ನಾಗ ದೇವರನ್ನು ಆರಾಧನೆ ಮಾಡಿ ಪೂಜೆ ಮಾಡಿ ಆಚರಣೆ ಮಾಡುವ ಹಬ್ಬ ನಾಗರಪಂಚಮಿ. ನಾಗರ ಪಂಚಮಿ ಹಬ್ಬ ಆರಂಭವಾಗುವುದು 09/08/2024 ರ ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದ ಮಧ್ಯರಾತ್ರಿ 12:00 ಕ್ಕೆ ಪ್ರಾರಂಭ ಆಗುತ್ತದೆ ಅದು 10/08/2024 ರ ಶನಿವಾರ ಬೆಳಗಿನ ಜಾವ 3:15 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

ನಾಗರ ಪಂಚಮಿಗೆ ಯಾವ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ತಿಳಿಯೋಣ ಬನ್ನಿ;ಮೊದಲಿಗೆ ಬೇಕಾಗಿರುವುದು ಮಂಗಳ ದ್ರವ್ಯಗಳು ಅರಿಶಿಣ ಕುಂಕುಮ ಹೂವು ಹಾಗೂ ವ್ರತದ ದಾರ. ಬಿಳಿ ಬಣ್ಣದ ನೂಲಿಗೆ ಅರಿಶಿನವನ್ನು ಹಚ್ಚಿ ನಂತರ ಸೇವಂತಿಗೆ ಹೂವನ್ನು ನೂಲಿನಿಂದ ಕಟ್ಟಿಬೇಕು ಇದರಿಂದ ಕಂಕಣ ಸಿದ್ಧವಾಗುತ್ತದೆ. ಮನೆಯಲ್ಲಿ ಇರುವ ಜನರಿಗೆ ಎಲ್ಲರಿಗೂ ಸೇರಿಸಿ ವ್ರತದ ದಾರವನ್ನು ಸಿದ್ಧಮಾಡಿಕೊಳ್ಳಬೇಕು ಪೂಜೆ ಮಾಡಿದ ನಂತರ ಅದನ್ನು ಎಲ್ಲರ ಕೈಗೂ ಕಟ್ಟಬೇಕು.

ವ್ರತದ ನೂಲು ಅಶ್ವತ್ಥ ಕಟ್ಟೆಗೆ ಮರಗಳ ಸುತ್ತ ಸುತ್ತಲೂ ಸಹ ಬೇಕಾಗುತ್ತದೆ. ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಬೆಲ್ಲದ ದೀಪದ ಆರಾಧನೆಯನ್ನು ಮಾಡಬಹುದು. ಒಂದು ವೇಳೆ ಬೆಲ್ಲದ ದೀಪ ಬೆಳಗಲು ಸಾಧ್ಯವಾಗದೆ ಹೋದಲ್ಲಿ ಎರಡು ಮಣ್ಣಿನ ದೀಪದ ಸಹಾಯದಿಂದ ಕೂಡ ದೀಪ ಆರಾಧನೆಯನ್ನು ಮಾಡಬಹುದು ಅದಕ್ಕೆ ತುಪ್ಪವನ್ನು ಬಳಸಬೇಕು.

ತುಪ್ಪದ ಬತ್ತಿ, ಅಡಿಕೆ, ಗಂಧದ ಪುಡಿ, ಬೆಳ್ಳಿಯ ಬಟ್ಟಲು ಹಸಿ ಹಾಲು, ಗೆಜ್ಜೆ ವಸ್ತ್ರ, ಬತ್ತಿ ಮತ್ತು ಕೊಂಬರಿ ಬಟ್ಟಲು. ಒಂದು ಅಡಿಕೆ ಪಟ್ಟೆಯ ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರ ಮೇಲೆ ದೀಪವನ್ನು ಜೋಡಿಸಿ ಅದಕ್ಕೆ ತುಪ್ಪದ ಬತ್ತಿಯನ್ನು ಹಾಕಿ ಸ್ವಲ್ಪ ತುಪ್ಪ ಸುರಿದು ಅರಿಶಿನ ಕುಂಕುಮವನ್ನು ದೀಪಗಳಿಗೆ ಹಚ್ಚಿ ನಂತರ ಹೂವಿನ ಅಲಂಕಾರ ಮಾಡಬೇಕು. ಗಂಧದಕಟ್ಟಿಯನ್ನು ದೀಪಗಳಿಗೆ ಬೆಳಗಿ ನಂತರ ದೇವರ ಮುಂದೆ ನಿಂತು ದೇವರಿಗೆ ಬೆಳಗಬೇಕು.ಕೊನೆಯಲ್ಲಿ ಅಕ್ಕಿಯನ್ನು ದೇವರಿಗೆ ಸಮರ್ಪಣೆ ಮಾಡಬೇಕು.
ಎಲ್ಲಾ ಹಾಗೂ ಮಣ್ಣಿನ ದೀಪವನ್ನು ಅಡಿಕೆ ಪಟ್ಟೆಯ ಎಲೆಯ ಮೇಲೆ ಇಟ್ಟು ದೇವಸ್ಥಾನದಲ್ಲಿ ಬಿಟ್ಟು ಬರಬೇಕು.

ನೈವೇದ್ಯಕ್ಕೆ ಹಸಿ ಅಕ್ಕಿ ಉಂಡೆ, ಕಡಲೆ ಬೆಲ್ಲ, ಹಸಿ ಕಡಲೆ ಕಾಳು ಮತ್ತು ಎಳ್ಳಿನ ಉಂಡೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಎಲೆ ಅಡಿಕೆಯನ್ನು ಅಲ್ಲಿ ನಡೆದಿರುವ ಮುತ್ತೈದೆಯರಿಗೆ ಕೊಡಬೇಕು. ನಾಗರ ಪಂಚಮಿಯನ್ನು ಮಡಿಯಿಂದ ಶುದ್ಧವಾದ ಮನಸ್ಸಿನಿಂದ ಮಾಡಿದರೆ ನಾಗ ದೇವರು ಕೇಳಿದ ವರಗಳನ್ನು ಕರುಣಿಸುವರು. ನಾಗ ದೇವರಿಗೆ ಸಂಬಂಧಪಟ್ಟ ಯಾವುದೇ ರೀತಿಯ ಚರ್ಮ ಸಮಸ್ಯೆಗಳು ಇದ್ದರು ಅದಕ್ಕೆ, ಪರಿಹಾರ ಹುತ್ತದ ಮಣ್ಣಿನಲ್ಲಿ ಇರುತ್ತದೆ. ಅದನ್ನು, ಹಾಲು ಮತ್ತು ತುಪ್ಪ ಹಾಕಿ ಬೆರಳುಗಳ ಸಹಾಯದಿಂದ ಪೂಜೆ ಮಾಡಿದ ನಂತರ ತೆಗೆದುಕೊಂಡು ಚರ್ಮದ ಮೇಲೆ ಲೇಪನ ಮಾಡಬೇಕು. ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮದ ಜೊತೆಗೆ ಪ್ರಸಾದವನ್ನು ನೀಡಬೇಕು. ಇದು ನಾಗರ ಪಂಚಮಿ ಮಾಡುವ ವಿಧಾನ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!