ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಷಭ ರಾಶಿಯವರ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.
ಅಕ್ಟೋಬರ್ 17 ನೇ ತಾರೀಖಿನ ತನಕ ಸೂರ್ಯ ಗ್ರಹ ಪಂಚಮ ಭಾವದಲ್ಲಿ ಸಂಚಾರ ಮಾಡುವನು, ನಂತರ 6 ನೇ ಭಾವಕ್ಕೆ ಸಂಚಾರ ಮಾಡುವನು. ಸಂಕ್ರಮಣಕ್ಕೆ ಮುಂಚೆ ಒಂದು ರೀತಿಯಾದರೆ ಸಂಕ್ರಮಣದ ನಂತರ ಒಂದು ರೀತಿ. ಕುಜ ಗ್ರಹ ಕಳತ್ರ ಮತ್ತು ವ್ಯಯ ಭಾವದ ಅಧಿಪತಿಯಾಗಿ ಅಕ್ಟೋಬರ್ 20 ನೇ ತಾರೀಖಿನ ತನಕ ಮಿಥುನ ರಾಶಿಯಲ್ಲಿ ಸಂಚಾರ ಮಾಡ್ತಾನೆ.
ಅಕ್ಟೋಬರ್ 20 ನೇ ತಾರೀಖಿನ ನಂತರ ನೀಚ ಸ್ಥಾನವಾದ ಕರ್ಕ ರಾಶಿಯಲ್ಲಿ ಕುಜ ಗ್ರಹ ಪ್ರವೇಶ ಮಾಡ್ತಾನೆ ಮತ್ತು ವೃಷಭ ರಾಶಿಗೆ ಶುಭ ಫಲ ಕೊಡುವನು. ರಾಶಿಯಾಧಿಪತಿ ಶುಕ್ರ ಗ್ರಹ ತಿಂಗಳ ಆರಂಭದ 12 ದಿನ 6 ನೇಯ ಭಾವದಲ್ಲಿ ಇರುವನು ಮತ್ತು ನಂತರ 7 ನೇ ಭಾವಕ್ಕೆ ಬರುವನು.
ಗುರು ಗ್ರಹ 5 ನೇ ಭಾವದಲ್ಲಿ ತಿಂಗಳ ಮೊದಲ 10 ದಿನ ಇದ್ದು ನಂತರ 6 ನೇ ಭಾವಕ್ಕೆ ಬರುವನು. ಸೂರ್ಯ ಗ್ರಹ ಸುಖಾಧಿಪತಿ ವೃಷಭ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳಿನ ಮೊದಲ 17 ದಿನ ಇರುವನು.
ವೃಷಭ ರಾಶಿಯ ಜನರು ಅವರ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವರು. ಮಕ್ಕಳ ವಿದ್ಯಾಭ್ಯಾಸ, ಮಕ್ಕಳನ್ನು ಉತ್ತಮ ಪ್ರಜೆಯಾಗಿ ಮಾಡಬೇಕು ಎನ್ನುವ ಭಾವನೆ ಇರುತ್ತದೆ. ವೃಷಭ ರಾಶಿಯವರಿಗೆ ಹೊಟ್ಟೆಯ ನೋವು ಕಾಡುವ ಸಾಧ್ಯತೆ ಇರುತ್ತದೆ ಅದಕ್ಕೆ, ಕಾರಣ ಗ್ಯಾಸ್ಟ್ರಿಕ್ ಟ್ರಬಲ್ ಮತ್ತು ಕೆಲವರಿಗೆ ಮಲಬದ್ಧತೆ ಕಾಡುವ ಸಾಧ್ಯತೆ ಇರುತ್ತದೆ. ತಂದೆಯ ಆರೋಗ್ಯದ ಬಗ್ಗೆ ವೃಷಭ ರಾಶಿಯ ಜನರು ಹೆಚ್ಚಾಗಿ ಗಮನ ಕೊಡಬೇಕು ಅವರಿಗೆ ಆರೋಗ್ಯ ಸಮಸ್ಯೆ ಭಾದೆ ಕೊಡಬಹುದು.
