2024 ಜೂನ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜೂನ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಹನ್ನೊಂದನೆ ರಾಶಿ ಕುಂಭ ರಾಶಿ ಈ ರಾಶಿಯ ಜೂನ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಕುಂಭ ರಾಶಿಯ ಮಾಸಿಕ ಜಾತಕದ ಪ್ರಕಾರ ಜೂನ್ ತಿಂಗಳಿನಲ್ಲಿ ಅವರಿಗೆ ಹೆಚ್ಚು ಅನುಕೂಲತೆ ಇದೆ. ಕುಂಭ ರಾಶಿಯವರ ಜೀವನದ ಬಗ್ಗೆ ನೋಡುವುದಾದರೆ ಉದ್ಯೋಗದಲ್ಲಿರುವ ಕುಂಭ ರಾಶಿಯವರಿಗೆ ತಿಂಗಳ ಮೊದಲ ಅನುಕೂಲವಿದೆ. ಹತ್ತನೆ ಮನೆಯಲ್ಲಿ ಅಧಿಪತಿ ಮಂಗಳ ಮೇಷ ರಾಶಿಯಲ್ಲಿ ಉಪಸ್ಥಿತನಿದ್ದು ಕುಂಭ ರಾಶಿಯವರಿಗೆ ಉತ್ತಮ ಸಂದರ್ಭಗಳು ಬರುವಂತೆ ಮಾಡುತ್ತಾನೆ ಇದರಿಂದ ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕುಂಭ ರಾಶಿಯ ವ್ಯಾಪಾರಸ್ಥರಿಗೆ ಜೂನ್ ತಿಂಗಳು ಪೂರ್ತಿ ಶನಿ ಅಂಶವು 7ನೆ ಮನೆಯ ಮೇಲೆ ಇರುವುದರಿಂದ ಹಿಮ್ಮುಖ ಸ್ಥಿತಿಯಲ್ಲಿದೆ ಹೀಗಾಗಿ ವ್ಯವಹಾರವನ್ನು ಪ್ರಗತಿಯತ್ತ ಕೊಂಡೊಯ್ಯುವ ಹಾದಿಯಲ್ಲಿ ಇರುತ್ತಾರೆ.

ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಸೂರ್ಯ ಹಾಗೂ ಶುಕ್ರ ಐದನೆ ಮನೆಯಲ್ಲಿರುತ್ತಾರೆ ಇದರಿಂದ ಅಧ್ಯಯನದತ್ತ ಪ್ರೋತ್ಸಾಹಿಸುತ್ತದೆ ಅಲ್ಲದೆ ಮುಂದಿನ ವಿದ್ಯಾಭ್ಯಾಸಕ್ಕೂ ಪ್ರೇರಣೆ ನೀಡುತ್ತದೆ. ಜೂನ್ ತಿಂಗಳಿನಲ್ಲಿ ಕುಂಭ ರಾಶಿಯ ಕೌಟುಂಬಿಕ ಜೀವನವನ್ನು ನೋಡುವುದಾದರೆ ಕುಟುಂಬದಲ್ಲಿ ಸಂತೋಷ ಇರುತ್ತದೆ.

ಕುಂಭ ರಾಶಿಯ ಪ್ರೀತಿಯ ವಿಚಾರವನ್ನು ನೋಡುವುದಾದರೆ ಇಬ್ಬರು ಒಟ್ಟಿಗೆ ಸಮಯವನ್ನು ಕಳೆಯಲು ಅನುಕೂಲವಾಗುತ್ತದೆ. ಅಹಂಕಾರ ತೋರಿದಾಗ ಇಬ್ಬರ ನಡುವೆ ಮನಸ್ತಾಪ ಬರಬಹುದು ಅದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಜೂನ್ ತಿಂಗಳಲ್ಲಿ ಏಳನೆ ಮನೆಯಲ್ಲಿ ಪ್ರಭಾವಿತ ಗ್ರಹ ಶನಿ ಇರುತ್ತಾನೆ ಇದು ವೈವಾಹಿಕ ಸಂಬಂಧದ ಮೇಲೆ ಅನುಕೂಲ ಪರಿಣಾಮವಾಗುತ್ತದೆ. ಶಿಸ್ತು ಬದ್ಧ ಜೀವನ ನಡೆಸುವಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವಂತೆ ಶನಿ ಮಾಡುತ್ತಾನೆ.

ಕುಂಭ ರಾಶಿಗೆ ನಾಲ್ಕನೆ ಮನೆಯಲ್ಲಿ ಗುರು ಇರುವುದರಿಂದ ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಚರ, ಸ್ಥಿರ ಆಸ್ತಿಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಾನೆ. ಕುಂಭ ರಾಶಿಯಲ್ಲಿ ಜನಿಸಿದವರು ಜೂನ್ ತಿಂಗಳಿನಲ್ಲಿ ಸಂತೋಷವಾಗಿ ಜೀವನ ನಡೆಸುತ್ತಾರೆ. ಮೂರನೆ ಮನೆಯಲ್ಲಿರುವ ಮಂಗಳನು ಸಂಪೂರ್ಣವಾಗಿ ಶನಿ ಗ್ರಹದೊಂದಿಗೆ ಗೋಚರಿಸುವುದರಿಂದ ಕುತ್ತಿಗೆ ಹಾಗೂ ಗಂಟಲು ನೋವು ಕಾಣಿಸುತ್ತದೆ.

ಆರೋಗ್ಯದ ವಿಷಯವಾಗಿ ಜೂನ್ ತಿಂಗಳಿನಲ್ಲಿ ಮಿಶ್ರಮ ಫಲ ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಶೀತ, ಕೆಮ್ಮು ಜ್ವರ ನೆಗಡಿ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪ್ರತಿ ಶನಿವಾರದಂದು ಕುಂಭ ರಾಶಿಯಲ್ಲಿ ಜನಿಸಿದವರು ಹನುಮಾನ್ ಚಾಲೀಸಾ ಹಾಗೂ ಶನಿ ಸ್ತೋತ್ರವನ್ನು ಪಠಣ ಮಾಡಬೇಕು. ಕುಂಭ ರಾಶಿಯಲ್ಲಿ ಜನಿಸಿದವರು ತಮ್ಮ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಜನ್ಮ ಜಾತಕವನ್ನು ನುರಿತ ತಜ್ಞರ ಬಳಿ ಪರಿಶೀಲಿಸಿಕೊಳ್ಳುವುದು ಉತ್ತಮ. ಈ ಮಾಹಿತಿಯನ್ನು ತಪ್ಪದೆ ಕುಂಭ ರಾಶಿಯಲ್ಲಿ ಜನಿಸಿದವರಿಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!