ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ತುಲಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.

ಜೂನ್ ತಿಂಗಳಿನಲ್ಲಿ ಕುಜ ಗ್ರಹ 7 ನೇ ಮನೆಯಲ್ಲಿ, ರವಿ ಗ್ರಹ, ಬುಧ ಗ್ರಹ, ಗುರು ಗ್ರಹ ಮತ್ತು ಶುಕ್ರ ಗ್ರಹ 8 ನೇ ಮನೆಯಲ್ಲಿ, ಕೇತು ಗ್ರಹ 12 ನೇ ಮನೆಯಲ್ಲಿ, ಶನಿ ಗ್ರಹ 5 ನೇ ಮನೆಯಲ್ಲಿ ಮತ್ತು ರಾಹು ಗ್ರಹ 8 ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ತುಲಾ ರಾಶಿಯವರಿಗೆ ಕುಜ ಗ್ರಹದ ಪ್ರಭಾವದಿಂದ ಗಂಡ ಹೆಂಡತಿ ಮಧ್ಯ ವಿರಸ ಉಂಟಾಗುವ ಸಾಧ್ಯತೆ ಇದೆ. ಅಪೇಕ್ಷೆಗಳು ಹೆಚ್ಚಾದಂತೆ ಜಗಳಗಳು ಸೃಷ್ಟಿಯಾಗುತ್ತದೆ. ಪ್ರೇಮಿಗಳ ನಡುವೆ ವೈಮನಸ್ಸಿನಿಂದ ವಿರಸ ಉಂಟಾಗುತ್ತದೆ. ಕುಜ ಗ್ರಹ 7 ನೇ ಮನೆಯಲ್ಲಿ ಇರುವ ಕಾರಣ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿ ಸಂಬಂಧಗಳ ನಡುವೆ ಬಿರುಕು ಮೂಡಬಹುದು.

ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು. ಹೊಂದಾಣಿಕೆ ಜೀವನವನ್ನು ನಡೆಸಬೇಕು. ರವಿ ಗ್ರಹ ಬುಧ ಗ್ರಹ ಗುರು ಗ್ರಹ ಮತ್ತು ಶುಕ್ರ ಗ್ರಹ ಒಂದೇ ಮನೆಯಲ್ಲಿರುವ ಕಾರಣ ಇದು ಚತುರ್’ಗ್ರಹ ಯೋಗವನ್ನು ಮತ್ತು ಬುಧಾದಿತ್ಯ ಯೋಗವನ್ನು ಸೃಷ್ಟಿ ಮಾಡುತ್ತದೆ. ಇದು ಒಳ್ಳೆಯ ಶುಭಕರ ಫಲಗಳನ್ನು ಕೊಡುತ್ತದೆ.

ಜೂನ್ ತಿಂಗಳಿನಲ್ಲಿ ತುಲಾ ರಾಶಿಯ ಜನರಿಗೆ ಅತಿಯಾದ ಯೋಚನೆಗಳನ್ನು ಮಾಡುವುದರಿಂದ ನೆಮ್ಮದಿ ಕೆಡುತ್ತದೆ ಜೊತೆಗೆ ಆರೋಗ್ಯ ಕೂಡ ಕೈ ಕೊಡುವ ಸಾಧ್ಯತೆ ಇದೆ. ದುಂದು ವೆಚ್ಚ ಹೆಚ್ಚಾಗುತ್ತದೆ. ಬೇಡದ ಆಕರ್ಷಣೆಗಳು ಹೆಚ್ಚಾಗುತ್ತದೆ. ಕೆಟ್ಟ ವಿಚಾರಗಳು ಮತ್ತು ಕೆಟ್ಟ ವಸ್ತುಗಳಿಂದ ದೂರ ಇರುವುದು ಹೆಚ್ಚು ಅನಿವಾರ್ಯ.

ಮೋಕ್ಷಕಾರಕ ಕೇತು ಗ್ರಹ 12 ನೇ ಮನೆಯಲ್ಲಿ ಇರುವ ಕಾರಣ ಅನಾವಶ್ಯಕ ಸಾಲ ಹೆಚ್ಚಾಗುವ ಸಂಭವ ಇದೆ. ಸಾಲ ಹೆಚ್ಚಾದರೆ ಅದರಿಂದ, ಹೊರಗೆ ಬರುವುದು ಕಷ್ಟ. ಸಾಲ ಸಂತಸ, ಶಾಂತಿ, ನೆಮ್ಮದಿ ಎಲ್ಲವನ್ನು ಕೆಡೆಸುತ್ತದೆ. ಮಾತಾಡುವ ಮಾತುಗಳು, ತೆಗೆದುಕೊಳ್ಳುವ ನಿರ್ಧಾರಗಳು ಮುಂದೊಂದು ದಿನ ಶತ್ರುವಾಗಿ ಪರಿಣಮಿಸಬಹುದು ಅದರಿಂದ, ಮಾತನಾಡುವ ಮುನ್ನ ಹೆಚ್ಚು ಎಚ್ಚರಿಕೆ ವಹಿಸಬೇಕು. ಇಷ್ಟಪಟ್ಟ ಜನರು ದೂರವಾಗಿ ಹೆಚ್ಚು ನೋವು ಅನುಭವಿಸುವ ಸಾಧ್ಯತೆ ಇದೆ. ಎಲ್ಲದರಲ್ಲೂ ಲಾಭಾಂಶವನ್ನು ಹುಡುಕುವುದು ತಪ್ಪು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಅಪಘಾತಗಳು ಆಗುವ ಸಂಭವ ಇದೆ, ಆರೋಗ್ಯವನ್ನು ನಿರ್ಲಕ್ಷ ಮಾಡಿದರೆ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗಿ ಪರಿಣಮಿಸಬಹುದು.

ಪರಿಹಾರ :-ಸುಬ್ರಹ್ಮಣ್ಯ ಅಥವಾ ಸರ್ಪದ ಆರಾಧನೆ ಮಾಡುವುದು ಹೆಚ್ಚು ಉತ್ತಮ ಫಲವನ್ನು ಕೊಡುತ್ತದೆ. ಅರಳಿ ಮರಕ್ಕೆ ದೀಪ ಬೆಳಗಬೇಕು, ಒಂದು ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು clockwise ಮತ್ತು anti clock wise ದೃಷ್ಟಿ ತೆಗೆದುಕೊಳ್ಳಬೇಕು ನಂತರ ಅದನ್ನು ಅರಳಿ ಮರದ ಬುಡದಲ್ಲಿ ಇಡಬೇಕು. ಉಚ್ಚಾಟನ ರಕ್ಷಾ ಯಂತ್ರ ಮತ್ತು ದರ್ಶನಾ ರಕ್ಷಾ ಯಂತ್ರವನ್ನು ಮನೆಯಲ್ಲಿ ಇರಿಸುವುದರಿಂದ ಒಳ್ಳೆ ಫಲ ಲಭಿಸುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!