ಮೇಷರಾಶಿ: ಈ ದಿನ ಮೇಷ ರಾಶಿಯವರ ವ್ಯಕ್ತಿತ್ವದಲ್ಲಿ ಮತ್ತು ಧನಲಾಭದಲ್ಲಿ ಹೊಸ ಅನುಭವ ಮತ್ತು ಅದೃಷ್ಟವನ್ನು ಪರಿಶೀಲಿಸಿರುವುದು ಒಂದುಹೊಸ ಅನುಭವ. ಬಟ್ಟೆ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಿದೆ. ನೀವು ಅಂದು ಕೊಂಡ ಕೆಲಸ ನೆರವೇರುವುದು.
ವೃಷಭ ರಾಶಿ: ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಿ ಸಮಸ್ಯೆಗಳು ಹೊರಗೆ ಬಾರಲಿವೆ. ಲೆಕ್ಕ ಪರಿಶೋಧಕರ ಕೆಲಸದಲ್ಲಿ ತೃಪ್ತಿಯಿದೆ. ಸ್ವತ್ತು ವಿವಾದ ರಾಜಿ ಸಂಧಾನದ ಮೂಲಕ ಹೊರಗೆ ಬಾರಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.
ಮಿಥುನ ರಾಶಿ: ಸೃಜನಶೀಲತೆಯನ್ನು ಪ್ರದರ್ಶಿಸಲು ಅನೇಕ ಅವಕಾಶಗಳು ಒದಗಿಬರಲಿವೆ. ಮಾನಸಿಕ ಸ್ಥೈರ್ಯ ದೃಢವಾಗಿದೆ. ಹಲವು ಕಾರಣಗಳು ಸ್ನೇಹಿತರ ಮಾರ್ಗದರ್ಶನ ಹಾಗು ಬೆಂಬಲ ಬೇಕಾಗುತ್ತದೆ.

ಕರ್ಕಾಟಕರಾಶಿ: ನೀವು ಈ ದಿನ ವ್ಯವಹಾರಗಳಲ್ಲಿ ಯಶಸ್ವಿಯಾಗಿ ಸಾದಿಸಲಿದ್ದೀರಿ. ಮನೆಯ ಕೆಲವು ಕೆಲಸಗಳಿಗೆ ಹಣ ಖರ್ಚುಮಾಡಬೇಕಾಗುತ್ತದೆ. ಹಿರಿಯರ ಆಶೀರ್ವಾದ ಪಡೆದು ಕೆಲಸ ಪ್ರಾರಂಭಿಸಿದರೆ ಜಯ ನಿಮ್ಮ ಹತ್ತಿರವೇ ಇರುತ್ತದೆ.
ಸಿಂಹರಾಶಿ: ಕುಟುಂಬದ ವಿಷಯದಲ್ಲಿ ಹೆಚ್ಚು ಸಂತೋಷವಾಗುವ ಸಂಭವವಿದೆ. ಪ್ರೀತಿ ಪಾತ್ರರನ್ನು ಹೊಂದಿರುವುದರಿಂದ ಹೊಸ ಯೋಜನೆಗಳನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ನಿರ್ಣಯ ವಿಚಾರಣೆ ಮಾಡುವಾಗ ಧೈರ್ಯದಿಂದ ಇರಬೇಕು.
ಕನ್ಯಾ ರಾಶಿ: ಆರ್ಥಿಕ ಸಮಸ್ಯೆಗಳನ್ನು ಎದುರಿಸುವಾಗ ಸಹೋದರರ ಅಥವಾ ಸಂಬಂಧಿತರ ಸಹಾಯವನ್ನು ಕೇಳುವುದು ಅತ್ಯಂತ ಆವಶ್ಯಕ. ಸೋದರ ಮಾವನ ಸಲಹೆಯನ್ನು ಪಾಲಿಸಿ. ದೇಹದಲ್ಲಿನ ಉಷ್ಣಾಂಶದ ವೃದ್ಧಿಯಿಂದ ದಂತಚಿಕಿತ್ಸೆ ಆವಶ್ಯಕವಾಗಬಹುದು.
ತುಲಾ ರಾಶಿ: ನಿಮ್ಮ ಶಕ್ತಿಯು ಪ್ರಕಟವಾಗುತ್ತದೆ, ಅದು ಅಪೂರ್ವ ಸಮಾಗಮಕ್ಕೆ ಆಹ್ವಾನಿಸುತ್ತದೆ. ಹಾಲು ಮಾರಾಟಗಾರರಿಗೆ ಲಾಭವಾಗಿದೆ. ಹೊಸ ನಿಟ್ಟಿನಲ್ಲಿ ಹಣ ಹೂಡುವುದು ಆವಶ್ಯಕವಿದೆ, ಇದಕ್ಕೆ ಪರಿಶೀಲನೆ ಅತ್ಯಗತ್ಯವಾಗಿದೆ.
