2024 ಸಪ್ಟೆಂಬರ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ತುಲಾ ರಾಶಿಯ ಸಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024ರಲ್ಲಿ ಸಪ್ಟೆಂಬರ್ ತಿಂಗಳ ತುಲಾ ರಾಶಿಯ ಫಲ ನೋಡಬೇಕಾದರೆ ಗ್ರಹಗತಿಗಳ ಚಲನೆಯನ್ನು ನೋಡಲೆಬೇಕು. ರವಿಯು 11 ಹಾಗೂ 12 ನೆ ಮನೆಯಲ್ಲಿ, ಮಂಗಳನು 9ನೆ ಮನೆಯಲ್ಲಿ, ಬುಧ ಗ್ರಹನು 10 ಹಾಗೂ 11ನೆ ಮನೆ, ಗುರು 8ನೇ ಮನೆಯಲ್ಲಿ ಶುಕ್ರನು 12 ನೇ ಮನೆ ವ್ಯಯಸ್ಥಾನದಲ್ಲಿ ಹಾಗೂ ಒಂದನೆ ಮನೆಯಲ್ಲಿ ಶನಿ ಗ್ರಹನು ಐದನೆ ಮನೆಯಲ್ಲಿ ರಾಹು ಆರನೆ ಮನೆಯಲ್ಲಿ ಕೇತು ಹನ್ನೆರಡನೆ ಮನೆ ವ್ಯಯ ಸ್ಥಾನದಲ್ಲಿ ಸಂಚಾರ ಮಾಡುತ್ತಾರೆ.

ರವಿ ಹನ್ನೊಂದನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಕೀರ್ತಿ ವೃದ್ಧಿ ಧನ ಲಾಭವನ್ನು ಕೊಡುತ್ತಾನೆ ತಂದೆ ತಾಯಿಯರ ಆರೋಗ್ಯ ವೃದ್ಧಿಯನ್ನು ಹಾಗೂ ಅವರ ಅನುಗ್ರಹವನ್ನು ತೋರಿಸುತ್ತಾನೆ ರವಿ ಹನ್ನೆರಡನೆ ಮನೆಗೆ ಬಂದಾಗ ಸ್ವಲ್ಪಮಟ್ಟಿಗೆ ಕಷ್ಟ ನಷ್ಟವನ್ನು ಕೊಡುತ್ತಾನೆ. ಧರ್ಮ ನೀತಿ ನ್ಯಾಯದ ದಾರಿಯಲ್ಲಿ ನಡೆಯುತ್ತಿರುವವರಿಗೆ ಶ್ರೇಯೋಭಿವೃದ್ಧಿಯನ್ನು ಕೊಡುತ್ತಾನೆ. ಕುಜ ಗ್ರಹದಿಂದ ಶತ್ರುಪೀಡೆ ಭೂ ಸಂಬಂಧಿ ವ್ಯಾಪಾರದಲ್ಲಿ ನಷ್ಟವನ್ನು ಸೂಚಿಸುತ್ತಾನೆ, ಮನೆಯಲ್ಲಿ ಸಹೋದರರ ನಡುವೆ ಕಲಹ ಉಂಟಾಗುತ್ತದೆ.

ಬುಧ ಗ್ರಹನು ಹತ್ತನೆ ಮನೆಯಲಿ ಸಂಚಾರ ಮಾಡುತ್ತಿದ್ದಾಗ ಧರ್ಮ ಕಾರ್ಯದಲ್ಲಿ ಆಸಕ್ತಿ ಬರುವಂತೆ ಮಾಡುತ್ತಾನೆ, ವಿದ್ಯಾರ್ಥಿಗಳಿಗೆ ವಿದ್ಯಾಪ್ರಾಪ್ತಿಯನ್ನು ಕೊಡುತ್ತಾನೆ. ಬುಧನು 11ನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ವಿದ್ಯಾರ್ಥಿಗಳಿಗೆ ಸುಖವನ್ನು ಸಂಸಾರಿಕರಿಗೆ ಸುಖವನ್ನು ಸಂತಾನ ಪ್ರಾಪ್ತಿಯನ್ನು ಕೊಡುತ್ತಾನೆ. ಗುರುವಿನ ಅನುಗ್ರಹ ತುಲಾ ರಾಶಿಯವರ ಮೇಲೆ ಕಡಿಮೆ ಇರುವುದರಿಂದ ಗುರು ಹಿರಿಯರ ಅನಾರೋಗ್ಯ ಕಂಡು ಬರುತ್ತದೆ, ದೇವಸ್ಥಾನಗಳ ಭೇಟಿ ಮಾಡಿ.

ದೇವರ ದರ್ಶನ ಪಡೆಯುವುದು ಉತ್ತಮ ತಂದೆ ತಾಯಿಯರ ಸೇವೆ ಮಾಡಿ ಅವರ ಅನುಗ್ರಹ ಪಡೆಯುವುದು ಉತ್ತಮ. ಶುಕ್ರನಿಂದ ಆಭರಣ ಪ್ರಾಪ್ತಿ ಹಾಗೂ ಆಭರಣ ಆಗಮನ ಅಲಂಕಾರ ವಸ್ತುಗಳ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಕೊಡುತ್ತಾನೆ ಶುಕ್ರನು ಒಂದನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಸಂಸಾರಿಕ ಸುಖವನ್ನು ಕೊಡುತ್ತಾನೆ. ಶನೇಶ್ವರನು 5ನೆ ಮನೆಯಲ್ಲಿ ಸಂಚಾರ ಮಾಡುತ್ತಾ ಧನವ್ಯಯ ತಂದೆ ತಾಯಿಯೊಂದಿಗೆ ಜಗಳಗಳನ್ನು ಮಾಡಿಸುತ್ತಾನೆ ಪುತ್ರರಲ್ಲಿ ಕಲಹ ಉಂಟಾಗುತ್ತದೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ರಾಹುವಿನಿಂದ ಷೇರು ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುವವರು ಕುಂಠಿತ ಪ್ರಗತಿಯನ್ನು ಕಾಣುತ್ತಾರೆ ಹಾಗೂ ಕ್ರೀಡೆಯಲ್ಲಿ ಅಪಜಯವನ್ನು ತೋರಿಸುತ್ತಾನೆ. ಕೇತು ಗ್ರಹ 12ನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಜ್ಞಾನಪ್ರಾಪ್ತಿ ವಿದೇಶ ಸಂಚಾರ ಮಾಡುತ್ತಾರೆ. ತುಲಾ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ 4,7,17 ಹಾಗೂ 21 ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಪ್ರಾರಂಭ ಮಾಡಿ ಒಳ್ಳೆಯ ಫಲ ಪಡೆಯಬಹುದು. ತುಲಾ ರಾಶಿಯವರಿಗೆ ಉತ್ತಮವಾದ ಬಣ್ಣ ಬಿಳಿ ಹಾಗೂ ಹಳದಿ ಬಣ್ಣ ಈ ಮಾಹಿತಿಯನ್ನು ತಪ್ಪದೆ ತುಲಾ ರಾಶಿಯವರಿಗೆ ತಿಳಿಸಿ, ನಿಮ್ಮ ರಾಶಿ ಯಾವುದು ಎಂದು ನಮಗೆ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!