ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಧನಸ್ಸು ರಾಶಿಯವರ ಜುಲೈ ತಿಂಗಳಿನ ಮಾಸ  ಭವಿಷ್ಯವನ್ನು ತಿಳಿಯೋಣ.

ಧನು ರಾಶಿಯ ಜನರು ಹೆಚ್ಚಾಗಿ ಪ್ರಯಾಣ ಪ್ರವಾಸ ಮಾಡುವರು. ಪ್ರೀತಿಯ ವಿಚಾರದಲ್ಲಿ ಸಾಕಷ್ಟು ಮಟ್ಟದ ಏರುಪೇರು ಕಂಡವರಲ್ಲಿ ಈ ರಾಶಿಯವರು ಕೂಡ ಇರುವರು. ಅರ್ಥ ಮಾಡಿಕೊಳ್ಳುವ ಗುಣವನ್ನು ಉಳ್ಳ ಜನರು ಧನಸ್ಸು ರಾಶಿಯವರು.ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ ಸಹ ಅದನ್ನೆಲ್ಲ ಮೆಟ್ಟಿ ನಿಲ್ಲುವ ಸಾಮರ್ಥ್ಯ ಧನು ರಾಶಿಯ ಜನರಿಗೆ ಇರುತ್ತದೆ. ನಂಬಿಕೊಂಡು ಬಂದ ಜನರಿಗೆ ಎಂದಿಗೂ ಈ ರಾಶಿಯವರು ಮೋಸ ಮಾಡುವುದಿಲ್ಲ.

ಬೇರೆಯವರ ನೋವಿಗೆ ಸ್ಪಂದಿಸುವ ಗುಣ ಹೊಂದಿರುವವರು ಈ ರಾಶಿಯ ಜನರು. ಆರ್ಥಿಕ ವಿಚಾರದಲ್ಲಿ ಅದರಲ್ಲಿ ಕೂಡ, ಹಣದ ವಿಚಾರವಾಗಿ ಸ್ವಲ್ಪ ಗೊಂದಲಗಳು ಎದುರಾಗಬಹುದು. ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಹೆಚ್ಚಾಗಿ ಇರುತ್ತದೆ. ಹಣವನ್ನು ಇತಿಮಿತಿಯಲ್ಲಿ ಖರ್ಚು ಮಾಡಬೇಕು. ಧನಸ್ಸು ರಾಶಿಯ ಜನರಿಗೆ ಜುಲೈ ತಿಂಗಳಲ್ಲಿ ಗಣ್ಯ ವ್ಯಕ್ತಿಗಳ ಭೇಟಿಯಿಂದ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗುತ್ತದೆ.

ಧನು ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಮ್ಮಿ ಆಗುತ್ತದೆ. ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಗಮನ ಕೊಡಬೇಕು. ಸಾಕಷ್ಟು ತೊಂದರೆಗಳಲ್ಲಿ ಸಿಲುಕಿಕೊಂಡಿದ್ದರು ಸಹ ಯಾವುದೋ, ಒಂದು ಮೂಲದಿಂದ ಹಣ ಸಿಗುತ್ತದೆ ಅದರಿಂದ, ತೊಂದರೆಗಳನ್ನು ಪರಿಹಾರ ಮಾಡಿಕೊಳ್ಳಲು ಸುಲಭವಾಗುತ್ತದೆ. ಜುಲೈ ತಿಂಗಳಿನಲ್ಲಿ ಧನಸ್ಸು ರಾಶಿಯವರು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೇ. ಇದರಿಂದ, ವ್ಯಾಪಾರ ವ್ಯವಹಾರದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಹೊಸತನ ತರುವುದರಿಂದ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು.

ನೂತನ ಕಾರ್ ಖರೀದಿ ಮಾಡುವ ಯೋಗ, ನೂತನ ಮನೆ ನಿರ್ಮಾಣ ಮಾಡುವ ಅಥವಾ ಖರೀದಿ ಮಾಡುವ ಯೋಗ ಸಹ ಇದೆ ಇದರ ಜೊತೆಗೆ ನೂತನ ಭೂಮಿ ಖರೀದಿ ಮಾಡುವ ಸಾಧ್ಯತೆ ಕೂಡ ಇದೆ ಧನಸ್ಸು ರಾಶಿಯ ಜನರಿಗೆ. ಬೆಲೆಬಾಳುವ ವಸ್ತುಗಳು, ಚಿನ್ನ, ಬೆಳ್ಳಿಯನ್ನು ಖರೀದಿ ಮಾಡುವ ಯೋಗ ಸಹ ಈ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ಅದರಲ್ಲೂ ಆಹಾರ ಪದ್ಧತಿಯನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ.

ವಾಕಿಂಗ್, ವ್ಯಾಯಾಮ, ಯೋಗ ಇದೆಲ್ಲವನ್ನು ಪ್ರತಿನಿತ್ಯ ಜೀವನದಲ್ಲಿ ಅಡವಳಿಕೆ ಮಾಡಿಕೊಳ್ಳುವುದರಿಂದ, ಆರೋಗ್ಯ ಸ್ಥಿತಿ ಇನ್ನಷ್ಟು ಉತ್ತಮವಾಗುತ್ತದೆ. ಕೆಲವು ಧನುಸ್ಸು ರಾಶಿಯ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆ ಬಾಧಿಸಬಹುದು ಆದ್ದರಿಂದ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.
ಅನಾವಶ್ಯಕವಾದ ವಾದ ವಿವಾದಗಳನ್ನು ಧನು ರಾಶಿಯ ಜನರು ಜುಲೈ ತಿಂಗಳಿನಲ್ಲಿ ಕಾಣುವ ಸಾಧ್ಯತೆ ಇದೆ. ಬೇರೆಯವರ ವಿಚಾರವಾಗಿ ಮಧ್ಯವರ್ತಿಯಾಗಿ ಹೋಗುವುದು ತಪ್ಪು. ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸ ಮಾಡುವ ಧನು ರಾಶಿಯ ಜನರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ಜೊತೆಗೆ ಹಣದ ವಿಚಾರವಾಗಿ ಅಭಿವೃದ್ಧಿಯನ್ನು ಕಾಣಬಹುದು.

ಪರಿಹಾರಗಳು :-ಶ್ರೀ ಮಹಾವಿಷ್ಣುವಿಗೆ ತುಳಸಿಯನ್ನು ಅರ್ಪಣೆ ಮಾಡಬೇಕು, ಶ್ರೀರಾಮನಿಗೆ ಸೇವೆ ಮಾಡಬೇಕು ಜೊತೆಗೆ ಶ್ರೀ ರಾಮನ ಕಥೆಯನ್ನು ಕೇಳಬೇಕು, ದುರ್ಗಾದೇವಿಗೆ ತುಪ್ಪದ ದೀಪವನ್ನು ಬೆಳಗಿಸಬೇಕು. ಇದರಿಂದ, ಕೆಟ್ಟ ಫಲಗಳು ದೂರವಾಗಿ ಒಳ್ಳೆಯ ಫಲಗಳು ಲಭಿಸುತ್ತದೆ.ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

By

Leave a Reply

Your email address will not be published. Required fields are marked *