ಸೌರವ್ಯೂಹದಲ್ಲಿ ಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸಿದಾಗ ಕೆಲವೊಮ್ಮೆ ಅವು ಶುಭ ಹಾಗೂ ರಾಜಯೋಗವನ್ನು ಸೃಷ್ಟಿಸುತ್ತವೆ ಇಂತಹ ಯೋಗದ ಪರಿಣಾಮವು 12 ರಾಶಿಗಳ ಮೇಲಾಗುತ್ತದೆ. ಹಾಗಾದರೆ ಶನಿ ಹಾಗೂ ಶುಕ್ರ ಗ್ರಹವು ರಾಶಿ ಬದಲಾಯಿಸಿದಾಗ ಯಾವ ರಾಜಯೋಗ ಸೃಷ್ಟಿಯಾಯಿತು ಹಾಗೂ ಯಾವ ಯಾವ ರಾಶಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಧರ್ಮಾಧಿಪತಿಯಾದ ಶನಿಯು ಸುಮಾರು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಿ ಶಶ ರಾಜಯೋಗವು ಸೃಷ್ಟಿಯಾಗುತ್ತದೆ. ಮೇ 19 ರಂದು ಅಸುರರ ಅಧಿಪತಿಯಾದ ಶುಕ್ರನು ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದು ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಸುಮಾರು 30 ವರ್ಷಗಳ ನಂತರ ಶಶ ಹಾಗೂ ಮಾಲವ್ಯ ರಾಜಯೋಗ ಒಟ್ಟಿಗೆ ಆಗುತ್ತಿದೆ ಮೇ 19 ರ ನಂತರ 3 ರಾಶಿಗಳಿಗೆ ಅದೃಷ್ಟ ಒಲಿಯುತ್ತದೆ. ಶಶ ಹಾಗೂ ಮಾಲವ್ಯ ರಾಜಯೋಗದಿಂದ ಪ್ರಯೋಜನವಾಗುತ್ತಿರುವ ಮೊದಲ ರಾಶಿ ವೃಷಭ ರಾಶಿ. ಈ ರಾಶಿಯವರು ಉದ್ಯೋಗ ಸ್ಥಳದಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ, ಬಡ್ತಿ ಸಿಗುತ್ತದೆ ವೇತನ ಹೆಚ್ಚಳವಾಗುತ್ತದೆ. ವೃಷಭ ರಾಶಿಯ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗುತ್ತದೆ ಬಹಳ ವರ್ಷಗಳಿಂದ ತಿಂಗಳುಗಳಿಂದ ವಿದೇಶಕ್ಕೆ ಹೋಗುವ ಆಸೆಯನ್ನು ಹೊಂದಿದ್ದರೆ ಈ ಸಮಯದಲ್ಲಿ ಈಡೇರುತ್ತದೆ. ವೃಷಭ ರಾಶಿಯವರ ತಂದೆಯೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ವೃಷಭ ರಾಶಿಯವರಿಗೆ ವೃತ್ತಿಕ್ಷೇತ್ರದಲ್ಲಿ ಬಹಳ ಅವಕಾಶಗಳು ಸಿಗುತ್ತದೆ.

ಶಶ ಹಾಗೂ ಮಾಲವ್ಯ ಯೋಗದ ಪ್ರಯೋಜನ ಪಡೆಯುತ್ತಿರುವ ಇನ್ನೊಂದು ರಾಶಿ ತುಲಾ ರಾಶಿ, ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ತುಲಾ ರಾಶಿಯ ಉದ್ಯಮಿಗಳು ಸಾಕಷ್ಟು ಹಣವನ್ನು ಪಡೆಯುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ, ಲಾಭ ಗಳಿಸುತ್ತಾರೆ. ಇನ್ನು ಉದ್ಯೋಗಿಗಳು ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯುತ್ತಾರೆ ಕೆಲವರಿಗೆ ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ, ಉತ್ತಮ ಸ್ಥಾನಮಾನ, ಜವಾಬ್ದಾರಿ ಸಿಗುತ್ತದೆ. ತುಲಾ ರಾಶಿಯವರು ರಾಜಯೋಗದಿಂದ ಹೊಸ ವಾಹನ, ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ಯೋಗಗಳ ಮೂಲಕ ತುಲಾ ರಾಶಿಯವರು ಉತ್ತಮ ಭೌತಿಕ ಸುಖವನ್ನು ಪಡೆಯುತ್ತಾರೆ. ಮಾಧ್ಯಮ ಮಾಡ್ಲಿಂಗ್, ಫ್ಯಾಷನ್ ಡಿಸೈನರ್ ಕ್ಷೇತ್ರಗಳಲ್ಲಿರುವ ತುಲಾ ರಾಶಿಯವರು ಈ ರಾಜಯೋಗದಿಂದ ಉತ್ತಮ ಪ್ರಗತಿ ಹೊಂದುತ್ತಾರೆ.

ಶಶ ಹಾಗೂ ಮಾಲವ್ಯ ರಾಜಯೋಗದಿಂದ ಪ್ರಯೋಜನ ಪಡೆಯುತ್ತಿರುವ ಕೊನೆಯ ರಾಶಿ ಮಕರ ರಾಶಿ, ಇವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಮಕರ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಇಲ್ಲಿಯವರೆಗೆ ನಿರ್ಲಕ್ಷಕ್ಕೆ ಒಳಗಾಗಿದ್ದರೂ ಇನ್ನು ಮುಂದೆ ಪ್ರಾಮುಖ್ಯತೆ ಸಿಗುತ್ತದೆ, ಆದಾಯದಲ್ಲಿ ಹೆಚ್ಚಳವಾಗುತ್ತದೆ. ಮಕರ ರಾಶಿಯವರು ಈ ಸಮಯದಲ್ಲಿ ಹೆಚ್ಚು ಹಣವನ್ನು ಉಳಿಸುತ್ತಾರೆ ಹಾಗೂ ವ್ಯಾಪಾರಿಗಳಾಗಿದ್ದರೆ ಹೆಚ್ಚಿನ ಲಾಭಗಳಿಸುತ್ತಾರೆ. ಒಟ್ಟಿನಲ್ಲಿ ಶಶ ಹಾಗೂ ಮಾಲವ್ಯ ರಜಯೋಗದಿಂದ ವೃಷಭ, ತುಲಾ, ಮಕರ ರಾಶಿಯವರಿಗೆ ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಲಾಭವಾಗುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!