ್ಟಪಡಬೇಕಾಗುತ್ತದೆ. ಕೇತು ಗ್ರಹದಿಂದ ಧನ ವ್ಯಯವಾಗುತ್ತದೆ ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ 9,15, 25 ಹಾಗೂ 30ನೆ ತಾರೀಖು ಒಳ್ಳೆಯ ಕಾರ್ಯಗಳನ್ನು ಪ್ರಾರಂಭ ಮಾಡಬೇಕು. ವೃಶ್ಚಿಕ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಕೆಂಪು ಹಾಗೂ ಕಂದು ಬಣ್ಣಗಳಾಗಿವೆ. ಈ ಮಾಹಿತಿಯನ್ನು ತಪ್ಪದೆ ವೃಶ್ಚಿಕ ರಾಶಿಯವರಿಗೆ ತಿಳಿಸಿ ನಿಮ್ಮ ರಾಶಿ ಯಾವುದು ಎಂಬುದನ್ನು ನಮಗೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!