ಅವರಿಗೆ ಹೊಟ್ಟೆ ಉಬ್ಬರ, ಹೃದಯದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಅದರಿಂದ, ತಂದೆಯ ಆರೋಗ್ಯದ ದೃಷ್ಟಿಯಿಂದ ಅವರನ್ನು ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು. ಕೆಲವು ವೃಷಭ ರಾಶಿಯ ಜನರಿಗೆ ಯಂತ್ರ ಮಂತ್ರ ತಂತ್ರ ವಿದ್ಯೆ ಒಲಿಯುತ್ತದೆ, ಕೆಲವರಿಗೆ ಜೋತಿಷ್ಯ ಶಾಸ್ತ್ರ ಒಲಿಯುತ್ತದೆ, ತೀಕ್ಷ್ಣ ಬುದ್ದಿ ಮತ್ತು ಸುತ್ತುವ ಯೋಗ ಸಿಗುತ್ತದೆ. ಶಿವ ಪಾರ್ವತಿಯ ಕೃಪೆ ಈ ರೀತಿಯ ಜನರ ಮೇಲೆ ಇರುತ್ತದೆ.
ಸೂರ್ಯ ಗ್ರಹದ ದೆಸೆಯಿಂದ ಅತಿಯಾದ ಕೋಪ, ಅತಿಯಾದ ಜಗಳಗಂಟತನ ಬರಬಹುದು, ಸರ್ಕಾರದಿಂದ ಲಾಭ ಹಾಗೂ ಗೆಲುವು ಸಿಗುತ್ತದೆ. ಸಂಗಾತಿಯನ್ನು ವೃಷಭ ರಾಶಿಯ ಜನರು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಕೂಡ ಇರುತ್ತದೆ. ಶತ್ರು ನಾಶ, ರೋಗ ನಾಶ, ಸರ್ಕಾರದಿಂದ ಕೀರ್ತಿ ಪ್ರತಿಷ್ಠೆ ಎಲ್ಲಾ ಪ್ರಾಪ್ತಿಯಾಗುತ್ತದೆ. ವೃಷಭ ರಾಶಿಯ ಜನರ ಸೋದರ ಮಾವನಿಗೆ ಸ್ವಲ್ಪ ಕಷ್ಟ ಆಗುತ್ತದೆ. ಧನವಂತರಾಗುವ ಮತ್ತು ಗುಣವಂತರಾಗುವ ಯೋಗ ಸಹ ಇದೆ.
ವೃಷಭ ರಾಶಿಯ ಜನರ ಮೊಗದಲ್ಲಿ ತೇಜಸ್ಸು ಹೆಚ್ಚಾಗುತ್ತದೆ, ವಾಹನ ಸೌಖ್ಯ ಕೂಡ ಸಿಗುತ್ತದೆ. ಜಂಟಿ ವ್ಯವಹಾರ ಮಾಡುವ ವಿಚಾರದಲ್ಲಿ ಸ್ವಲ್ಪ ಹಾನಿಯಾಗಬಹುದು. ಸಂಗಾತಿಗೆ ಧನ ಹಾನಿ ಮತ್ತು ಮಾನ ಹಾನಿ ಆಗುವ ಸಾಧ್ಯತೆ ಇದೆ.ಹೆಚ್ಚಿನ ವಾದ ವಿವಾದಗಳಿಂದ ದೂರ ಉಳಿಯಬೇಕು, ನಾಲಿಗೆ ಮೇಲೆ ಕುಜ ಗ್ರಹ ಇರುವ ಕಾರಣ ಹೆಚ್ಚಿನ ಮೌನದ ಮೊರೆ ಹೋಗುವುದು ಒಳ್ಳೆಯದು. ಶಶ ಯೋಗದ ಫಲಗಳು ನಿಧವಾಗಿ ಪ್ರಾಪ್ತಿ ಆಗುತ್ತದೆ.
ಪರಿಹಾರ :-ಸರ್ಪ ಆರಾಧನೆ ಮಾಡಬೇಕು. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ. ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493