ವೃಶ್ಚಿಕರಾಶಿ: ವೃಶ್ಚಿಕ ರಾಶಿಯವರು ನಂಬಿಕಸ್ಥರಿಂದ ಮೋಸದ ಕೃತ್ಯಗಳು ನಡೆಯುವ ಸಂದರ್ಭಗಳನ್ನು ಗಮನಿಸಬೇಕು. ವ್ಯವಹಾರಗಳ ಬಗ್ಗೆ ವಿಶೇಷ ಪರಿಶೀಲನೆ ನಡೆಸುವುದು ಅತ್ಯಂತ ಆವಶ್ಯಕವಾಗಿದೆ. ಅಂತಿಮವಾಗಿ, ಶತ್ರುಗಳ ಬಲೆಗೆ ಬೀಳದಂತೆ ಸತತ ಎಚ್ಚರವಹಿಸಬೇಕು.
ಧನುರಾಶಿ: ವೃತ್ತಿಯ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸುವುದು ಅತ್ಯಂತ ಮುಖ್ಯವಾಗಿದೆ. ಚಿನ್ನದ ಮೇಲೆ ಧನ ಹೂಡಿಕೆಯಲ್ಲಿ ಲಾಭವಿದೆ. ಬಾಲ ಕಲಾವಿದರಿಗೆ ಹೆಸರು ಬರಬಹುದು. ದ್ವಿಚಕ್ರ ವಾಹನಗಳ ವ್ಯಾಪಾರಿಗಳಿಗೆ ಉತ್ತಮ ಮಾರಾಟು ಸಾಧ್ಯವಾಗಬಹುದು.
ಮಕರರಾಶಿ: ಚರ್ಚೆ ಮತ್ತು ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿ ಇರಿ. ಯಂತ್ರಗಳ ವಿಚಾರ ಅಂದರೆ ಮಿಷನ್ ಬಳಸಿ ಕೆಲಸ ಮಾಡುವವರು ಎಸಿಫ್ಸಿರವಾಗಿ ಕೆಲಸ ಮಾಡಬೇಕಾಗುತ್ತೆ. ಕುಟುಂಬ ಸದಸ್ಯರನ್ನು ದೂರಮಾಡಿಕೊಳ್ಳುವುದರಿಂದ ಮನಸ್ಸಿಗೆ ಕಷ್ಟವಾಗಬಹುದು.
ಕುಂಭ ರಾಶಿ: ಉತ್ತಮರು ಅಥವಾ ಸಾಧನೆ ಮಾಡಿರುವವರ ಸಹವಾಸ ಮಾಡುವುದು ಅಭಿವೃದ್ಧಿಗೆ ಸಹಾಯಮಾಡುತ್ತದೆ. ಸಕಲ ವಿಘ್ನಗಳನ್ನು ಕಳೆದುಕೊಳ್ಳಲು ಮಹಾಗಣಪತಿಯನ್ನು ಪೂಜಿಸಿ ಇದರಿಂದ ಅಭಿವೃದ್ಧಿಯಾಗಲಿದೆ.
ಮೀನ ರಾಶಿ: ಮನೆಯಲ್ಲಿನ ಹರ್ಷವು ಅನಿರೀಕ್ಷಿತ ಭೇಟಿಯಿಂದ ಹುಟ್ಟುತ್ತದೆ. ಹೂವಿನ ಬಿಸಿನೆಸ್ ಮಾಡುವವರಿಗೆ ಹಣ ಹೆಸರು ಒದಗಿಬರಲಿದೆ, ಕೆಲವರಲ್ಲಿ ಚರ್ಮದ ಸಂಬಂಧಿತ ಸಮಸ್ಯೆಗಳು ಪೀಡಿಸಬಹುದು. ಇನ್ನು ಪ್ರಯಾಣದ ವಿಚಾರದಲ್ಲಿ ಎಚ್ಚರವಾಗಿರಿ. ಹೊಸ ಪ್ರಯತ್ನಕ್ಕೆ ಕೈ ಹಾಕುವ ಮುನ್ನ ಜ್ಯೋತಿಷ್ಯ ಪಂಡಿತರ ಸಲಹೆ ಉತ್ತಮ