ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ತುಲಾ ರಾಶಿಯವರ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ ಬನ್ನಿ.

ರವಿ ಗ್ರಹ ತುಲಾ ರಾಶಿಯಿಂದ ಕ್ರಮವಾಗಿ 12 ನೇ ಮನೆಯಲ್ಲಿ ಮತ್ತು 1 ನೇ ಮನೆಯಲ್ಲಿ, ಮಂಗಳ ಗ್ರಹ 9 ನೇ ಮನೆಯಲ್ಲಿ, ಬುಧ ಗ್ರಹ 12 ನೇ ಮನೆಯಲ್ಲಿ ಮತ್ತು 1 ನೇ ಮನೆಯಲ್ಲಿ, ಗುರು ಗ್ರಹ 8 ನೇ ಮನೆಯಲ್ಲಿ, ಶುಕ್ರ ಗ್ರಹ 1 ನೇ ಮನೆಯಲ್ಲಿ ಮತ್ತು 2 ನೇ ಮನೆಯಲ್ಲಿ, ಶನಿ ಗ್ರಹ 5 ನೇ ಮನೆಯಲ್ಲಿ, ರಾಹು ಗ್ರಹ 6 ನೇ ಮನೆಯಲ್ಲಿ ಮತ್ತು ಕೇತು ಗ್ರಹ 12 ನೇ ಮನೆಯಲ್ಲಿ ಸಂಚಾರ ಮಾಡುತ್ತವೆ.

ಸೂರ್ಯ ಗ್ರಹ ನೀರಿನ ವ್ಯಾಪಾರ ಮತ್ತು ಅದಕ್ಕೆ ಸಂಬಂಧಪಟ್ಟ ವಸ್ತುಗಳ ವ್ಯಾಪಾರ ಮಾಡುವ ವರ್ತಕರಿಗೆ ಒಳ್ಳೆಯ ಫಲ ಮತ್ತು ಲಾಭ ಸಿಗುತ್ತದೆ. ತುಲಾ ರಾಶಿಯ ಜನರಿಗೆ ತಂದೆಯಿಂದ ಸಹಕಾರ ಸಿಗುತ್ತದೆ, ವ್ಯಾಪಾರಕ್ಕೆ ಬೇಕಾಗುವ ದುಡ್ಡಿನ ವ್ಯವಸ್ಥೆ ಎಲ್ಲಾ ಸಿಗುತ್ತದೆ.

ಮಂಗಳ ಗ್ರಹ ಸಂತಾನ ಚಿಂತೆಯನ್ನು ತೋರಿಸಿ ಕೊಡುವನು, ವಿವಾಹ ವಿಳಂಬತೆಯನ್ನು ತೋರಿಸಿ ಕೊಡುವನು. ಬುಧ ಗ್ರಹ ವಿದ್ಯೆಯಲ್ಲಿ ಸ್ವಲ್ಪ ಹಿನ್ನಡೆಯನ್ನು ಸೂಚಿಸುತ್ತದೆ. ತುಲಾ ರಾಶಿಯವರ ಮಕ್ಕಳ ವಿದ್ಯಾಭ್ಯಾಸ ಮತ್ತು ತುಲಾ ರಾಶಿಯವರ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಕಷ್ಟ ಎದುರಾಗಬಹುದು ಅಕ್ಟೋಬರ್ ತಿಂಗಳಿನ ಆರಂಭದಲ್ಲಿ. ಶಾಲಾ ಕಾಲೇಜಿನಲ್ಲಿ ಕೆಲಸ ಮಾಡುವ ಈ ರಾಶಿಯ ಜನರಿಗೆ ಬುಧ ಗ್ರಹ ಒಳ್ಳೆಯ ಫಲ ತಂದುಕೊಡುವನು. ತುಲಾ ರಾಶಿ ವಿದ್ಯಾರ್ಥಿಗಳಿಗೆ ಗುರು ಹಿರಿಯರಿಂದ ಪ್ರಶಂಸೆ ಸಿಗುತ್ತದೆ. ಗುರು ಬಲ ತುಲಾ ರಾಶಿಯ ಜನರಿಗೆ ಕಮ್ಮಿ ಇರುತ್ತದೆ.

