2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಧನಸ್ಸು ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024ರಲ್ಲಿ ಆಗಸ್ಟ್ ತಿಂಗಳ ಧನು ರಾಶಿಯ ಫಲ ನೋಡಬೇಕಾದರೆ ಗ್ರಹಗತಿಗಳ ಚಲನೆಯನ್ನು ನೋಡಲೆಬೇಕು. ರವಿಯು ಎಂಟು ಹಾಗೂ ಒಂಭತ್ತನೆ ಮನೆಯಲ್ಲಿ, ಮಂಗಳನು ಆರನೆ ಮನೆಯಲ್ಲಿ, ಬುಧ ಗ್ರಹನು ಒಂಭತ್ತನೆ ಮನೆಯಲ್ಲಿ, ಗುರು ಆರನೆ ಮನೆಯಲ್ಲಿ ಶುಕ್ರನು ಒಂಭತ್ತನೆ ಮನೆಯಲ್ಲಿ ಶನಿ ಗ್ರಹನು ಮೂರನೆ ಮನೆಯಲ್ಲಿ ರಾಹು ಕೇತು ನಾಲ್ಕು ಹಾಗೂ ಹತ್ತನೆ ಮನೆಯಲ್ಲಿ ಸಂಚಾರ ಮಾಡುತ್ತಾರೆ. ರವಿ ವಿಶೇಷವಾಗಿ ಎಂಟನೆ ಮನೆ ಅರಿಷ್ಟ ಸ್ಥಾನ ಭಯಪಡಿಸುವಂತಹ ರೋಗವು ಬರಬಹುದು ಹೀಗಾಗಿ ಅದಕ್ಕೆ ಬೇಕಾದ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಮನೆಯಲ್ಲಿ ಕಲಹಗಳು ಉಂಟಾಗಬಹುದು ಹೀಗಾಗಿ ಮೌನದಿಂದ ಇದ್ದು ಕಲಹಗಳಿಂದ ದೂರ ಇರಬೇಕು. ರವಿ ಒಂಭತ್ತನೆ ಮನೆಯಲ್ಲಿದ್ದಾಗ ಅಪಾಯಗಳನ್ನು ಸೂಚಿಸುತ್ತಿದ್ದಾನೆ ವಾಹನ ಅಪಾಯ ನೀರಿನ ಅಪಾಯ ಬೆಂಕಿ ಅಪಾಯಗಳಾಗುವ ಸಂಭವವಿದೆ.

ಮಂಗಳ ಗ್ರಹವು ಆರನೆ ಮನೆಯಲ್ಲಿರುವಾಗ ಸುವರ್ಣ ತಾಮ್ರ ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಾಗುತ್ತದೆ. ಧನಸ್ಸು ರಾಶಿಯ ಸ್ತ್ರೀಯರಿಗೆ ಮಂಗಳನಿಂದ ಋತುಸ್ರಾವವಾದಾಗ ಹೆಚ್ಚು ರಕ್ತಸ್ರಾವವಾಗುವ ಸಾಧ್ಯತೆ ಇದೆ, ಕುಜ ದೋಷ ಇರುವವರು ಪರಿಹಾರ ಮಾಡಿಕೊಳ್ಳಬೇಕು ಕುಜ ದೋಷ ಇರುವವರಿಗೆ ವಿವಾಹ ತಡವಾಗುತ್ತದೆ. ಬುಧನು ಒಂಭತ್ತನೆ ಮನೆಯಲ್ಲಿರುವುದರಿಂದ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ವಿಘ್ನ ಹಾಗೂ ವಿದ್ಯೆ ಕಲಿಯಲು ಬೇಕಾಗುವ ವಾತಾವರಣ ಸಿಗದೆ ಇರಬಹುದು, ವಿದ್ಯೆಗೆ ತಕ್ಕಂತೆ ಕೆಲಸ ಸಿಗುವುದಿಲ್ಲ. ಗುರು ಆರನೆ ಮನೆಯಲ್ಲಿ ಇರುವುದರಿಂದ ಅಸಂತೋಷವನ್ನು ಕೊಡುತ್ತಾನೆ, ಮಿತ್ರ ಕಲಹ ಕಂಡು ಬರುತ್ತದೆ ಮಿತ್ರರಿಂದ ನಷ್ಟವು ಉಂಟಾಗುತ್ತದೆ. ಶುಕ್ರನು ಒಂಭತ್ತನೆ ಮನೆಯಲ್ಲಿ ಇರುವುದರಿಂದ ಧರ್ಮ ಕಾರ್ಯಗಳನ್ನು ಮಾಡಬಹುದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಹೀಗೆ ಪೂಜೆಗಳನ್ನು ಮಾಡುತ್ತಾರೆ, ಈ ಕಾರ್ಯದಿಂದ ಶುಭವನ್ನು ಶುಕ್ರ ಕೊಡುತ್ತಾನೆ.

ಶನಿ ಮೂರನೆ ಮನೆಯಲ್ಲಿರುವುದರಿಂದ ಸಾಹಸ ಕಾರ್ಯಗಳನ್ನು ಮಾಡಿಸುತ್ತಾನೆ ಹಾಗೂ ಅದರಲ್ಲಿ ಜಯ ಕೊಡುತ್ತಾನೆ. ರಾಹು ಗ್ರಹದ ಚಲನೆಯಿಂದ ಭೂ ವಿವಾದವನ್ನು ಷೇರು ಪೇಟೆ ನಷ್ಟವನ್ನು ಉಂಟುಮಾಡುತ್ತದೆ ಹೀಗಾಗಿ ಷೇರು ಮಾರ್ಕೆಟ್ ನಲ್ಲಿ ಜಾಗ್ರತೆ ವಹಿಸಬೇಕು. ಭೂ ವಿವಾದಕ್ಕೆ ಧಾವೆ ಹೂಡುವವರು ಅಥವಾ ಧಾವೆ ಇದ್ದವರು ಮುಂದಿನ ತಿಂಗಳಿಗೆ ದೂಡುವುದು ಒಳ್ಳೆಯದು. ಕೇತುವಿನಿಂದ ನೂತನ ಆವಿಷ್ಕಾರಗಳು ಧನು ರಾಶಿಯ ವಿಜ್ಞಾನಿಗಳ ಮೇಲೆ ಕೇತು ಗ್ರಹದ ಅನುಗ್ರಹ ಇರುತ್ತದೆ ಇದರಿಂದ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತದೆ ಹಾಗೂ ವೃತ್ತಿ ಬದಲಾವಣೆ ಇರುತ್ತದೆ ಹೊಸ ಉದ್ಯೋಗ ಲಭ್ಯವಾಗುತ್ತದೆ 1,11,16 ಹಾಗೂ 24 ನೆ ತಾರೀಖು ಧನು ರಾಶಿಯವರಿಗೆ ಶುಭ ತರುತ್ತದೆ. ಧನು ರಾಶಿಯವರಿಗೆ ಉತ್ತಮವಾದ ಬಣ್ಣ ಹಳದಿ, ಪಚ್ಚೆ ಹಾಗೂ ಬಿಳಿ ಬಣ್ಣವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಎಲ್ಲರಿಗೂ ಒಳ್ಳೆಯದಾಗಲಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!