ತುಲಾ ರಾಶಿಯವರ ಸಾಂಸಾರಿಕ ಜೀವನದಲ್ಲಿ ಏರು ಪೇರು, ಪ್ರಯಾಣದ ದೆಸೆಯಿಂದ ಮನೆಯಿಂದ ದೂರ ಇರಬೇಕು. ಅಕ್ಟೋಬರ್ ತಿಂಗಳಿನ ಅಂತ್ಯದಲ್ಲಿ ಒಳ್ಳೆಯ ಫಲ ಸಿಗುತ್ತದೆ, ಸಂಸಾರದಲ್ಲಿ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ.ಅಲಂಕಾರಿಕ ವಸ್ತುಗಳನ್ನು ವ್ಯಾಪಾರ ಮಾಡುವ ಅಂಗಡಿಗಳು, ಸ್ತ್ರೀ ಸಂಬಂಧಿ ಬಟ್ಟೆ ವ್ಯಾಪಮಾಡುವ ಜನರಿಗೆ ಹಾಗೂ ಸ್ತ್ರೀ ಸಂಬಂಧಿ ದ್ರವ್ಯ ವ್ಯಾಪಾರ ಮಾಡುವ ಜನರಿಗೆ ಉತ್ತಮ ಲಂಭಾಂಶ ಸಿಗುತ್ತದೆ.

ಶನಿ ಗ್ರಹದ ಪ್ರಭಾವದಿಂದ ಸ್ವಲ್ಪ ಕಾರ್ಯ ಕ್ಷೇತ್ರದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಮನಸ್ಸು ಮತ್ತು ಶ್ರಮದಿಂದ ಏನೇ ಮಾಡಿದರು ಎಲ್ಲವನ್ನು ಮೆಟ್ಟಿ ನಿಲ್ಲುವ ಸಾಧ್ಯತೆ ಇರುತ್ತದೆ. 6 ನೇ ಮನೆಯಲ್ಲಿ ಇರುವ ರಾಹು ಗ್ರಹ ಸಂತಾನ ಚಿಂತೆಯನ್ನು ಮತ್ತು ಸರ್ಪ ಸಂಬಂಧಿ ದೋಷಗಳನ್ನು ಕೂಡ ಕೊಡುವನು. ಕೇತು ಗ್ರಹ ಕೂಡ ಸಂತಾನ ಪ್ರಾಪ್ತಿಗೆ ಕಾರಣ ಮತ್ತು  ಅದರಿಂದ, ಕೂಡ ಸ್ವಲ್ಪ ಕೆಟ್ಟ ಫಲಗಳು ಇರುವ ಕಾರಣ ಸರ್ಪ ಸಂಬಂಧಿ ಪೂಜೆಗಳನ್ನು ಮಾಡಬೇಕು.

ಆಶ್ಲೇಷ ಬಲಿ ಪೂಜೆ ಮಾಡಿಸಿದರೆ ಮಕ್ಕಳ ಪ್ರಾಪ್ತಿ   ಯೋಗ ಸಿಗುತ್ತದೆ.
ಶುಭ ದಿನಗಳು :- 8, 15, 25, 30.ಶುಭ ಬಣ್ಣ :- ಬಿಳಿ ಬಣ್ಣ, ಬಿಳಿ ಮಿಶ್ರಿತ ಕಪ್ಪು ಬಣ್ಣ, ಹಳದಿ ಬಣ್ಣ.
ಪರಿಹಾರ :-ವಿಷ್ಣು ಸರಸ್ರನಾಮ ಪಾರಾಯಣ ಮಾಡಬೇಕು ಮತ್ತು ವಿಷ್ಣು ದೇವರ ಪೂಜೆ ಮಾಡಬೇಕು. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ. ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

 ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!